ಯುವಕರು ರೆಡ್ ಕ್ರಾಸ್ ಸಂಸ್ಥೆಗೆ ಸೇರಿ ದೇಶ ಸೇವೆ ಮಾಡಿ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

Youth join Red Cross and serve country: DC Mohammad Roshan

ಬೆಳಗಾವಿ 13: ರೆಡ್‌ಕ್ರಾಸ್ ಸಂಸ್ಥೆಯು ನ್ಯಾಯಯುತವಾಗಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಾ ಬಂದಿದೆ. ಹೆಚ್ಚೆಚ್ಚು ಯುವಕರು ಉತ್ಸಾಹದಿಂದ ಈ ಸಂಸ್ಥೆ ಸೇರುವ ಮೂಲಕ ದೇಶ ಸೇವೆಯಲ್ಲಿ ತೊಡಗಿಕೊಳ್ಳಬಹುದು ಎಂದು ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕರೆ ನೀಡಿದರು. 

ಇಲ್ಲಿನ ಜಿಲ್ಲಾ ಪಂಚಾಯತ್ ಸಂಭಾಂಗಣ  ಶುಕ್ರವಾರ ಆಯೋಜಿಸಲಾದ ಬೆಳಗಾವಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾಗೂ ಜಿಲ್ಲಾ ವಿಕಲಚೇನರ ಪುನರ್ವಸತಿ ಕೇಂದ್ರ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಶ್ರವಣಯಂತ್ರ ಹಾಗೂ ಗಾಲಿ ಕುರ್ಚಿಯನ್ನು ಫಲಾನುಭವಿಗಳಿಗೆವಿತರಿಸಿ, ಮೂರು ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಈ ಸಂಸ್ಥೆ ಇನ್ನೂ ಬೆಳೆಯಬೇಕಾದರೆ ಸದಸ್ಯರು ಗಟ್ಟಿಯಾಗಿ ನಿಲ್ಲಬೇಕು. ಇಂದಿನ ಯುವಪೀಳಿಗೆಗೆ ನಾಳೆಯ ಭವಿಷ್ಯವನ್ನು ರೂಪಿಸುವ ಉದ್ದೇಶವೇ ರೆಡ್ ಕ್ರಾಸ್ ಸಂಸ್ಥೆ ಧ್ಯೇಯವಾಗಿದೆ. ಜೂನಿಯರ್ ರೆಡ್ ಕ್ರಾಸ್ (ಎಖಅ) ಸದಸ್ಯರನ್ನು ಹೊಂದಿರುವ ಭಾರತೀಯ ರೆಡ್ ಕ್ರಾಸ್, ಯುವಕರಿಗಾಗಿ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸುತ್ತಲೇ ಇರುತ್ತದೆ. ಜಗತ್ತಿನ ಶಾಂತಿ ಕಾಪಾಡುವಲ್ಲಿ ರೆಡ್‌ಕ್ರಾಸ್ ಕೊಡುಗೆ ಸದಾ ಸ್ಮರಣೀಯ. ಇದು ನಿಜಕ್ಕೂ ಶ್ಲಾಘನೀಯ. 

ಈ ವಾರ್ಷಿಕ ಸಭೆಯು ಕೇವಲ ಸಭೆಯಲ್ಲ, ಬದಲಾಗಿ ನಮ್ಮ ಸಮುದಾಯಗಳಲ್ಲಿ ಬದಲಾವಣೆ ತರಲು ಅವಿಶ್ರಾಂತವಾಗಿ ಶ್ರಮಿಸುವ ನಮ್ಮ ಸದಸ್ಯರು, ಸ್ವಯಂಸೇವಕರು ಮತ್ತು ಬೆಂಬಲಿಗರ ಅವಿರತ ಪ್ರಯತ್ನಗಳು ಮತ್ತು ಸಮರೆ​‍್ಣಯ ಆಚರಣೆಯಾಗಿದೆ.ದೇಶದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ಗಟ್ಟಿಯಾಗಿ ಬೆಳೆಯಬೇಕು. ರೆಡ್ ಕ್ರಾಸ್ ಸಂಸ್ಥೆಯ ಸೇವೆಗಾಗಿ ಗ್ರಾಮವೇ ಕಾತುರದಿಂದ ಕಾಯಬೇಕು, ಆ ಮಟ್ಟದಲ್ಲಿ ಈ ಸಂಸ್ಥೆ ಸಿಬ್ಬಂದಿ ಕಾರ್ಯನಿರ್ವಹಿಸಬೇಕು.ಹೀಗಾಗಿ ಹೆಚ್ಚಿನ ಯುವ ಪೀಳಿಗೆ ಇದಕ್ಕೆ ಸೇರಬೇಕು. 

ಎಲ್ಲಾ ಸದಸ್ಯರ ಹೊಂದಾಣಿಕೆ ಬಹಳ ಮುಖ್ಯವಾಗಿದೆ. ಸದಸ್ಯರು ಪ್ರಮಾಣಿಕ ಸೇವೆ ಸಂಸ್ಥೆಯನ್ನು ಬಹಳಷ್ಟು ಎತ್ತರಕ್ಕೆ ಬೆಳೆಸಲು ಸಾದ್ಯ, ಹೀಗಾಗಿ ಎಲ್ಲಾ ನಿರಂತರವಾಗಿ ಶ್ರಮಿಸಿಬೇಕು. ಬೆಂಗಳೂರುಕ್ಕಿಂತ ಅತೀ ಹೆಚ್ಚು ಸದಸ್ಯರನ್ನು ಬೆಳಗಾವಿ ಹೊಂದಿದೆ ಅದು ನಮ್ಮ ಹೆಮ್ಮೆ . 

ನಿಮ್ಮ ಉದಾರ ಮನೋಭಾವ ಮತ್ತು ಅಚಲ ಸಮರೆ​‍್ಣಯ ಮೂಲಕವೇ ಭಾರತೀಯ ರೆಡ್ ಕ್ರಾಸ್ ಅಸಂಖ್ಯಾತ ಹೃದಯಗಳನ್ನು ಸ್ಪರ್ಶಿಸಲು ಮತ್ತು ಜೀವನವನ್ನು ಪರಿವರ್ತಿಸಲು ಸಾಧ್ಯವಾಗಿದೆ. ಇಂದು ಬಡವರಿಗೆ ನೆರಳಾಗಿರುವ ಏಕೈಕ ಸಂಸ್ಥೆ ಇದಾಗಿದೆ.ಜಿಲ್ಲೆಯಲ್ಲಿ ಡಾ. ಸುರೇಶ ಕುಲಕರ್ಣಿ , ಡಾ. ಸುಮಂತ ಎಸ್ ಹಿರೇಮಠ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. 

ಈ ವೇಳೆ ಅಧ್ಯಕ್ಷತೆ ವಹಿಸಿದ ಜಿಪಂ ಸಿಇಓ ರಾಹುಲ್ ಸಿಂಧೆ ಅವರನ್ನು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು, ಇದಕ್ಕೆ ಎಲ್ಲಾ ಸದ್ಯರು ಒಪ್ಪಿಗೆ ಸೂಚಿದರು.ಜಿಪಂ ಸಿಇಓ ರಾಹುಲ್ ಸಿಂಧೆ ಅವರು ಮಾತನಾಡಿ, ಪ್ರಕೃತಿ ವಿಕೋಪ, ಪ್ರವಾಹ ದಂತ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಅಪೂರ್ವ ಸೇವೆ ಸಲ್ಲಿಸುತ್ತಾ ಬಂದಿದೆ. ಬಡವರ ಕಷ್ಟಗಳಿಗೆ ಸ್ಪಂದಿಸುವ ಸಂಸ್ಥೆ ಇದು. ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಸಬೇಕು ಎಂದರು. 

ಈ ವೇಳೆ ಕಾರ್ಯದರ್ಶಿ ಡಾ. ಸುಮಂತ ಎಸ್ ಹಿರೇಮಠ ವಾರ್ಷಿಕ ವರದಿ ವಾಚಿಸಿದರು. ಡಾ. ಪ್ರಿಯಾ ಪುರಾಣಿಕ ಆಡಿಟ್ ವರದಿ ವಾಚಿಸಿದರು ಇದಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದರು. 

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಅದ್ಯಕ್ಷರು ಡಾ. ಸುರೇಶ ಕುಲಕರ್ಣಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಸ್ . ಎನ್‌. ಹುಲಕುಂದ , ಅಶೋಕ ಬದಾಮಿ, ಡಾ. ಸಿ ಆರ್‌. ಗುಡಸಿ, ವಿಕಾಸ ಆರ್‌. ಕಲಘಟಗಿ, ಡಾ. ಡಿ. ಎನ್‌. ಮಿಸಾಲೆ, ಜಿ. ಕೆ. ಶಿವಯೋಗಿಮಠ, ವೀನೊದಿನಿ ಶರ್ಮಾ, ಡಾ. ಅವಿನಾಶ್ ಕವಿ, ಎಸ್‌. ಎನ್ ಮೂಲಿಮನಿ ಹಾಗೂ ಇತರರು ಇದ್ದರು. ಉಪಾದ್ಯಕ್ಷ ಡಾ. ವಿ ಡಿ ಡಾಂಗಿ ವಂದಿಸಿದರು.