ಬೆಳಗಾವಿ 16: ಕ್ಯಾಂಪ್ ಪೊಲೀಸ್ ಠಾಣೆಯ ಶೌರ್ಯ ಸರ್ಕಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಸಿಇಎನ್ ಅಪರಾಧ ಠಾಣೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ ರೂ. 2000 ಮೌಲ್ಯದ 200 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅಂಬೇವಾಡಿ ನವೀನ ಗಲ್ಲಿ ನಿವಾಸಿ ಕಿರಣ ಗುಂಡು ಆದವ ಮತ್ತು ಶಿನ್ನೋಳಿ ನಿವಾಸಿ ರಾಹುಲ್ ಆರೋಪಿಗಳಾಗಿದ್ದು, ಎಸಿಪಿ ಜೆ. ರಘು ಹಾಗೂ ಸಿಬ್ಬಂದಿ ಅವರು ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿ ಆರೋಪಿಗಳ ವಿರುದ್ಧ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.