ಮುಂದೊರೆದ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ್

Indefinite strike by civil servants ahead

ಮುಂದೊರೆದ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ್ 

ಜಮಖಂಡಿ   31: ನಗರಸಭೆಕಾರ್ಯಾಲಯದ ಮುಂದೆ ಪೌರಕಾರ್ಮಿಕರು ವಿವಿಧ ಬೇಡಿಕೆಯನ್ನುಈಡೇರಿಸುವಂತೆ ನಡೆಸುತ್ತಿದ್ದ 4ನೆ ದಿನದ ಅನಿರ್ದಿಷ್ಟಾವಧಿ ಮುಷ್ಕರ್‌ಕ್ಕೆ ಕೆ,ಶಿವರಾಂ ಚಲವಾದಿ ಮಹಾಸಭಾ ಸಂಘಟನೆಯು ಬೆಂಬಲವನ್ನು ನೀಡಿದೆ. 

ಕೆ,ಶಿವರಾಂ ಚಲವಾದಿ ಮಹಾಸಭಾ ಸಂಘಟನೆಯ ಅಧ್ಯಕ್ಷ ಶಶಿಕಾಂತ ತೇರದಾಳ ಮಾತನಾಡಿ, ನಗರವು ಸುಂದವಾಗಿ, ಸ್ವಚ್ಛವಾಗಿ ಕಾಣುತ್ತಿದೆ ಎಂದರೆ ಅದು ಪೌರಕಾರ್ಮಿಕರಿಂದ ಮಾತ್ರ ಸಾಧ್ಯ. ಕೆಳದೆ ನಾಲ್ಕು ದಿನದಲ್ಲಿ ಜಮಖಂಡಿ ನಗರವು ಎಲ್ಲಂದರಲ್ಲಿ ಕಸದ ರಾಶಿ ಬಿದ್ದು.ಗಬ್ಬೆದ್ದು ನಾರುತ್ತಿದೆ. ಸಾರ್ವಜನಿಕರು ಮುಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಬಂದಿದೆ.ಅಂತಹ ಕಸವನ್ನು ಪೌರಕಾರ್ಮಿಕರು ಪ್ರತಿನಿತ್ಯ ತಮ್ಮ ಜೀವದ ಹಂಗು ತೊರೆದು ನಗರವನ್ನು ಸ್ವಚ್ಛಂದವಾಗಿ ಮಾಡುತ್ತಿರುವುದು ಅದು ಕೇವಲ ಪೌರಕಾರ್ಮಿಕರ ಶ್ರಮವಾಗಿದೆ ಎಂದು ಶ್ಲಾಘನಿಸಿ. ರಾಜ್ಯ ಸರಕಾರ ಪೌರಕಾರ್ಮಿಕರ ವಿವಿಧ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. 

ಇದೇ ಸಂದರ್ಭದಲ್ಲಿ ರಾಘು ಕಡಕೋಳ, ಶ್ರೀಕಾಂತ ಘಾಟಗೆ ಮಾತನಾಡಿದರು. ಕೆ,ಶಿವರಾಂ ಚಲವಾದಿ ಸಂಘಟನೆಯರಾದ ದೀಲೀಪ ದಾಶ್ಯಾಳ, ರವಿ ದೊಡಮನಿ ಸೇರಿದಂತೆ ಪೌರಕಾರ್ಮಿಕರು ವೇದಿಕೆಯಲ್ಲಿ ಇದ್ದರು.