ಹಾಸ್ಟೆಲ್ಗಳಿಗೆ ಆಹಾರ ಸಾಮಗ್ರಿ ಸರಬರಾಜು ಟೆಂಡರ್ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು: ಸಿಎಂ

ಬೆಳಗಾವಿ: 14 :ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಯಾವುದೇ ಸಕರ್ಾರಿ ವಿದ್ಯಾಥರ್ಿ ನಿಲಯಗಳಿಗೆ ಆಹಾರ ಸಾಮಗ್ರಿಗಳ ಸರಬರಾಜು ಟೆಂಡರ್ ಪಾರದರ್ಶಕವಾಗಿ ಕಾಯ್ದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಇಂದು ತಿಳಿಸಿದ್ದಾರೆ.

ಶಾಸಕ ಕುಮಾರ್ ಬಂಗಾರಪ್ಪ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿ ಅವರು, ಅತ್ಯಂತ ಕಡಿಮೆ ಬೆಲೆಗೆ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡುವುದಾಗಿ ನಮೂದಿಸಿ ಟೆಂಡರ್ ಹಿಡಿಯಲು ಸಾಧ್ಯವಿಲ್ಲ. ಪಾರದರ್ಶಕ ಕಾಯ್ದೆ ಅಧಿನಿಯಮದ ನಿಯಮಾವಳಿಯಂತೆ ಟೆಂಡರ್ ನೀಡಲಾಗುವುದು ಎಂದು ಅವರು ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖಗರ್ೆ ಮಾತನಾಡಿ, ಈವರೆಗೆ ನಿದರ್ಿಷ್ಟ ಗುಣಮಟ್ಟದ ಆಹಾರ ಸಮಾಗ್ರಿಗಳನ್ನು ಸರಬರಾಜು ಮಾಡುವ ಸಂಬಂಧ ಟೆಂಡರ್ ನಿಯಮಗಳು ಇರಲಿಲ್ಲ. ಈ ಕಾರಣಕ್ಕಾಗಿಯೇ ವ್ಯತ್ಯಾಸಗಳು ಆಗುತ್ತಿದ್ದವು. ಇದೀಗ ನಿವೃತ್ತ ಹಿರಿಯ ಅಧಿಕಾರಿಯೊಬ್ಬರ ಅಧ್ಯಕ್ಷತೆಯಲ್ಲಿ 8 ಜನರ ಸುಧಾರಣಾ ಸಮಿತಿಯೊಂದನ್ನು ರಚಿಸಿ ಸುಧಾರಣಾ ಕ್ರಮಗಳನ್ನು ಕೋರಲಾಗಿದೆ. ಶೀಘ್ರವೇ ಸಮಿತಿಯು ವರದಿ ನೀಡಲಿರುವುದರಿಂದ ಮುಂದಿನ ವರ್ಷದಿಂದ ಈ ರೀತಿಯ ಸಮಸ್ಯೆ ಆಗುವುದಿಲ್ಲ ಎಂದು ವಿವರಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಬಹುವರ್ಷಗಳಿಂದ ಒಬ್ಬರೇ ಆಹಾರ ಸಾಮಗ್ರಿಗಳ ಸರಬರಾಜು ಟೆಂಡರ್ ಹಿಡಿಯುತ್ತಿದ್ದು ಕೇವಲ ಒಂದು ರೂ.ಗೆ ರಾಗಿ, 10 ರೂ ಗೋಧಿ ಸರಬರಾಜು ಮಾಡುವುದಾಗಿ ನಮೂದಿಸಿ ಟೆಂಡರ್ ಹಿಡಿಯಲಾಗುತ್ತಿದೆ ಎಂದು ಪ್ರಸ್ತಾಪಿಸಿದ್ದರು.

ಇದೇ ಸಂದರ್ಭದಲ್ಲಿ ಸದದ ಬಹುತೇಕ ಸದಸ್ಯರು ಈ ವಿಷಯದ ಮೇಲೆ ಬೆಳಕು ಚೆಲ್ಲಿದ್ದರು.