ಬೆಳಗಾವಿ 11: ಎಪಿಎಂಸಿ ಮಾರ್ಕೆಟ ಯಾರ್ಡ ಗೇಟ ಬಳಿ ದಿ. 10ರಂದು ವ್ಯಕ್ತಿಯೊಬ್ಬ ಜೂಜಾಟ ಆಡುತ್ತಿದ್ದಾಗ ದಾಳಿ ನಡೆಸಿದ ಎಪಿಎಂಸಿ ಪೊಲೀಸರು ಆರೋಪಿಯನ್ನು ಬಂಧಸಿ ಆತನಿಂದ 260 ರೂ. ನಗದು ಮತ್ತು ಮಟಕಾ ಬರೆಯಲು ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಜ್ಯೋತಿ ನಗರ, ಕಂಗ್ರಾಳಿ ಕೆ. ಎಚ್ ನಿವಾಸಿ ವಿನಾಯಕ ನಿಂಗಪ್ಪ ನಾಯಿಕ (46) ಬಂಧಿತ ಆರೋಪಿಯಾಗಿದ್ದು, ಎಪಿಎಂಸಿ ಠಾಣೆಯ ಪಿಎಸ್ಐ ಸಂತೋಷ ದಳವಾಯಿ ಹಾಗೂ ಸಿಬ್ಬಂದಿ ಜನರು ದಾಳಿ ಮಾಡಿದರು. ಈತನ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.