ಶಿಗ್ಗಾವಿ 02 : ಮಾಜಿ ಶಾಸಕ ಹಾಗೂ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪಿರ್ ಖಾದ್ರಿ ಅವರ 61ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಹಜರತ್ ಅಲಿ ಚೂಡಿಗಾರ ಮಾತನಾಡಿ ಅವರು ಮಾಜಿ ಶಾಸಕ ಹಾಗೂ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪಿರ್ ಖಾದ್ರಿಯವರು ಜಾತ್ಯತೀತ ನಾಯಕರು, ಕ್ಷೇತ್ರದ ಎಲ್ಲ ವರ್ಗದ ಜನರ ಆಶಾಕಿರಣವೂ ಆಗಿರುವ ನಮ್ಮ ನಾಯಕರಿಗೆ ಆ ದೇವರು ಹೆಚ್ಚಿನ ಆರೋಗ್ಯ ಭಾಗ್ಯವನ್ನು, ಇನ್ನೂ ಹೆಚ್ಚಿನ ರಾಜಕೀಯ ಸ್ಥಾನ ಮಾನಗಳು ಲಭಿಸಲಿ ಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ರಹಿಂ ಮಲ್ಲೂರ, ರಫೀಕ ನಧಾಫ್, ಶಾರುಖ್ ಚಪದಾರ, ಹಜರೆಸಾಬ್ ಕೌತಾಳ, ರವಿ ಕೋಣಪ್ಪನವರ, ಶಂಕರಗೌಡ ಪಾಟೀಲ್ ಮಹ್ಮದ ಗೌಸ್ ತೋಖಲ್ಲಿ, ಸಾಧಿಕ್ ಸಂಶಿ, ಕೃಷ್ಣಾ ಮುಳೆ, ಗೌಸ್ ಅಗಸನಮಮಟ್ಟಿ, ಮಾಲಿಂಗಪ್ಪ ಕುಂಬಾರ, ಮಂಜುನಾಥ ಕಂಕನವಾಡ, ಗಣೇಶ ಮಲಸಾಲಿ, ಮನ್ಸುಲ್ ಯಲ್ಲಾಪೂರ ಸೇರಿದಂತೆ ಖಾದ್ರಿಯವರ ಅಭಿಮಾನಿ ಬಳಗದವರು ಹಾಜರಿದ್ದರು.