ಸಂಬರಗಿ, 03 :ಲಕ್ಷ್ಮೀವಾಡಿ ಗ್ರಾಮದ ಜೈ ಹನುಮಾನ ಜಾತ್ರಾ ಮಹೋತ್ಸವ ಹಾಗೂ ಓಕಳಿ ನಿಮಿತ್ಯವಾಗಿ ಕುಸ್ತಿ ಪಂದ್ಯಾಟದಲ್ಲಿ ಪೈಲ್ವಾನ ಶಂಕರ ಮಾಯನಟಿ ವಿರೋದ ಪೈಲ್ವಾನ ಪರಸರಾಮ ಬ್ಯಾಕೂಡ ಇವರ ನಡುವೆ ನಡದ ಕುಸ್ತಿ ಜಟಾಪಟಿ ಪಂದ್ಯಾಟದಲ್ಲಿ ಗ್ರಾಮೀಣ ಪ್ರದೇಶದ ಪೈಲ್ವಾನರಾದ ಶಂಕರ ಮಾಯನಟ್ಟಿ ಈ ಕುಸ್ತಿಯಲ್ಲಿ ಗೆದ್ದು ಪ್ರಥಮ ಬಹುಮಾನ ಹಾಗು ಬೆಳ್ಳಿಯ ಗಧೆಯನ್ನು ಪಡೆದುಕೊಂಡಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವು ಜೈ ಹನುಮಾನ ಜಾತ್ರಾ ಮಹೋತ್ಸವ ಹಾಗೂ ಓಕಳಿ ಕಾರ್ಯಕ್ರಮ ನಿಮಿತ್ಯವಾಗಿ ಕುಸ್ತಿ ಪಂದ್ಯಾಟ ಭರ್ಜರಿಯಿಂದ ನಡೆಯಿತು. ಹನುಮಾನ ಜಾತ್ರೆಯನ್ನು ವಿಜೃಂಭನೆಯಿಂದ ಆಚರಿಸಲಾಯಿತು. ಈ ಕುಸ್ತಿಯಲ್ಲಿ ಸಾಂಗಲಿ, ಬೆಳಗಾವಿ, ವಿಜಯಪೂರ ಜಿಲ್ಲೆಗಳಿಂದ ಪೈಲ್ವಾನರು ಕುಸ್ತಿ ಪಂದ್ಯಕ್ಕೆ ಉಪಸ್ತಿತ ಇದ್ದರು. ಪ್ರಥಮ ಬಹುಮಾನ 30 ಸಾವಿರಕ್ಕೆ ನಡೆಯಿತು. ಜಾತ್ರೆಯಲ್ಲಿ 50 ಕ್ಕೂ ಹೆಚ್ಚಿನ ಪೈಲ್ವಾನರು ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದರು. ಜಾತ್ರೆಗೆ ಬರುವ ಭಕ್ತರಿಗಾಗಿ ಮಾಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ವೇಳೆ ಜಾತ್ರಾ ಕಮಿಟಿ ಅದ್ಯಕ್ಷರಾದ ಅನ್ನಾಸಾಹೆಬ ನಂದಿವಾಲೆ ಮಾತಣಾಡಿ ಗ್ರಮೀಣ ಪ್ರದೇಶದಲ್ಲಿ ಇನ್ನು ಪ್ಯಲವಾನರ ಸಂಖ್ಯ ಹೆಚ್ಚು ಆಗಬೇಕು ಶಿಕ್ಷಣದಲ್ಲಿ ನಾವು ಮಂದವರದೀದೀವೆ ಅದೇ ರಿತಿ ಪ್ರತಿ ಮನಿಯಲ್ಲಿ ಒಬ್ಬ ಪ್ಯಲವನ ಇರಬೆಕು ಪ್ಯಲವಾನರ ಸಂಖ್ಯ ಕಡಿಮಿ ಅಗಿದ್ದು ಸರಕಾರ ಗಮನ ಹರಿಸಿ ಪ್ರತಿ ಗ್ರಾಮಕ್ಕೆ ಗರಡಿಮನಿ ಪ್ರಾರಂಭ ಮಾಡಬೆಕು ಅವರಗಿ ಗೌರವ ಧನಾ ನಿಡ ಪ್ರೋತ್ಸಾಹಿಸಬೆಕು ಎಂದು ಅವರು ವಿನಂತಿಸರು.
ಈ ವೇಳೆ ಪೈಲ್ವಾನ ಶಂಕರ ಮಾಯನಟ್ಟ ಮಾತನಾಡಿ ಗ್ರಾಮೀಣ ಭಾಗದಲ್ಲಿ ಇರುವ ಗರಡಿ ಮನೆ ಹಾಳಾಗಿ ಹೋಗಿವೆ. ಪೈಲ್ವಾನರಾಗುವರ ಸಂಖ್ಯೆ ಕಡಿಮೆ ಆಗುತ್ತಿದೆ. ತಮ್ಮ ಬಾಲ್ಯದಿಂದಲೇ ಪೈಲ್ವಾನರು ಕುಸ್ತಿ ಕಲಿಯಲು ಪ್ರಾರಂಭಿಸುತ್ತಿದ್ದಾರೆ. ಆದರೆ ಅವರಿಗೆ ತಾಲೀಮು ಮಾಡಲು ಸರಿಯಾದ ಗರಡಿ ಮನೆಗಳು ಇಲ್ಲ. ಕಾರಣ ಸರಕಾರ ವಿಶೇಷ ಗಮನ ಹರಿಸಿ ಪೈಲ್ವಾನರಿಗೆ ಅನುಕೂಲವಾಗುವಂತೆ ಗರಡಿ ಮನೆಗಳನ್ನು ನಿರ್ಮಿಸಲು ಸರಕಾರಿ ಯೋಜನೆಗಳ ಮೂಲಕ ಅನುದಾಣ ನೀಡಿ ಗರಡಿ ಮನೆ ಪ್ರಾರಭ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಅಗ್ರಹಿಸಿದರು. ಇಲ್ಲವಾದರೆ ಭವಿಷ್ಯದಲ್ಲಿ ಪೈಲ್ವಾನರ ಸಂಖ್ಯೆ ಬೆರಳೆನಿಕೆಯಷ್ಟು ಆಗುವ ಸಾಧ್ಯತೆ ಇದೆ.
ಈ ವೇಳೆ ಜಾತ್ರಾಕಮೀಟಿ ಮುಖಂಡರಾದ ರಾಜು ನಂದಿವಾಲೆ, ಚನ್ನಾಪಾ ನಂದಿವಾಲೆ, ಸತ್ಯಪ್ಪಾ ಪುಜಾರಿ, ಸುರೆಷ ಸಂಗಾಪ್ಪಾ ಬೋರಗಾವೇ, ಸುರೆಷ ಬಾಬು ಬೋರಗಾವೆ, ರಾಜು ನಂದಿವಾಲೆ ಈ ಕಾರ್ಯಕ್ರಮದ ದಿವ್ಯ ಸಾನಿದ್ಯ ಶಂಕರ ಶರಣರು ಅಡಹಳ್ಳಟ್ಟಿ ವಹಿಸಿದ್ದರು, ಸುರೇಶ ವಾಘಮೋಡೆ ಇವರು ಸ್ವಾಗತಸಿ ವಂದಿಸಿದರು.
ಲಕ್ಷ್ಮೀವಾಡಿ ಜಾತ್ರಿಯಲ್ಲಿ ನಡೆದ ಪೈಲ್ವಾನರ ಕುಸ್ತಿ ಪಂದ್ಯಾಟದಲ್ಲಿ ಮಹೇಶ ಅಥಣಿ ಶ್ರೀಧರ ರಾಯಬಾಗ, ಶ್ರಿನಾಥ ಮಾಯನಟ್ಟಿ - ರಾಹುಲ ಜಲಾಲಪುರ, ಭೀಮು ಅಥಣಿ-ಮಹಾದೇವ ಜಲಾಲಪುರ, ಭೂಪತಿ ಬಡಚಿ - ಸುರೇಶ ಮಸರಗುಪ್ಪಿ, ಕಿರಣ ಯಂಕಚಿ-ಮುತ್ತು ಮಸರಗುಪ್ಪಿ, ಸೋಮು ಅಥಣಿ - ರಾಜು ಮಸರಗುಪ್ಪಿ, ಸದಾಶಿವ ಶಿವನೂರ - ಪ್ಯಥ್ವಿ ಅಥಣಿ, ಪ್ರೀತಮ ಬ್ಯಾಕೂಡ - ರಾಕೇಷ ಜಲಾಲಪುರ ಇವರ ನಡುವೆ ಕುಸ್ತಿ ಪಂದ್ಯಾಟ ನಡೆದವು.