ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ: ಕಾಂಗ್ರೆಸ್‌-ಬಿಜೆಪಿ ಮುಖಂಡರ ಜಟಾಪಟಿಯಿಂದ ಮೊಟಕು

New building inauguration program: Cut short by tussle between Congress-BJP leaders

ಜಮಖಂಡಿ 03: ನಗರದ ಕೃಷಿ ಇಲಾಖೆಯ ಕಚೇರಿಯ ನೂತನ ಕಟ್ಟಡ ಉದ್ಘಾಟನಾ ಸರಕಾರಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ, ಹಾಲಿ ಶಾಸಕರ ಜಟಾಪಟಿಯಲ್ಲಿ ಪೂರ್ಣವಾಗದೆ ಕಾಂಗ್ರೆಸ್‌-ಬಿಜೆಪಿ ಮುಖಂಡರ ಕಾರ್ಯಕರ್ತರ ಮಾತಿನ ಚಕಮಕಿ ನಡೆಯಿತು.  

ತರಾತುರಿಯಲ್ಲಿ ಉಸ್ತುವಾರಿ ಸಚಿವ ಆರ್,ಬಿ, ತಿಮ್ಮಾಪೂರ, ಶಾಸಕ ಜಗದೀಶ ಗುಡಗುಂಟಿ ಅವರ ಭಾವಚಿತ್ರದ ಬ್ಯಾನೇರ್ ಪ್ರಿಂಟ್ ವೇದಿಕೆಯಲ್ಲಿ ಹಾಕಿಸಿದ ಅಧಿಕಾರಿಗಳು. ವೇದಿಕೆಯಿಂದ ಕೆಳಗಿಳಿದು ಹೋದ ಜಿಲ್ಲಾ ಉಸ್ತುವಾರಿ ಸಚಿವ ಆರ್,ಬಿ, ತಿಮ್ಮಾಪೂರ, ಕಾರ್ಯಕ್ರಮ ಅರ್ದದಲ್ಲೆ ಮೊಟಕುಗೊಂಡಿತು.  

ಬಿಜೆಪಿ-ಕಾಂಗ್ರೆಸ್ ಮುಖಂಡರ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ, ಶಿಷ್ಟಾಚಾರ ಪಾಲಿಸುವಂತೆ ಶಾಸಕರ ಒತ್ತಾಯ, ಬ್ಯಾನರ್ ತೆಗೆದು ಹಾಕಿದ ಅಧಿಕಾರಿಗಳು, ವೇದಿಕೆಯಿಂದ ಕೆಳಗಿಳಿದು ಹೋದ ಜಿಲ್ಲಾ ಉಸ್ತುವಾರಿ ಸಚಿವ, ಪೊಲೀಸ್ ಬಿಗಿ ಬಂದೊಬಸ್ತ್‌ ಇದು ಜಮಖಂಡಿ ಕೃಷಿ ಇಲಾಖೆಯ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ನಡೆದ ಹೈ ಡ್ರಾಮಾ. 

ನಗರದ ಉಪ ಕೃಷಿ ನಿರ್ದೇಶಕರು-2 ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಶುರುವಿನಲ್ಲೆ ಅರ್ದದಲ್ಲೆ ಮುಕ್ತಾಯಗೊಂಡಿತು. 

ಘಟನೆ ವಿವರ: 

ಜಮಖಂಡಿ ಕೃಷಿಕ ಸಮಾಜದ ಆಡಳಿತ ಪದಾಧಿಕಾರಿಗಳು, ಸದಸ್ಯರು ಕಟ್ಟಡ ಉದ್ಘಾಟನೆಗೆ ಸ್ವಾಗತ ಕೋರಿ ಬ್ಯಾನರ್ ಅಳವಡಿಸಿದ್ದರು. ಇದಕ್ಕೆ ಬಿಜೆಪಿ ಪಕ್ಷದ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು ಇದರಿಂದ ಬ್ಯಾನರ್‌ನ್ನು ತೆರವುಗೊಳಿಸಿದರು. ಬ್ಯಾನರ್‌ನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಪೋಟೊ ಇದ್ದರು ಯಾಕೆ ತೆರುವು ಮಾಡಬೇಕು ಎಂದು ಬಿಜೆಪಿ, ಕಾಂಗ್ರೇಸ್ ಕಾರ್ಯಕರ್ತರ ನಡುವೆ ಹಾಗೂ ಮಾಜಿ ಶಾಸಕ, ಹಾಲಿ ಶಾಸಕರ ನಡುವೆ ಜಟ್ಟಾಪಟ್ಟಿ ನಡೆಯಿತು. 

ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಜಗದೀಶ ಗುಡಗುಂಟಿ ಅವರು ಸರ್ಕಾರಿ ಕಾರ್ಯಕ್ರಮ ಇದು ಇಲ್ಲಿ ಶಿಷ್ಟಾಚಾರ ಪಾಲನೆ ಆಗಬೇಕು ಬೇರೆಯವರು ಇಲ್ಲಿ ವೇದಿಕೆ ಮೇಲೆ ಕುಳಿತುಕೊಳ್ಳಲು ಬಿಡುವದಿಲ್ಲ, ಮಾಜಿ ಶಾಸಕ ಆನಂದ ನ್ಯಾಮಗೌಡ ಬಂದರೆ ನಾನು ವೇದಿಕೆಗೆ ಬರಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ವೇದಿಕೆ ಬ್ಯಾನರ್‌ನಲ್ಲಿ ಶಾಸಕ ಜಗದೀಶ ಗುಡಗುಂಟಿ ಅವರ ಭಾವಚಿತ್ರ ಯಾಕೆ ಹಾಕಿಲ್ಲ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಯಮನೂರ ಮೂಲಂಗಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ತರಾತುರಿಯಲ್ಲಿ ಉಸ್ತುವಾರಿ ಸಚಿವ ಆರ್,ಬಿ, ತಿಮ್ಮಾಪೂರ, ಶಾಸಕ ಜಗದೀಶ ಗುಡಗುಂಟಿ ಅವರ ಭಾವಚಿತ್ರದ ಬ್ಯಾನೇರ್ ಪ್ರಿಂಟ್ ಹಾಕಿಸಿ ವೇದಿಕೆಯಲ್ಲಿ ಹಾಕಿಸಿದರು. 

ನಗರಸಭೆ ಸದಸ್ಯರಿಗೆ ಹಾಗೂ ವಿವಿದ ಸಂಘ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿರಲಿಲ್ಲ ಇದಕ್ಕೆ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಜನಪ್ರತಿನಿಧಿಗಳಿಗೆ ಆಸನದ ವ್ಯವಸ್ಥೆ ಯಾಕೆ ಮಾಡಿಲ್ಲ ಎಂದು ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಕಾಗ್ರೇಸ್ ಕಾರ್ಯಕರ್ತರ ಗದ್ದಲ, 

ಕಟ್ಟಡದ ಶಿಲಾನ್ಯಾಸ ಕಲ್ಲಿನಲ್ಲಿ ನಗರ ಪ್ರಥಮ ಪ್ರಜೆ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ ಅವರ ಹೆಸರನ್ನು ಯಾಕೆ ಹಾಕಿಲ್ಲ ಎಂದು ಅಧಿಕಾರಿಗಳ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ತಿವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿ ಮುಖಂಡರ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ತಾರಕಕ್ಕೆ ಹೋಯಿತು. ಇದರಿಂದ ವೇದಿಕೆಯಲ್ಲಿ ಆಸನರಾಗಿದ್ದ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ವೇದಿಕೆಯಿಂದ ನಿರ್ಗಮಿಸಿದರು. ಅವರ ಜೊತೆ ಶಾಸಕ ಜಗದೀಶ ಗುಡಗುಂಟಿ, ತೇರದಾಳ ಶಾಸಕ ಸಿದ್ದು ಸವದಿ ಅವರು ವೇದಿಕೆಯಿಂದ ಕೆಳಗಿಳಿದರು. 

ತೇರದಾಳ ಶಾಸಕ ಸಿದ್ದು ಸವದಿ ವಿರುದ್ದ ಘೋಷಣೆ, 

ತೇರದಾಳ ಶಾಸಕ ಸಿದ್ದು ಸವದಿ ಅವರು ನಗರಸಭೆ ಅಧ್ಯಕ್ಷ ಗವರೋಜಿ ಅವರ ಜೊತೆ ಅಗೌರವಾಗಿ ಮಾತನಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸಿದ್ದು ಸವದಿ ಅವರ ವಿರುದ್ದ ಘೋಷಣೆ ಕೂಗಿದರು. ವೇದಿಕೆಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಹಾಗೂ ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ ಇಬ್ಬರು ಏರು ಧ್ವನಿಯಲ್ಲಿ ಮಾತಿನ ಚಕುಮಕಿ ನಡೆಯಿತು. ನೀನು ಯಾರೊ ನನಗೆ ಹೇಳುವವನ್ನು ಎಂದು ನಗರಸಭೆ ಅಧ್ಯಕ್ಷ ತೇರದಾಳ ಶಾಸಕರಿಗೆ ಮಾತನಾಡಿದರು. ಅದಕ್ಕೆ ತೇರದಾಳ ಶಾಸಕ ನಿನು ಯಾರು, ನಿನ್ನವಂತವರನ್ನು ನೋಡಿದೆನೆ. ಸುಮ್ಮನೆ ಇರು ಎಂದು ಏರು ಧ್ವನಿಯಲ್ಲಿ ಇಬ್ಬರ ನಡುವೆ ಬೀರುಸಿ ಮಾತಿನ ಚಕುಮಕಿ ನಡೆಯಿತು. 

ಶಾಸಕ ಜಗದೀಶ ಗುಡಗುಂಟಿ ಅವರು ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲಿಸಬೇಕು. ಈ ಹಿಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಿಜೆಪಿ ಪದಾಧಿಕಾರಿಗಳನ್ನು ವೇದಿಕೆಯಲ್ಲಿ ಕುಳ್ಳರಿಸಿಕೊಂಡು ಕಾರ್ಯಕ್ರಮ ಮಾಡಿಲ್ವಾ ಅಂದು ಶಿಷ್ಟಾಚಾರ ನೆನಪು ಆಗಲಿಲ್ವಾ, ನಾನು ಅಧಿಕಾರದಲ್ಲಿದ್ದಾಗ ಬಿಜೆಪಿ ಸರ್ಕಾರ ಇದ್ದರು. ನಾನು ಕ್ಷೇತ್ರಕ್ಕೆ ಬೇಕಾದ ಯೋಜನೆಗಳನ್ನು ತರುವಲ್ಲಿ ಪ್ರಾಮಾಣಿಕ ಕಾರ್ಯ ಮಾಡಿದ್ದೆನೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಸುದ್ದಿಗಾರರಿಗೆ ತಿಳಿಸಿದರು. 

ಮಾಜಿ ಶಾಸಕ ಆನಂದ ನ್ಯಾಮಗೌಡ, 


ಇಬ್ಬರು ಸಿಪಿಐ, ಆರು ಜನ ಪಿಎಸ್‌ಐ, ಎಎಸ್‌ಐ 10 ಜನ, ಡಿಆರ್ ವಾಹನ, 25ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಬೀಗಿ ಬಂದೊಬಸ್ತ್‌ನಲ್ಲಿ  ಜಮಖಂಡಿ ನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮ ತಾಲೂಕಿನಾದ್ಯಂತ ತೀವ್ರ ಚರ್ಚೆಗೆ ಇಡಾಗಿದೆ.