ಬೆಳಗಾವಿ, 03 : ಕಳೆದ 32 ವರ್ಷಗಳಿಂದ ರೇಷ್ಮೆ ಇಲಾಖೆಯಲ್ಲಿ ಗೋಕಾಕ, ಹುಕ್ಕೇರಿ, ಸವದತ್ತಿ, ಬೆಳಗಾವಿ ತಾಲೂಕುಗಳಲ್ಲಿ ರೇಷ್ಮೆ ಇಲಾಖೆಯ ಬೆಳವಣಿಗೆಗೆ ಮತ್ತು ರೇಷ್ಮೆ ತಳಿ ಕುರಿತು ರೈತರಿಗೆ ಉನ್ನತ ಮಟ್ಟದ ಮಾರ್ಗದರ್ಶನ ನೀಡಿ ಸಾರ್ಥಕ ಸೇವೆ ಸಲ್ಲಿಸಿ, ವಕೀಲರಾಗಿ ಸೇವೆ ಪ್ರಾರಂಭಿಸಿ, ನೇಸರಗಿ ಗ್ರಾಮದ ರೈತ ಕುಟುಂಬದಿಂದ ಬಂದು ರೇಷ್ಮೆ ಇಲಾಖೆಯಲ್ಲಿ ಜಿಬಿ. ಮಾಳಣ್ಣವರ ಅತ್ತ್ಯುತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವದು ಹೆಮ್ಮೆಯ ಸಂಗತಿ ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಕುಮಾರ ವಾಘೆ ಹೇಳಿದರು.
ಅವರು ನಗರದ ರೇಷ್ಮೆ ಇಲಾಖೆಯಲ್ಲಿ 32 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ರೇಷ್ಮೆ ಇಲಾಖೆಯ ಸಹಾಯಕ ಉಪ ನಿರ್ದೇಶಕರಾದ ಜಿ ಬಿ. ಮಾಳಣ್ಣವರ, ರೇಷ್ಮೆ ವಿಸ್ತರಣೆ ಅಧಿಕಾರಿ ಸುರೇಶ ತುಪ್ಪದ ಮತ್ತು ಸವದತ್ತಿಯ ರೇಷ್ಮೆ ಪ್ರದರ್ಶಕಿ ಬಸವ್ವ ಯಾದವಾದ ಇವರ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪ ರೇಷ್ಮೆ ನಿರ್ದೇಶಕರಾದ ಪಿಎ ಮಗದುಮ್ಮ, ನಿವೃತ್ತ ಜಂಟಿ ನಿರ್ದೇಶಕರಾದ ಟಿಎಸ್ ಹುದ್ದಾರ, ರೇಷ್ಮೆ ಇಲಾಖೆಯ ಅಧಿಕಾರಿಗಳು, ನೌಕರರು, ನಿವೃತ್ತರ ಕುಟುಂಬಸ್ಥರು ಪಾಲ್ಗೊಂಡಿದ್ದರು.