ಬೆಳಗಾವಿ 10: ಗಡಿನಾಡು ಬೆಳಗಾವಿಯ ‘ಕವಿಎಸ್.ಡಿ.ಇಂಚಲ ಹಾಗೂ ಕವಿ ಉಳುವೀಶ ಹುಲೆಪ್ಪನವರ ಮಠ ಸ್ಮಾರಕ ಪ್ರತಿಷ್ಠಾನ’ವು ಕೊಡಮಾಡುವ 2024ನೇ ಸಾಲಿನ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗಳು ಪ್ರಕಟ ಗೊಂಡಿದ್ದು, ಮುಧೋಳ ರನ್ನಬೆಳಗಲಿಯ ಸುರೇಶ ರಾಜಮಾನೆ ಅವರ ‘ರಾಜಿಯಾಗದ ರಕ್ತದಕಣ’ ಕಾವ್ಯಕೃತಿಗೆ ‘ಕವಿ ಎಸ್.ಡಿ.ಇಂಚಲ ಕಾವ್ಯಪ್ರಶಸ್ತಿ’ ಹಾಗೂ ವಿಜಯಪುರ ಸಿಂದಗಿಯ ಪ್ರೊ.ರಾ.ಶಿ.ವಾಡೇದ ಅವರ ‘ಎತ್ತಿನ ಬಂಡಿ’ ಮಕ್ಕಳ ಕಾವ್ಯಕೃತಿಗೆ ‘ಕವಿ ಉಳುವೀಶ ಹುಲೆಪ್ಪನವರ ಮಠ’ ಕಾವ್ಯಪ್ರಶಸ್ತಿದೊರೆತಿವೆ ಎಂದು ಸ್ಮಾರಕ ಪ್ರತಿಷ್ಠಾನವು ತಿಳಿಸಿದೆ.
ಪ್ರತಿಷ್ಠಾನದ ಪ್ರಶಸ್ತಿಗೆ ಪುರಸ್ಕೃತಗೊಂಡ ಸುರೇಶ ರಾಜಮಾನೆ ಹಾಗೂ ರಾ.ಶಿ.ವಾಡೇದ ಉಭಯ ಕವಿಗಳಿಗೆ ಪ್ರಶಸ್ತಿಯನ್ನು 19 ಜೂನ 2025ರಂದು ಸಂಜೆ 4.00 ಗಂಟೆಗೆಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಸಿ.ಎಂ.ತ್ಯಾಗರಾಜ ಆಗಮಿಸಲಿದ್ದು, ಹಂಪಿ ವಿವಿ ಪ್ರಾಧ್ಯಾಪಕರಾದ ಡಾ.ವೆಂಕಟಗಿರಿ ದಳವಾಯಿ ಸ್ಮಾರಕ ಉಪನ್ಯಾಸ ನೀಡಲಿದ್ದಾರೆ. ಹಿರಿಯ ಸಾಹಿತಿಗಳಾದ ಪ್ರಿ.ಬಿ.ಎಸ್.ಗವಿಮಠ, ಡಾ.ಬಸವರಾಜ ಜಗಜಂಪಿ, ಡಾ.ಸರಜೂಕಾಟ್ಕರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಗುರುದೇವಿ ಹುಲೆಪ್ಪನವರ ಮಠಅವರು ವಹಿಸಲಿದ್ದಾರೆ ಎಂದು ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷೆ ಅಧ್ಯಕ್ಷರಾದ ಡಾ.ಗುರುದೇವಿ ಹುಲೆಪ್ಪನವರ ಮಠ, ಕಾರ್ಯದರ್ಶಿ ಡಾ.ಮಹೇಶ ಗುರನ ಗೌಡರ, ಕೋಶಾಧ್ಯಕ್ಷೆ ವಿನಿತಾ ವಿವೇಕ ಹಂಚಿನಮನಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.