ಜಮಖಂಡಿ 14: ಬ್ಯಾಂಕಗಳಿಂದ ಆರ್ಥಿಕ ಪ್ರಗತಿ ಬೆಳೆಯುತ್ತದೆ, ಬ್ಯಾಂಕಗಳನ್ನು ವಿಸ್ವಾಸದಿಂದ ನಡೆಸಬೇಕು, ಜನರು ಬ್ಯಾಂಕ ಮೇಲೆ ನಂಬಿಕೆ ಇಟ್ಟು ವ್ಯವಹರಿಸುವಂತೆ ಜನರ ನಂಬಿಕೆಯನ್ನು ಆಡಳಿತ ಮಂಡಳಿ ಗಳಿಸಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಬಡಿಗೇರ ಗಲ್ಲಿಯಲ್ಲಿ ನೂತನವಾಗಿ ಜನಸೇವಾ ಪತ್ತಿನ ಸಹಕಾರ ಸಂಘ ನಿ, ಜಮಖಂಡಿ ಬ್ಯಾಂಕಿನ ಉದ್ಘಾಟಣೆ ಮಾಡಿ ಮಾತನಾಡಿದರು. ಮಾಜಿ ಶಾಸಕ ಜಿ.ಎಸ್.ನ್ಯಾಮಗೌಡ ಮಾತನಾಡಿ, ಸಾಲವನ್ನು ನೀಡುವಾಗ ಎಚ್ಚರಿಕೆಯಿಂದ ನೀಡಬೇಕು, ಗ್ರಾಹಕರು ಸರಿಯಾದ ರೀತಿಯಲ್ಲಿ ವ್ಯವಹಾರ ಮಾಡಿ ಬ್ಯಾಂಕಿನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಾನಿಧ್ಯವನ್ನು ಹುಲ್ಯಾಳ ಹರ್ಷಾನಂದ ಶ್ರೀಗಳು, ಉದ್ಯಮಿ ಧರ್ಮಲಿಂಗಯ್ಯ ಗುಡಗುಂಟಿ, ರೈತ ಮುಖಂಡ ಬಿ.ಎಸ್.ಸಿಂಧೂರ, ಡಾ.ವಿಜಯಲಕ್ಷ್ಮೀ ತುಂಗಳ, ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಅಪ್ಪಾಸಾಬ ಮನಗೂಳಿ, ಅಜಯ ಕಡಪಟ್ಟಿ, ಬ್ಯಾಂಕಿನ ಅಧ್ಯಕ್ಷ ರಾಯಗೊಂಡ ಹೊನಗೌಡ, ಉಪಾಧ್ಯಕ್ಷ ಬಸವರಾಜ ಮಾಳಿ, ಅಪ್ಪು ಪೋತರಾಜ, ಸಂತೋಷ ಅಂಬಲಿ, ರಾಹುಲ್ ಪಾಟೀಲ, ಶ್ವೇತಾ ಅರಕೇರಿ, ಬಸವರಾಜ ಬೆಳ್ಳಗಿ, ಕಾರ್ಯದರ್ಶಿ ಬಸವರಾಜ ಬೇವನೂರ ಸೇರಿದಂತೆ ಇತರರು ಇದ್ದರು