ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಸಭೆ

Government First Grade College Development Committee Meeting

ಹಾವೇರಿ 11 : ತಾಲೂಕಿನ ಗಾಂಧಿಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಸಭೆ ಸದಸ್ಯರೂ ಆಗಿರುವ ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.  

ಬೋಧಕ-ಬೋಧಕೇತರ ಸಿಬ್ಬಂದಿ ಕೊರತೆ, ಕಾಲೇಜಿನ ಪ್ರವೇಶ ದ್ವಾರ, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಪ್ರಚಾರ ಕಾರ್ಯ, ಮೂಲಭೂತ ಸೌಕರ್ಯಗಳು, ಕಾಂಪೌಂಡ್ ನಿರ್ಮಾಣ, ಬಸ್ ಸೆಲ್ಟರ್, ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ, ಕಾಲೇಜು ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ, ಕೆಲ ವಾಹನಗಳು ನಿಲಗಡೆಯಾಗದಿರುವುದರಿಂದ ಬೋಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಕುರಿತು, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಭ್ಯತೆ, ಸ್ವಚ್ಛತೆ ಮುಂತಾದ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು. 

ಸಮಿತಿಯ ನಿಜಲಿಂಗಪ್ಪ,ಹನುಮಂತಗೌಡ ಗೊಲ್ಲರ,ಪ್ರವೀಣ ಹೆಡಿಗೊಂಡ, ಸುರೇಶ್ ಪುಟ್ಟಪ್ಪನವರ, ಮಾಲತೇಶ್ ರಿತ್ತಿ, ನಿಂಗಪ್ಪ ಶಿವಣ್ಣನವರ, ಮಹದೇವಪ್ಪ ಜಂಗಳಿ, ಹಸನ್‌ಸಾಬ್ ಬಾಗಲಕೋಟಿ, ಪರಮೇಶಪ್ಪ ಮಣಿಗಾರ್, ಪದ್ಮರಾಜ್ ಕಳಸೂರ, ನವೀನ್ ಅಳ್ಳಳ್ಳಿ, ಮೀನಾಕ್ಷಿ ಯಾದಗುಡಿ ಮಾತನಾಡಿ ಈ ಎಲ್ಲ ಸಮಸ್ಯೆಗಳ ಬಗ್ಗೆ ಅಧ್ಯಕ್ಷರು ಆಗಿರುವ ಶಾಸಕರಾದ ರುದ್ರ​‍್ಪ ಲಮಾಣಿ ಅವರ ಗಮನಕ್ಕೆ ತರುತ್ತೇವೆ. ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ದಾಖಲಾತಿ ಕಡಿಮೆಯಾಗಿದ್ದು, ಕರಪತ್ರ, ಭಿತ್ತಿ ಪತ್ರಗಳ ಮೂಲಕ ವ್ಯಾಪಕ ಪ್ರಚಾರವಾಗಬೇಕು.  

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಗ್ರೇಡ್ ಬಿ ಪ್ಲಸ್ ನಿಂದ ಎ ಪ್ಲಸ್ ಕಾಲೇಜು ಆಗಬೇಕು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಮಾನವೀಯತೆ ಜೀವನೋತ್ಸಾಹ ಮೌಲ್ಯಗಳನ್ನು ಬೆಳೆಸಬೇಕು, ಕಾಲ ಕಾಲಕ್ಕೆ ಪಾಲಕರ ಸಭೆ ನಡೆಸಿ ಅವರ ಮಕ್ಕಳ ಪ್ರಗತಿ ಕಾಳಜಿ ತಿಳಿಸಬೇಕು ಎಂದು ಮಾತನಾಡಿದರು. 

ಖಾಯಂ ಉಪನ್ಯಾಸಕರು ಸೇರಿದಂತೆ ಅತಿಥಿ ಉಪನ್ಯಾಸಕರು ತಮ್ಮ ಅನಿಸಿಕೆ ಹಂಚಿಕೊಂಡರು. ಪ್ರಾಚಾರ್ಯ ಡಾ.ಫರ್ಜಾನಾ ಪಠಾಣ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ.ವೈ.ಮುದ್ದಾನಸ್ವಾಮಿ ಸ್ವಾಗತಿಸಿದರು. ಡಾ.ಚಂದ್ರ​‍್ರಭಾ ಪಟಗಾರ್ ವಂದಿಸಿದರು.