ನಿವೃತ್ತ ಪಿಡಿಒ ಮಲ್ಲಿಕಾರ್ಜುನಗೆ ಸನ್ಮಾನ ಬೀಳ್ಕೊಡುಗೆ

Honorable farewell to retired PDO Mallikarjuna

ಕಂಪ್ಲಿ 02:  ಗ್ರಾ.ಪಂ ಸದಸ್ಯರ ಮತ್ತು ಸಾರ್ವಜನಿಕರ ಸಹಕಾರದಿಂದ ಅಧಿಕಾರದ ಅವಧಿಯಲ್ಲಿ ಮಾಡಿದ ಕಾರ್ಯಗಳು ತೃಪ್ತಿದಾಯಕ ಜನರ ಮಾಡಿದ ಸೇವೆಗಳು ಹಚ್ಚ.ಹಸಿರಾಗಿವೆ ಉಳಿಯಲಿವೆ ಎಂದು ವಯೋ ನಿವೃತ್ತಿ ಹೊಂದಿದ ಪಿಡಿಒ ಟಿ.ಮಲ್ಲಿಕಾರ್ಜುನ ಹೇಳಿದರು.

ತಾಲೂಕು ಸಮೀಪದ ಗ್ರಾ.ಪಂ ಸೀತರಾಮ ತಂಡದಲ್ಲಿ  ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಸೋಮವಾರ  ಹಮ್ಮಿಕೊಂಡಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಕೆಲಸ ದೇವರ ಕೆಲಸ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದು, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗಿದೆ. ಕಳೆದ ನಾಲ್ಕು ವರ್ಷದಿಂದ ಸೀತರಾಮತಂಡ ಗ್ರಾಪಂಯಲ್ಲಿ ಪಿಡಿಒ ಆಗಿ ಕೆಲಸ ಮಾಡಿದ್ದು, ಇಲ್ಲಿನ ಜನರ ಸಂಕಷ್ಟಗಳಿಗೆ ಸ್ಪಂದಿಸಲಾಗಿದೆ.  

ಜನತೆಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯವಾಗಿದೆ ಎಂದರು. ಇಲ್ಲಿ ಪಿಡಿಒ ಮಲ್ಲಿಕಾರ್ಜುನ ಇವರಿಗೆ ಅದ್ಧೂರಿಯಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಗೋವಿಂದನಾಯ್ಕ ಉಪಾಧ್ಯಕ್ಷ ಭಾಗ್ಯಮ್ಮ ಗ್ರಾ.ಪಂ ಕಾರ್ಯದರ್ಶಿ ಡಿ.ಯಲ್ಲಪ್ಪ ಸರ್ವಸದಸ್ಯರಾದ ಹುಲುಗಪ್ಪ ಎರೀ​‍್ರಸ್ವಾಮಿ ಸರೋಜ ಹನುಮಕ್ಕ ನೇತ್ರಭಾಯಿ ದೊಡ್ಡಹನುಮಕ್ಕ ಗ್ರಾಪಂ ಸಿಬ್ಬಂದಿಯವರಾದ ಡಿ.ಶೃತಿ.ಡಿ.ಇ.ಓ  ಕರಿಯಪ್ಪ ಕೆಂಚಪ್ಪ ರುದ್ರಮ್ಮ ಕೇಶವರಾಜ ರವಿಕುಮಾರ ಉಮಾ ಹಾಗೂ ಗ್ರಾಮಸ್ಥರು ಇದ್ದರು.