ಗದಗ 03 : ನಗರದ ಪ್ರತಿಷ್ಠತ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಲಯದ ಎನ್. ಎಸ್. ಎಸ್. ಘಟಕದ ವತಿಯಿಂದ ದಿನಾಂಕ 03-06-2025 ಮಂಗಳವಾರ ರಂದು ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನೇರಳೆ ಹಣ್ಣಿನ ಸಸಿಗಳು, ಬೇವಿನ ಮರದ ಸಸಿಗಳು, ಶ್ರೀಗಂಧ ಮರದ ಸಸಿಗಳು, ಹುಣಸೆ ಮರದ ಸಸಿಗಳು, ಬಾದಾಮಿ ಮರದ ಸಸಿಗಳು, ಹಲಸಿನ ಮರದ ಸಸಿಗಳು ಈ ರೀತಿ ಒಟ್ಟು 100 ಸಸಿಗಳನ್ನು ಉಚಿತವಾಗಿ ವಿತರಣೆಯನ್ನು ಮಾಡಲಾಯಿತು ಮತ್ತು ಆ ಸಸಿಗಳನ್ನು ಸರಿಯಾದ ರೀತಿಯಲ್ಲಿ ಪೊಶಿಸಿ ಬೆಳೆಸಲು ತಿಳಿಸಲಾಯಿತು.
ಈ ಸಸಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಲ್ಲಸಮುದ್ರ ಗ್ರಾಮದ ಹಿರಿಯರು ಹಾಗೂ ಸಮಾಜ ಸೇವಕರು ಶ್ರೀ ಮಹಾಂತೇಶ ಎಲಿ, ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್. ಎಸ್. ಎಸ್. ಘಟಕದ ಕಾರ್ಯನಿರ್ವಾಹಕರಾದಕುಮಾರ. ಪವನಕುಮಾರ ಕುಲಕರ್ಣಿ, ಕಾರ್ಯದರ್ಶಿಯಾದ ಕುಮಾರಿ. ನೀಲಮ್ಮ ಸಿತಾರಳ್ಳಿ,ವರದಿಗಾರರಾದ ಕುಮಾರ. ಆಕಾಶ ಕಳಗ್ಗಣ್ಣನವರ, ಮಲ್ಲಸಮುದ್ರ ಗ್ರಾಮದ ನಿವಾಸಿಗಳು ಹಾಗೂ ಎನ್. ಎಸ್. ಎಸ್. ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು.