ಸಂಬರಗಿ, 18 : ಸಮಾಜದಲ್ಲಿ ಶಿಕ್ಷಣ ಮುಖ್ಯ ಇದ್ದು, ಬಡ ಕುಟುಂಬದಲ್ಲಿ ಆಸ್ತಿ ಮಾಡುವುದಕ್ಕಿಂತ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಮಕ್ಕಳನ್ನು ಒಳ್ಳೆಯ ಸ್ಥಾನ ಆಯ್ಕೆ ಮಾಡಬೇಕೆಂದು ಅಬಕಾರಿ ಸಚಿವರು ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರು ಆರ್.ಬಿ. ತಿಮ್ಮಾಪೂರ ಹೇಳಿದರು.
ಅಥಣಿ ಗಚ್ಚಿನ ಮಠದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮೀತಿ ಹಾಗೂ ಮಾದಿಗ ಸಂಘಟಣೆಗಳ ಒಕ್ಕೂಟ ಅಥಣಿ, ಇವರ ಆಶ್ರಯದಲ್ಲಿ ಅಂತರಾಷ್ಟ್ರೀಯ ಬಾಂಗ್ಲಾದೇಶದಲ್ಲಿ ನಡೆದ ಅಟ್ಯಾಪಟ್ಯಾ ಕ್ರೀಡಾ ಕೂಟಗಳಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಆಟವಾಡಿ ಪ್ರಥಮ ಸ್ಥಾನ ಪಡೆದ ನಮ್ಮ ಹೆಮ್ಮೆಯ ಭಾರದ ದೇಶದ ಪುತ್ರನಾದ ಕುಮಾರ ಬಸವರಾಜ ಕುಪೇಂದ್ರ ತೆಳಗಡೆ ಇವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಎಸ್.ಎಸ್.ಎಲ್.ಸಿ ್ಘ ಪಿ.ಯು.ಸಿ ಪರೀಕ್ಷೆಯಲ್ಲಿ 90ಅಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ಅವರು ದೀನ ದಲಿತ ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುತ್ತಿದೆ. ಅದರ ಸದುಪಯೋಗ ಪಡಯಬೇಕು. ಡಾ. ಬಾಬಾಸಾಹೇಬ ಅಂಬೇಡ್ಕರ್ ಇವರು ನಮಗೆ ನೀಡಿರುವ ಅಧಿಕಾರದ ಸದುಪಯೋಗ ಪಡೆದುಕೊಳ್ಳಬೇಕು.
ಶಾಸಕ ಲಕ್ಷ್ಮಣ ಸವದಿ ಇವರು ಅಥಣಿ ವಿಧಾನಸಭಾ ಕ್ಷೇತ್ರವನ್ನು ಹಸಿರು ಕ್ರಾಂತಿ ಮಾಡಿದ್ದಾರೆ. ಮೂಲೆ ಮೂಲೆಯಲ್ಲಿ ನೀರು ತಲುಪಿದೆ. ಕ್ಷೇತ್ರದ ಜನತೆಗೆ ಯಾವುದೇ ಸಮಸ್ಯೆ ಬಂದರೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದು ಹೇಳಿದರು.
ಈ ವೇಳೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ ಕಳೆದ 35 ವರ್ಷಗಳಿಂದ ಮಾದಿಗ ಸಮಾಜ ನಮ್ಮ ಬೆನ್ನೆಲುಬಾಗಿ ನಿಂತಿದೆ. ಈ ಸಮಾಜವು ನನ್ನ ಮೇಲೆ ವಿಶ್ವಾಸ ಇಟ್ಟು, ಸತತವಾಗಿ ಆಯ್ಕೆ ಮಾಡುತ್ತಿದ್ದಾರೆ. ಅವರು ನೀಡಿರುವ ಮನವಿಯನ್ನು ಪರಿಗಣಿಸಿ ಅವರಿಗೆ ಸಮುದಾಯ ಭವನ ಕಟ್ಟಡ ಮಾಡಲು ಜಾಗವನ್ನು ನೀಡುತ್ತೇನೆ. ಈ ಸಮಾಜದ ಮುಖಂಡರಿಂದ ಇಲ್ಲಿಯವರೆಗೆ ಅಟ್ರಾಸಿಟಿ ಪ್ರಕರಣ ದಾಖಲಾಗಿಲ್ಲ, ಇದೊಂದು ಹೆಮ್ಮೆಯ ಮಾತು. ಯಾವುದೇ ಸಮಸ್ಯೆ ಇದ್ದರೆ ನಾನು ಪರ್ಯಾಗೊಳಿಸಲು ಸಿದ್ಧನಾಗಿದ್ದೆನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಮ.ನಿ.ಪ್ರ ಶಿವಬಸವ ಮಹಾಸ್ವಾಮಿಗಳು ಗಚ್ಚಿನ ಮಠ ಅಥಣಿ, ಶ್ರೀ ಮ.ನಿ.ಪ್ರ ಮರುಳಸಿದ್ಧ ಮಹಾಸ್ವಾಮಿಗಳು ಶಟ್ಟರಮಠ ಅಥಣಿ, ಪರಮ ಪೂಜ್ಯ ಶ್ರೀ ಭ್ರಹ್ಮಾನಂದ ಅಜ್ಜನವರು ಕಾಳಿಕಾ ದೇವಿ ಮಠ ಯರನಾಳ, ಇವರು ಆಶಿರ್ವಚನ ನೀಡಿದರು. ಈ ವೇಳೆ ಪುರಸಭೆಯ ಅಧ್ಯಕ್ಷರಾದ ಶಿವಲೀಲಾ ಸದಾಶಿವ ಬುಟಾಳೆ, ಉಪಾಧ್ಯಕ್ಷರು ಭುವನೇಶ್ವರಿ ಬೀರ್ಪ ಯಂಕಚ್ಚಿ, ರಾವಸಾಹೇಬ ಐಹೊಳೆ, ಕೆ.ಪಿ.ಸಿ.ಸಿ ಸದಸ್ಯ ಶಾಮ ಪೂಜಾರಿ, ವಿದ್ಯಾ ಐಹೊಳೆ, ಶಂಕರ ಪೂಜಾರಿ, ರಮೇಶ ಸಿಂದಗಿ, ಶಂಕರ ಮುರಗುಂಡಿ, ರಾಜು ರಾಜಂಗಳೆ, ಕುಮಾರ ಗಸ್ತಿ, ಅಥಣಿ ತಾಲೂಕಾ ಮಾದಿಗ ಸಮಾಜದ ಹೋರಾಟ ಸಮೀತಿಯ ತಾಲೂಕಾ ಅಧ್ಯಕ್ಷ ಹಣಮಂತ ಅರ್ಧಾಊರ, ಸುನಿತಾ ಐಹೊಳೆ, ಮಹಾದೇವ ಅವಳಿಕಟ್ಟಿ, ಚನ್ನಪ್ಪ ಐಹೋಳೆ ಸೇರಿದಂತಹ ಸಮಾಜದ ಎಲ್ಲಾ ಕಾರ್ಯಕರ್ತರು, ಮುಖಂಡರು, ಗಣ್ಯರು ಉಪಸ್ಥಿತ ಇದ್ದರು, ಕುಮಾರ ಬಸವರಾಜ ಕುಪೇಂದ್ರ ತೆಳಗಡೆ, ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಬಹುಮಾನ ನಿಡಲಾಯಿತು. ರಾಜೇಂದ್ರ ಐಹೊಳೆ ಪ್ರಾಸ್ಥವಿಕ ಮಾತನಾಡಿ ಸಮಾಜದ ಎಲ್ಲಾ ಸಮಸ್ಯೆ ಕುರಿತು ಮಾಹಿತಿ ನೀಡಿ ಮನವಿ ಸಲ್ಲಿಸಿದರು. ಸುರೇಶ ವಾಘಮೊಡೆ ನಿರೂಪಣೆ ಮಾಡಿದರು.