ಪರಮ ಪೂಜ್ಯ ಶ್ರೀ ಗೋವಿಂದದೇವ ಗುರುಜಿ ಮಹಾರಾಜರ ಆಶೀರ್ವಾದ ಪಡೆದ ಮಾಜಿ ಶಾಸಕ ಅನಿಲ ಬೆನಕೆ

Former MLA Anil Benake who received the blessings of Param Pujya Sri Govindeva Guruji Maharaj

ಬೆಳಗಾವಿ 25: ಎಂ.ಬಿ. ಜಿರ್ಲಿ ಜಿ (ಹಿರಿಯ ಬಿಜೆಪಿ ನಾಯಕ ಮತ್ತು ವಕ್ತಾರ) ಅವರ ಕೃಪೆಯಿಂದ ಪರಮ ಪೂಜ್ಯ ಶ್ರೀ ಗೋವಿಂದದೇವ ಗಢದರಢನಜಿ ಮಹಾರಾಜ್ (ಆಚಾರ್ಯ, ಡಿ.ಲಿಟ್, ಉಪಾಧ್ಯಕ್ಷರು, ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್‌, ಮಥುರಾ, ಖಜಾಂಚಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ್, ಅಯೋಧ್ಯೆ) ಅವರನ್ನು ಶ್ರೀ ಗುರುದೇವ ರಾನಡೆ ಮಂದಿರ, ಹಿಂದುವಾಡಿ, ಬೆಳಗಾವಿ, ಕರ್ನಾಟಕಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು ಎಂದು ಮಾಜಿ ಶಾಸಕ ಅನಿಲ್ ಬೆನಕೆ ತಮ್ಮ ಅನಿಸಿಕೆ ಹಂಚಿ ಕೊಂಡಿದ್ದಾರೆ.  

ಬೆಳಗಾವಿ ಅಕಾಡೆಮಿ ಆಫ್ ಕಂಪೇರಿಟಿವಿ ಫಿಲೋಸೋಪಿ ಮತ್ತು ರೀಲೀಝನ (ಂಅಕಖ) ವತಿಯಿಂದ "ಶ್ರೀ ಕೃಷ್ಣ ನೀತಿ" ಎಂಬ ಕಾರ್ಯಕ್ರಮಕ್ಕೆ ಆಗಮಿಸಿದ ಪೂಜ್ಯರು ದಿನಾಂಕ: 24,25 ಮತ್ತು 26 ಏಪ್ರಿಲ್ 2025, ಸಂಜೆ 5:30 ರಿಂದ ಸಂಜೆ 7:30 ರವರೆಗೆ ನಗರದ ಕೆಎಲ್‌ಇ ಶತಮಾನೋತ್ಸವ ಸಭಾಂಗಣ, ನೆಹರು ನಗರ, ಬೆಳಗಾವಿಯಲ್ಲಿ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅನಿಲ ಬೆನಕೆ ತಿಳಿಸಿದರು.