ಜಿಎನ್‌ಟಿಟಿಎಫ್ ಸಂಸ್ಥೆ ಲೋಕಾರೆ​‍್ಣ: ಯುವ ಜನತೆಗೆ ಕೌಶಲ್ಯ ಅಭಿವೃದ್ಧಿ ತರಬೇತಿ: ಮುಖ್ಯಮಂತ್ರಿ

GNTTF organization Lokarena: Skill development training for youth: Chief Minister

ಜಿಎನ್‌ಟಿಟಿಎಫ್ ಸಂಸ್ಥೆ ಲೋಕಾರೆ​‍್ಣ: ಯುವ ಜನತೆಗೆ ಕೌಶಲ್ಯ ಅಭಿವೃದ್ಧಿ ತರಬೇತಿ: ಮುಖ್ಯಮಂತ್ರಿ  

ಗದಗ   04 :ಜಿ ಎನ್‌ಟಿಟಿಎಫ್ ಸಂಸ್ಥೆ ಮೂಲಕ ಯುವ ಜನತೆಗೆ ಕೌಶಲ್ಯ ಅಭಿವೃದ್ಧಿ ಪಡಿಸುವ ತರಬೇತಿ ನೀಡಿ ಉದ್ಯೋಗವನ್ನು ಪಡೆಯುವಂತ ಕಾರ್ಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ನಗರದ ಗದಗ ಕೋ ಆಪರೇಟೀವ್ ಇಂಡಸ್ಟ್ರಿಯಲ್ ಎಸ್ಟೇಟ್‌ಆವರಣದಲ್ಲಿ ಮಂಗಳವಾರ ಜಿ ಎನ್ ಟಿಟಿ ಎಫ್ ಸಂಸ್ಥೆ ಯನ್ನು ಲೋಕಾರೆ​‍್ಣಗೊಳಿಸಿ ಅವರು ಮಾತನಾಡಿದರು. ಜಿಎನ್‌ಟಿಟಿಎಫ್ ಎಂಬ ಪ್ರತಿಷ್ಠಿತ ಸಂಸ್ಥೆಯನ್ನು ಗದಗ ನಗರದಲ್ಲಿ ಪ್ರಾರಂಭಿಸಿದ್ದು ಸಂತೋಷದ ವಿಷಯವಾಗಿದೆ ಈಗಾಗಲೇ ಈ ಸಂಸ್ಥೆ ರಾಜ್ಯದ 16 ಕಡೆ ಕಾರ್ಯನಿರ್ವಸುತ್ತಿದ್ದು ಹಲವಾರು ತರಬೇತಿ ಮೂಲಕ  ಯುವಜನಕ್ಕೆ ಕೆಲಸಕ್ಕೆ ಬೇಕಾದ ಕೌಶಲ್ಯವನ್ನು ತರಬೇತಿ ಮೂಲಕ ನೀಡುತ್ತಿದೆ. ಯುವಜನರಿಗೆ ಕೌಶಲ್ಯ ಅಭಿವೃದ್ಧಿ ಆಗಬೇಕು ಇಲ್ಲದಿದ್ದರೆ ಉದ್ಯೋಗ ದೊರಕಿಸಿಕೊಳ್ಳುವುದು ಕಷ್ಟ ಈಗಿನ  ಮಾರುಕಟ್ಟಯಲ್ಲಿರುವ ಉದ್ಯೋಗಕ್ಕೆ ಬೇಕಾದ ಕೌಶಲ್ಯವನ್ನು ದಿನದಿಂದ ದಿನಕ್ಕೆ ಅಭಿವೃದ್ಧಿ ಪಡಿಸಿಕೊಳ್ಳಬೇಕು, ಕೌಶಲ್ಯ ಇಲ್ಲದೆ ಹೋದರೆ ಯುವಕರಿಗೆ ಕೆಲಸ ಸಿಗುವುದಿಲ್ಲ, 

ಹಾಗಾಗಿ ನೂತನವಾಗಿ ಮುಖ್ಯಮಂತ್ರಿ ಆಗಿದ್ದಾಗ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನು ಪ್ರಾರಂಭ ಮಾಡಲಾಯಿತು ಎಂದು ನುಡಿದರು. ನಮ್ಮ ಸರ್ಕಾರ ಪಂಚ ಗ್ಯಾರಂಟಿ ಗಳಲ್ಲಿ ಒಂದಾದ ಯುವನಿಧಿ ಮೂಲಕ ನಿರುದ್ಯೋಗಿ ಪದವೀಧರಿಗೆ 3000 ಡಿಪ್ಲೊಮಾ ಕಲಿತವರಿಗೆ 1500 ಹಾಗೇ 2 ವರ್ಷ ಗಳ ಕಾಲ  ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯನ್ನು ನೀಡುಲಾಗುತ್ತಿದೆ.ಈ 2 ವರ್ಷದಲ್ಲಿ ಯುವ ಜನತೆ ತಮಗೆ ಆಸಕ್ತಿಯಿರುವ ಯಾವುದಾದರು ಒಂದು ಕೌಶಲ್ಯವನ್ನು ಅಭಿವೃದ್ಧಿ ಪಡೆಸಿಕೊಳ್ಳಲು ಕೌಶ್ಯಭಿವೃದ್ಧಿ ಇಲಾಖೆಯಿಂದ ತರಬೇತಿ ನೀಡಬೇಕೆಂದು ಕೌಶಲ್ಯ ಅಭಿವೃದ್ಧಿ ಸಚಿವ ಶರಣ  ಪ್ರಕಾಶ ಪಾಟೀಲ ಅವರಿಗೆ ಸೂಚಿಸಲಾಗಿದೆ ಅದರಂತೆ ಅವರು ಕೌಶಲ್ಯ ಅಭಿವೃದ್ಧಿ ಪಡಿಸುವ ತರಬೇತಿ ಕೈಗೊಳ್ಳುತ್ತಿದ್ದು ಹಾಗು ಉದ್ಯೋಗ ಮೇಳವನ್ನು ಏರಿ​‍್ಡಸಿ  ಉದ್ಯಮಿ ಮತ್ತು ಉದ್ಯೋಗ ಆಕಾಂಕ್ಷೆಗಳನ್ನು   ವೇದಿಕೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು  ಹೇಳಿದರು. 

ಈ ಸಂದರ್ಭದಲ್ಲಿ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ  ಉಸ್ತುವಾರಿ ಸಚಿವ ಡಾ.ಎಚ್‌.ಕೆ.ಪಾಟೀಲ,ಪೌರಾಡಳಿತ ಮತ್ತ ಹಜ್ ಸಚಿವ ರಹೀಂಖಾನ್, ಸರ್ಕಾರಿ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ , ಕರ್ನಾಟಕಖನಿಜಅಭಿವೃದ್ಧಿ ನಿಗಮ ನಿಯಮಿತದಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್‌.ಪಾಟೀಲ,ನರಗುಂದ ವಿಧಾನಸಭೆ ಶಾಸಕ ಸಿ ಸಿ ಪಾಟೀಲ,ಮಾಜಿ ಶಾಸಕ ಡಿ ಆರ್ ಪಾಟೀಲ,ಜಿ ಎನ್‌ಟಿಟಿಎಫ್ ಚೇರಮನ್ ಕೃಷ್ಣಗೌಡ ಪಾಟೀಲ ಸೇರಿದಂತೆ ಗಣ್ಯರು ಹಾಜರಿದ್ದರು.