ಶಶಿಕಾಂತರ ‘ತಂತ್ರ’ ಸಿನಿಮಾಕ್ಕೆ ಪ್ರಶಸ್ತಿಗಳ ಸುರಿಮಳೆ

International Film Festival-2025:Awards for 'Tantra' movie

ಬೆಂಗಳೂರ 02 : ಸಿಲ್ವರ್‌ಸ್ಕೈ ಪ್ರೊಡಕ್ಷನ್ ಸಿನಿಮಾ ಸಂಸ್ಥೆ ಬೆಂಗಳೂರ  ನಿರ್ಮಿಸಿದ   ಕುತೂಹಲಭರಿತ ಹಾರರ್ ಕಥೆ  ಹೊಂದಿದ ‘ತಂತ್ರ'  ಕನ್ನಡ ಚನಲಚಿತ್ರಕ್ಕೆ ತೆಲಂಗಾಣ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2025 ರಲ್ಲಿ ಎರಡು ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಲ್ಲದೆ, ಜಿಆಯ್ ಎಫ್ ಸಿ ಚಲನಚಿತ್ರೋತ್ಸವಕ್ಕೂ   ಚಿತ್ರ ಆಯ್ಕೆ ಆಗಿದ್ದಕ್ಕೆ ಚಿತ್ರ ತಂಡ ಖುಷಿಯಲ್ಲಿದೆ.  

ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ, ತೆಲಂಗಾಣದಲ್ಲಿ ಆಯೋಜಿಸಿದ್ದ ಚಲನಚಿತ್ರೋತ್ಸವದಲ್ಲಿ ಐಎಫ್ ಎಮ್ ಎ ರಾಷ್ಟ್ರೀಯ ಕಾರ್ಯದರ್ಶಿ  ಪುಲಗಂ ರಾಮಚಂದ್ರ ರೆಡ್ಡಿ ಮತ್ತು ರಾಷ್ಟ್ರೀಯ ಅಧ್ಯಕ್ಷ ದೀಲೀಪ ಕುಮಾರ್ ಎಚ್ ಆರ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಬೆಸ್ಟ್‌ ಹಾರರ್ ಫಿಲ್ಮ್‌, ಬೆಸ್ಟ್‌ ರಿ-ರೆಕಾರಿ​‍್ಡಂಗ್ ಸೌಂಡ್  ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಕ್ಕೆ ನಿರ್ಮಾಪಕ, ನಿರ್ದೇಶಕರು ಖುಷಿಯಾಗಿದ್ದಾರೆ. ಬೆಂಗಳೂರು, ಬೆಳಗಾವಿ, ಸಂಕೇಶ್ವರ, ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾದ ಈ ಚಿತ್ರದಲ್ಲಿ    ನಾಯಕರಾಗಿ ಶಶಿಕಾಂತ್, ನಾಯಕಿಯರಾಗಿ ಸೌಜನ್ಯ ಮತ್ತು ಮೇಘಾ, ಹಾಗೂ ಎರಡನೇ ನಾಯಕನಾಗಿ ನಟ ವಿಕ್ರಾಂತ್, ಪ್ರಮುಖ ಪಾತ್ರದಲ್ಲಿ ಸಾಮ್ರಾಟ್ ನಟಿಸಿದ್ದಾರೆ. ಪಾರು ದಾವಣಗೆರೆ ಒಂದು ವಿಶೇಷವಾದ ಗೀತೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಹಾಸ್ಯ ಪಾತ್ರದಲ್ಲಿ ಜೈ ಅಮೋಘ ದಾಸ್ ಅಲ್ಲದೆ ಸಂತೋಷ್ ಕೇರಿ ಎಂಬ ಜನಪ್ರಿಯ ಯೂಟ್ಯೂಬರ್ ಸಹ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ .    

 ಛಾಯಾಗ್ರಹಣ-ರೋಹನ ದೇಸಾಯಿ, ವರ್ಧನ ಬಾಗಲಕೋಟೆ, ಕಥೆ-ವಿಶ್ವನಾಥ, ಶಶಿಕಾಂತ, ಸಾಮ್ರಾಟ, ಚಿತ್ರಕಥೆ, ಸಂಭಾಷಣೆ-ವಿಶ್ವನಾಥ, ಸಾಮ್ರಾಟ, ಸಂಗೀತ ರಮೇಶ್ ಕೃಷ್ಣ , ರೋಹನ್ ದೇಸಾಯಿ,  ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಪ್ರಖ್ಯಾತ ಗಾಯಕರಾದ ರಾಜೇಶಕೃಷ್ಣ   ‘ಓಂ ನಮೋ’ ಎಂಬ ಹಾಡನ್ನು ಹಾಡಿದ್ದಾರೆ.  ಮೂರು ಹಾಡುಗಳಿಗೆ  ಮಾಳು ನಿಪನಾಳ,  ಪ್ರಣತಿ ರಾವ್, ಆರಿಫ್ ಅಸ್ಲಾಂ , ಮೇಘನಾ ಕುಲಕರ್ಣಿ  ಧ್ವನಿ ನೀಡಿದ್ದಾರೆ, ಸಂಕಲನ / ಡಿಐ ಓಂ ಸರವಣನ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ವಿಜಯಪುರದ ನಟರಾಜ ಎಂದೆ ಖ್ಯಾತರಾದ ಶಶಿಕಾಂತ್ ಪಿ ನಾಟಿಕರ್ ನಟಿಸಿ ನಿರ್ಮಿಸಿದ್ದು,   ಸಹ ನಿರ್ದೇಶನ   ಸಾಮ್ರಾಟ ಶ್ರೀನಿವಾಸ.ಎಸ್‌.ಸಿ, ಅಶೋಕ ಕಂಬ್ಳಿ, ಸಹಾಯಕ ನಿರ್ದೇಶನ ವಿತೇಶ ಮಂಜುನಾಥ ರಾಜ, ಅಜಯ ಎ.ಜೆ, ದುರ್ಗೇಶ(ರಾಯದುರ್ಗ),ಭರಣಿ, ಸುಮಂತ ಕಾಮತ, ಮಂಜುನಾಥ ಬಂಕಾಪೂರ ,ಈ ಮೊದಲೇ ‘ಶಂಖನಾದ’ ಚಲನಚಿತ್ರ  ನಿರ್ದೇಶಿಸಿದ್ದ ಗುಳೇದಗುಡ್ಡದ  ವಿಶ್ವನಾಥ   ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದೆ. ಜುಲೈ ತಿಂಗಳು  ರಾಜ್ಯಾದ್ಯಂತ ಚಿತ್ರ ಬಿಡುಗಡೆ ಮಾಡುವದಾಗಿ ನಿರ್ಮಾಪಕ ಶಶಿಕಾಂತ ತಿಳಿಸಿದ್ದಾರೆ.