ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಅಧಿಕಾರೇತರ ಸದಸ್ಯರ ನೇಮಕ

Prime Minister's new 15-point programme

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ  

ಬೆಳಗಾವಿ 18: ಪತ್ರಕರ್ತರಾದ ಲೂಯಿಸ್ ಅಂಥೋಣಿ ರೋಡ್ರಿಗ್ಸ್‌ ಸೇರಿದಂತೆ ಒಟ್ಟು ಆರು ಜನರನ್ನು ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಿ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಆದೇಶಿಸಿದೆ. 

ಬೆಳಗಾವಿ ನಗರದ ಶಾಹಿದ್ ಎಂ ಮೆಮನ್, ಮೊಹಮ್ಮದ್ ಇಕ್ಬಾಲ್ ಕಿಲ್ಲೇದಾರ್, ನಿಯಾಜ್ ಸೌದಾಗರ್, ಲೂಯಿಸ್ ಅಂಥೋಣಿ ರೋಡ್ರಿಗ್ಸ್‌, ಎಸ್‌.ಪರ್ಮಿಂದರ್ ಸಿಂಗ್ ಭಾಟಿಯಾ, ವಿನೋದ್ ಸುರೇಂದ್ರ ಅಲಿಯಾಸ್ ಕೋಮಾಲಣ್ಣ ದೊಡ್ಡನ್ನವರ ಅವರುಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಲಾಗಿರುತ್ತದೆ.