ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ನೂತನ ಕಚೇರಿ ಉದ್ಘಾಟನೆ

Primary Agricultural Credit Cooperative Society: New office inaugurated

ಕೊಪ್ಪಳ ಮೇ 24, ಸಹಕಾರ ಸಂಘದ ಮೂಲಕ ಹಲವು ವ್ಯಾಪಾರಸ್ಥರಿಗೆ, ನೂರಾರು ರೈತರಿಗೆ ಕೊಟ್ಯಂತರ ರೂಪಾಯಿ ಕೃಷಿ ಸಾಲ ನೀಡಲಾಗುತಿದ್ದು, ಸಹಕಾರಿ ಸಂಘದಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ, ಸೋತವರಿಗೆ ಕೈಹಿಡಿದು, ಸಹಕಾರ ಸಂಘ ಎರಡು ಸರ್ಕಾರಗಳು ಸಹಕಾರ ಸಂಘಗಳಿಗೆ ಅದ್ಯತೆ ನೀಡುತ್ತಿವೆ. ಸರಕಾರದ ಕಟ್ಟಡಗಳನ್ನು ನಮ್ಮ ಕಟ್ಟಡ ಎಂದು ಉಳಿಸಬೇಕು, ಸಹಕಾರ ಸಂಘಗಳು ರೈತರ ಬೆನ್ನುಲುಬಾಗಿ ನಿಂತಿವೆ, ಸಹಕಾರ ಸಂಘಗಳು ನಮ್ಮ ಬ್ಯಾಂಕ್‌ಗಳಿಗೆ ಬೆನ್ನುಲುಬಾಗಿ ನಿಂತಿವೆ ಎಂದು ಶಾಸಕ ಕೆ ರಾಘವೇಂದ್ರ  ಹೇಳದರು. 

ಅವರು ತಾಲೂಕಿನ ಬಂಡಿ ಹರ್ಲಾಪುರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಮತ್ತು ನೀರು ಬಳಕೆದಾರರ ಸಂಘದ ಕಟ್ಟಡ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. 

ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ  ಸಹಕಾರ ಸಂಘವು ಆರಂಭವಾಯಿತು, ಹಲವು ಮುಖಂಡರ ಸಹಕಾರದಿಂದ ಇಂದು ಉತ್ತಮ ಕಟ್ಟಡ ನಿರ್ಮಾಣವಾಗಿದೆ. 199 ಶೇರುದಾರರಿದ್ದು  ಈಗ 665 ಶೇರುದಾರರು ಇದ್ದಾರೆ. ಮೊದಲ ಬಂಡವಾಳ 2 ಲಕ್ಷ  90 ಸಾವಿರದಿಂದ,3 ಕೋಟಿ 8 ಲಕ್ಷ ತೊಂಬತ್ತು ಸಾವಿರ ಪ್ರಗತಿಯತ್ತ ಸಾಗುತ್ತಿದೆ, ಸಹಕಾರಿ ಶಿಕ್ಷಣ ಕ್ಷೇತ್ರದ ಜೊತೆಗೆ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಗತಿಯತ್ತ ಸಾಗುತ್ತಿದೆ ಎಂದು ಪ್ರಾಸ್ತಾವಿಕವಾಗಿ ಹನುಮಂತಪ್ಪ ಬನ್ನಿಕೊಪ್ಪ ಸಂಘ ಬೆಳೆದು ಬಂದ ಹಾದಿ ತಿಳಿಸಿದರು. ಜಿಲ್ಲಾ ತಾಲೂಕು ಸಹಕಾರ ಸಂಘಗಳಲ್ಲಿ ಮೊದಲಿಗೆ ಕುರ್ಚಿ ಇರಲಿಲ್ಲ ಈಗ ಸಮೃದ್ಧಿಯಾಗಿವೆ. ದೇಶಕ್ಕೆ ಎರಡು ಪವಿತ್ರ ಕ್ಷೇತ್ರಗಳು ಶಿಕ್ಷಣ ಮತ್ತು ಸಹಕಾರ ಸಂಘಕ್ಕೆ ಜೀವ ಕೊಟ್ಟಾಗ ಮಾತ್ರ ಗ್ರಾಮ ಅಭಿವೃದ್ಧಿ ಸಾಧ್ಯ.ಈಗ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ 13 ನೂರು ಕೋಟಿ ಪ್ರಗತಿಯಲ್ಲಿದೆ.ಸಹಕಾರಿ ಸಂಘದಲ್ಲಿ ರಾಜಕೀಯ ಇರಬಾರದು ಎಂದು ನಿರ್ದೇಶಕರಲ್ಲಿ   ರಮೇಶ್ ವೈದ್ಯ ಮನವರಿಕೆ ಮಾಡಿದರು. 

ಶಾಸಕ ಕೆ ರಾಘವೇಂದ್ರ ಹಿಟ್ನಾಳ್, ಸಂಸದ ಕೆ ರಾಜಶೇಖರ್ ಹಿಟ್ನಾಳ, ಕೆ ಚಂದ್ರಶೇಖರ್ , ರಮೇಶ್ ವೈದ್ಯ, ಕೆ ವೆಂಕಟಯ್ಯ ,ಕಾಷಯ್ಯ ಸ್ವಾಮಿ ಗವಿಮಠ,ಮಾಜಿ ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಗ್ರಾಮ ಪಂಚಾಯಿತಿ ಸದಸ್ಯ ಚನ್ನಕೃಷ್ಣ ಗೊಲ್ಲರ,ರಬೇಕಾ ಬಾಬು ,ವಿ ಎಸ್ ಗಿರೆಡ್ಡಿ, ಶರಣಪ್ಪ ರಾಟಿ ,ಉಪನಿಬಂಧಕ ಪ್ರಕಾಶ್ ಸಜ್ಜನ್, ಸುದರ್ಶನ್ ಶರ್ಮಾ, ಶಾಖಾ ವ್ಯವಸ್ಥಾಪಕ ತೇಜಪ್ಪ ಎಲ್‌.ದೊರೆಸ್ವಾಮಿ, ಯಂಕಪ್ಪ ಹೊಸಳ್ಳಿ , ಸಂಗಮೇಶ ದೆಸಾಯಿ, ವಿಠ್ಠಲ್ ನಾವ್ಡೆ ,ನಿರ್ದೇಶಕರಾದ ಎಂ ಮೋಹನ್ , ಶಂಕರ್ ಶ್ಯಾಸಲ್, ಯಂಕಪ್ಪ ಜಿ, ರಾಮಮೂರ್ತಿ, ಸಣ್ಣ ಚೆನ್ನರೆಡ್ಡಿ,ಮೀರ್ ಅಹ್ಮದ್ ಖಾನ್, ಕನಕಪ್ಪ ಮುಂಡರಗಿ, ಅಬ್ಬಲೆಗೆಪ್ಪ, ಚಿನ್ನತಾಂಬಿ, ಭಾಗ್ಯಲಕ್ಷ್ಮಿ, ರೇಣುಕಮ್ಮ, ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಬಸವನಗೌಡ ಪಾಟೀಲ್, ಸಿಬ್ಬಂದಿ ರಾಘವೇಂದ್ರ ಇಲ್ಲೂರ , ಹನುಮಂತಪ್ಪ ಬನ್ನಿಕೊಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.