ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜೂನ 8ರಂದು ಬೃಹತ್ ಜೈನ ಸಮಾವೇಶ: ಸಂಜಯ ಪಾಟೀಲ

Huge Jain convention on June 8th to press for various demands: Sanjay Patil

ಬೆಳಗಾವಿ. 03: ಜೈನ  ಅಭಿವೃದ್ದಿ ನಿಗಮ ಸ್ಥಾಪನೆ  ಸೇರಿದಂತೆ ವಿವಿಧ  ಬೇಡಿಕೆಗಳ ಈಡೆರಿಕಾಗಿ ಆಗ್ರಹಿಸಿ ಆಚಾರ್ಯ ಶ್ರೀ. 108 ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಹಾಗೂ ಎಲ್ಲ ಭಟ್ಟಾರಕ ಸ್ವಾಮಿಜಿಗಳ ಸಾನಿಧ್ಯದಲ್ಲಿ ಇದೇ ಜೂನ 8 ರಂದು ಐನಾಪೂರ ಪಟ್ಟಣದಲ್ಲಿ  ಬೃಹತ್ ಜೈನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು  ಮಾಜಿ ಶಾಸಕ ಸಂಜಯ ಪಾಟೀಲ ಅವರು ಇಂದಿಲ್ಲಿ ಹೇಳಿದರು.  

ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಚಾರ್ಯ ಶ್ರೀ ಗುಣಧರ ನಂದಿ ಮುನಿಗಳ ನೇತೃತ್ವದಲ್ಲಿ ಈಗಾಗಲೇ ಎರಡು ಬಾರಿ ಸಮಾವೇಶವನ್ನು ನಡೆಸಿ ಸರಕಾರದ ಗಮನ ಸೆಳೆಯಲಾಗಿದೆ. ಆದರೂ ಸರಕಾರ ನಮ್ಮ ಸಮಾಜದ ಬೇಡಿಕೆಗಳಿಗೆ ಸರಿಯಾಗಿ ಸ್ಪಂಧಿಸುತ್ತಿಲ್ಲ. ಆದ್ದರಿಂದ ಈಗ 3 ನೇ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ . ಜೂನ 6 ಮತ್ತು 7 ರಂದು ಕೆಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜೂನ 8 ರಂದು ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ ಅವರು ಸಮಾವೇಶದಲ್ಲಿ ಭಾಗವಹಿಸಿಲಿದ್ದಾರೆ ಎಂದು ಅವರು ತಿಳಿಸಿದರು.  

ಅದಲ್ಲದೆ ಈ ಸಮಾವೇಶದಲ್ಲಿ ನಾಡಿನ ಎಲ್ಲ ಭಟಾರಕ ಶ್ರೀಗಳು ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ  ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವರಾದ ಡಿ.ಸುಧಾಕರ, ಲಕ್ಷ್ಮೀ ಹೆಬ್ಬಾಳಕರ, ಸಂಸದರಾದ ಪ್ರೀಯಂಕಾ ಜಾರಕಿಹೊಳಿ, ಜಗದೀಶ ಶೆಟ್ಟರ, ವಿಧಾಣ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕರಾದ ರಾಜು ಕಾಗೆ,ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ಅಭಯ ಪಾಟೀಲ, ಶಶಿಕಲಾ ಜೊಲ್ಲೆ, ಬಾಲಚಂದ್ರ ಜಾರಕಿಹೋಳಿ, ಗಣೇಶ ಹುಕ್ಕೇರಿ,  ಮಹಾಂತೇಶ ಕೌಜಲಗಿ, ಜಗದೀಶ ಗುಡಗುಂಟಿ, ಮಹೇಂದ್ರ ತಮ್ಮಣ್ಣವರ, ಪ್ರಕಾಶ ಆವಾಡೆ, ರಾಜೇಂದ್ರ ಯಂಡ್ರಾವಕರ, ಮಾಜಿ ಶಾಸಕರಾದ ಮಹಾಂತೇಶ ಕವಟಗಿಮಠ, ಶ್ರೀಮಂತ ಪಾಟೀಲ, ವೀರಕುಮಾರ ಪಾಟೀಲ, ಶ್ಯಾಮರಾಮ ಘಾಟಗೆ, ಆನಂದ ನ್ಯಾಮಗೌಡರ, ಮಹೇಶ ಕುಮಠಳ್ಳಿ ಪಿ.ರಾಜೀವ, ಅಣ್ಣಾಸಾಹೇಬ ಜೊಲ್ಲೆ, ಕಲ್ಪಪ್ಪಣ್ಣಾ ಮಗೆನ್ನವರ, ಮೋಹನ ಶಹಾ ಸೇರಿದಂತೆ ಇನ್ನಿತರ ನಾಯಕರು ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.  

ಬಹು ದಿನಗಳಿಂದ ಜೈನ ಸಮಾಜ ಬೇಡಿಕೆ ಇಟ್ಟಿರುವ ಜೈನ ನಿಗಮ ಮಂಡಳಿ ಸ್ಥಾಪನೆ ಮಾಡುತ್ತಿಲ್ಲ. ಸರ್ಕಾರ ಕೂಡಲೇ ಜೈನ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು. ಜೈನ ಮಂದಿರಗಳ ರಕ್ಷಣೆ ಅವುಗಳ ಜಿರ್ಣೋದ್ದಾರ, ಹೊಸ ಬಸದಿಗಳ ನಿರ್ಮಾಣಕ್ಕೆ ಅನುದಾನ, ಹೊಸದಾಗಿ ವಸತಿ ನಿಲಯಗಳ ನಿರ್ಮಾಣ , ಶುದ್ದ  ಶಾಖಾಹಾರಿ ಭೋಜನ ವ್ಯವಸ್ಥೆ ಹೊಂದಿದ ವಸತಿ ನಿಲಯಗಳು, ಪ್ರತ್ಯೆಕವಾದ ನಿಗಮ ಮಂಡಳಿಗಳು, ಅರ್ಚಕರಿಗೆ ಸಿಗುವ ಸವಲತ್ತುಗಳನ್ನು  ಬೇಗನೆ ಈಡೇರಿಸುವುದು.  ಸಮ್ಮೇದ ಶಿಖರಜಿ ಯಾತ್ರೆಗೆ ಹಣಕಾಸಿನ ನೆರವು ಸೇರಿದಂತೆ ವಿವಿಧ ಬೇಡಿಕೆಗಳನ್ನು ಜೈನ ಸಮಾಜ ಸರಕಾರದ ಮುಂದೆ ಪ್ರಸ್ತಾಪ ಮಾಡಲಿದೆ. ಇವುಗಳನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು  ಸಂಜಯ ಪಾಟೀಲ ಅವರು ಆಗ್ರಹಿಸಿದರು. 

ಜೈನ ಸಮಾಜದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಮ್ಮ ಕೆಲಸ ಮಾಡುತ್ತಾರೆ ಎಂಬ ಭರವಸೆ, ವಿಶ್ವಾಸಇದೆ. ಒಂದುವೇಳೆ ಸಮಾಜದ ಬೇಡಿಕೆ ಈಡೇರದಿದ್ದರೆ ಹೋರಾಟ ಅನಿವಾರ್ಯ  ಎಂದು  ಅವರು ಎಚ್ಚರಿಕೆ ನೀಡಿದರು.  

ಸರ್ಕಾರ ಚಿಕ್ಕ,ಪುಟ್ಟ ಸಮಾಜದವರಿಗೆ ನಿಗಮ ಮಂಡಳಿ ಸ್ಥಾಪನೆ ಮಾಡಿದ್ದಾರೆ. ಆದರೆ ಜೈನ ಸಮಾಜ ರಾಜ್ಯ ಹಾಗೂ ದೇಶಕ್ಕೆ ಹಲವಾರು ಕೊಡುಗೆಗಳನ್ನು ಕೊಟ್ಟಿದೆ.ಆದರೂ ನಮ್ಮ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡದೇ ಸರಕಾರ ಅನ್ಯಾಯವೆಸಗುತ್ತಿದೆ. ಹೀಗಾಗಿ, ಬರುವ ಜೂನ್ 8ರಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ 3ನೇ ಬೃಹತ್ ಸಮಾವೇಶ ನಡೆಸಲಾಗುತ್ತಿದೆ.  ಸಮಾವೇಶದಲ್ಲಿ ನಿಗಮ ಸೇರಿದಂತೆ ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು. ನಾಡಿನ ಕಲೆ, ಸಾಹಿತ್ಯ,ಸಂಸ್ಕೃತಿ, ಮತ್ತು ಸಾಮಾಜಿಕಅಭಿವೃದ್ಧಿಗೆಜೈನ ಸಮಾಜದ ಕೊಡುಗೆ ಅಪಾರವಿದೆ. ಜೈನರು ಅಹಿಂಸಾವಾದಿಗಳಾಗಿದ್ದು, ಕರ್ನಾಟಕದಲ್ಲಿ ಅಲ್ಪಸಂಖ್ಯಾತರೆಂದೇ ಪರಿಗಣಿತರಾಗಿದ್ದಾರೆ. ತಮ್ಮ ಸಮುದಾಯಕ್ಕೆ ದೊರೆಯಬೇಕಾದ ಸರಕಾರದಿಂದ ಸರಕಾರದಿಂದ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.  

ಪತ್ರಿಕಾಗೋಷ್ಟಿಯಲ್ಲಿ ಚಾರುಕೀರ್ತಿ ಸೈಬನ್ನವರ, ನ್ಯಾಯವಾದಿ ಸಂಜಯ ಕುಚನೂರೆ, ರಾಜೇಂದ್ರ ಜಕ್ಕನ್ನವರ ಉಪಸ್ಥಿತರಿದ್ದರು.