ಬೆಳಗಾವಿ 12: ಸಾರ್ವಜನಿಕ ಜನ ಜಂಗುಳಿ ಪ್ರದೇಶದಲ್ಲಿ ಹರಿತವಾದ ಕಬ್ಬಿಣದ ತಲವಾರನ್ನು ಕೈಯ್ಯಲ್ಲಿ ಹಿಡಿದುಕೊಂಡು ತಿರುಗುತ್ತಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ಬೆಳಗಾವಿಮಾಳಮಾರುತಿ ಪೊಲೀಸ್ ಠಾಣೆ ಪಿಎಸ್ಐ(ಕ್ಘಾಸು) ಹೊನ್ನಪ್ಪ ತಳವಾರ ಅವರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬೆಳಗಾವಿ ನ್ಯೂ ಗಾಂಧಿನಗರ ಉಸ್ಮಾನ ಗಲ್ಲಿ ನಿವಾಸಿ ರೌಡೀಶೀಟರ್ ಮಲ್ಲಿಕರೆಹಾನ ರಫೀಕ ಪನ್ನಾಳಕರ, (25) ಆರೋಪಿಯಾಗಿದ್ದಾನೆ.
ಈತನು ಮದ್ಯಾಹ್ನದ ಸಮಯದಲ್ಲಿನ್ಯೂ ಗಾಂಧಿನಗರದ ರೈಲ್ವೆ ಹಳಿ ಹತ್ತಿರ ಸಾರ್ವಜನಿಕ ಪ್ರದೇಶದಲ್ಲಿ ಹರಿತವಾದ ಕಬ್ಬಿಣದ ತಲವಾರನ್ನು ಕಾನೂನು ಬಾಹಿರವಾಗಿ ಕೈಯ್ಯಲ್ಲಿ ಹಿಡಿದುಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವುದಕ್ಕಾಗಿ ಅಥವಾ ಇನ್ನಾವುದೋ ಘೋರ ಕೃತ್ಯವೆಸಗುವ ಉದ್ಧೇಶದಿಂದ ತಲವಾರನ್ನು ಜಳಪಿಸುತ್ತಾ ತಿರುಗುತ್ತಿದ್ದಾನೆ ಎಂಬ ಮಾಹಿತಿ ಬಂದ ಮೇರೆಗೆ ಮಾಳಮಾರುತಿ ಪೊಲೀಸ್ ಠಾಣೆ ಪಿಎಸ್ ಐ ಅವರು ಆರೋಪಿಯನ್ನು ಬಂಧಿಸಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು ಆತನಿಂದ ತಲವಾರನ್ನು ವಶಕ್ಕೆಪಡೆದು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.