ಪ್ರಧಾನಿ ನರೇಂದ್ರ ಮೋದಿ ಭಾರತೀಯರ ಬದುಕಿಗೆ ಆಶಾಕಿರಣ: ನಿರಾಣಿ

Prime Minister Narendra Modi is a ray of hope for the lives of Indians: Nirani

ಬೀಳಗಿ 16: ಚೈತನ್ಯಶೀಲ, ಸಮರ್ಥ ಮತ್ತು ದೃಢ ನಿಲುವಿನ ಪ್ರಧಾನಿ ನರೇಂದ್ರ ಮೋದಿಯವರು ಕೋಟ್ಯಾಂತರ ಭಾರತೀಯರ ಬದುಕಿಗೆ ಆಶಾಕಿರಣವಾಗಿದ್ದಾರೆ. ಅವರ 13 ವರ್ಷ ಆಡಳಿತದ ಸಾಧನೆ ವಿಶ್ವ ದಾಖಲೆ ಮಾಡಿದ್ದು, ಅವರ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತದಿಂದ ದೇಶದ ಸುರಕ್ಷತೆ ಹಾಗೂ ಅಭಿವೃದ್ದಿ ಬದಲಾವಣೆಗೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ಆರ್‌.ನಿರಾಣಿ ಹೇಳಿದರು. 

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರು 13ವರ್ಷಗಳ ಕಾಲ ಆಡಳಿತದ ಸಾಧನೆ ಮತ್ತು ವಿಕಸಿತ ಭಾರತ ಅಮೃತಕಾಲ ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.  

ಅಭಿವೃದ್ದಿಯ ಪಥದಲ್ಲಿ ವಿಶ್ವವೇ ಭಾರತದತ್ತ ಮುಖ ಮಾಡುವಂತೆ ಮಾಡಿದ ದಿವ್ಯ ಚೈತನ್ಯ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗಿದೆ. ರಾಷ್ಟ್ರಕ್ಕೆ ಇವರ ಕೊಡುಗೆ ಅಪಾರವಾಗಿದೆ. ದೇಶದ ಜನತೆ ಸುರಕ್ಷಿತವಾಗಿರಬೇಕು. ಜನರಿಗೆ ಆರ್ಥಿಕ ಚೈತನ್ಯ ನೀಡುವ ದೃಷ್ಠಿಯಲ್ಲಿ ಅನೇಕ ಜನಪರವಾದ ಕಾರ್ಯಕ್ರಮಗಳು ಮತ್ತು ದೇಶದ ರಕ್ಷಣೆಗೆ ಬೇಕಾಗುವ ಎಲ್ಲ ವ್ಯವಸ್ಥೆ ಕಲ್ಪಿಸಲು ಸೈನಿಕರಿಗೆ ಅಧಿಕಾರಿ ನೀಡಿ ಅವರಿಗೆ ಬೇಕಾಗುವ ಎಲ್ಲ ಸೌಲಭ್ಯಗಳು ಒದಗಿಸಿದ್ದರ ಪ್ರಯುಕ್ತ ಇಂದು ಭಾರತ ಬಲಿಷ್ಟ ರಾಷ್ಟ್ರವಾಗಿ ಹೊರಹೊಮ್ಮಿದೆ. ಮೋದಿಯವರು ಒಬ್ಬ ವ್ಯಕ್ತಿಯಲ್ಲ ಅವರು ನಮ್ಮ ದೇಶದ ಸಂರಕ್ಷಣೆ ಮಾಡುವ ಒಂದು ಅದ್ಬುತ ಶಕ್ತಿ. ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ ಅಮಾಯಕ 26 ಜನರನ್ನು ಕೊಂದ ಪಾಕಿಸ್ತಾನಿ ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾದ ನಮ್ಮ ಸೈನಿಕರು ಆಪರೇಶನ್ ಸಿಂದೂರದ ಮೂಲಕ ಉಗ್ರಗಾಮಿಗಳ ಅಡಗುತಾಣಗಳ ದಾಳಿ ಮಾಡಿ ಅವರ ತಾಣವನ್ನು ದ್ವಂಸಗೊಳಿದ್ದು ನೂರಾರು ಉಗ್ರಗಾಮಿಗಳ ಕೊಂದು ಹಾಕಿದ್ದಾರೆ. ಇಂತಹ ದಿಟ್ಟ ನಿರ್ಧಾರ ಕೈಗೊಳ್ಳುವ ಏಕೈಕ ಪ್ರಧಾನಿ ನರೇಂದ್ರ ಮೋದಿಯವರ ಸೇವೆ ಅಪಾರವಾಗಿದೆ. ದೇಶದ ರಕ್ಷಣೆಗೆ ಮೋದಿಯವರು ಬೇಕು ಅವರು ಕೈಬಲಪಡಿಸಲು ಕಾರ್ಯಕರ್ತರು ಕೇಂದ್ರ ಸರಕಾರದ ಸಾಧನೆ ಮತ್ತು ಯೋಜನೆಗಳು ಮತದಾರರ ಮನ ಮುಟ್ಟಿಸುವ ಕೆಲಸ ಮಾಡಿ, ಮುಂಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಧ್ವಜ್ ಹಾರಿಸುವಲ್ಲಿ ಸಂಘಟನಾ ಶಕ್ತಿಯಾಗಬೇಕು ಎಂದರಲ್ಲದೆ, ಉದ್ಯಮಶೀಲತೆಯನ್ನು ಹೆಚ್ಚಿಸುವ ಸಲುವಾಗಿ ಮೇಕ್ ಇನ್ ಇಂಡಿಯಾ ಅಭಿಯಾನ, ಸಮೃದ್ಧ ಭಾರತಕ್ಕಾಗಿ ರೈತರ ಸಬಲೀಕರಣ, ಹಿಂದೆಂದೂ ಕಾಣದ ಪಾರದರ್ಶಕತೆಯತ್ತ ಭಾರತ. ಅಭಿವೃದ್ದಿಗೆ ಹೊಸ ಆಯಾಮ, ಸಂಸದ ಆದರ್ಶ ಗ್ರಾಮ ಯೋಜನೆ. ಸ್ವಾತಂತ್ರ್ಯದ 67 ವರ್ಷಗಳ ಬಳಿಕವೂ ಭಾರತದ ಬಹುಪಾಲ ಜನಸಂಖ್ಯೆಯು ಬ್ಯಾಂಕಿನ ಸೌಲಭ್ಯ. ಬೇಟಿ ಬಚಾವೋ, ಬೇಟಿ ಪಡಾವೋ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ, ಸುಕನ್ಯಾ ಸಮೃದ್ಧಿ, ಪ್ರಧಾನ ಮಂತ್ರಿ ಜನಧನ ಯೋಜನೆ, ಸುರಕ್ಷ ವಿಮೆ, ಜೀವನಜ್ಯೋತಿ ವಿಮೆ, ನಮಾಮಿ ಗಂಗೆ, ಅಟಲ್ ಪಿಂಚಣಿ ಇನ್ನೂ ಹಲುವಾರು ಯೋಜನೆಗಳು ಕೈಗೊಂಡಿದ್ದಾರೆ ಎಂದರು. 

ಬಿಜೆಪಿ ತಾಲೂಕಾ ಅಧ್ಯಕ್ಷ ಹೊಳಬಸು ಬಾಳಶಟ್ಟಿ, ಮೋಹನ ಜಾಧವ ಹಾಗೂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ ಮಾತನಾಡಿದರು. ಮಲ್ಲಪ್ಪ ಶಂಭೋಜಿ, ಪಪಂ ಅಧ್ಯಕ್ಷ ಮುತ್ತು ಬೋರ್ಜಿ, ಹಣಮಂತಗೌಡ ಪಾಟೀಲ, ಮಹಿಳಾ ಉಪಾಧ್ಯಕ್ಷೆ ಕಾವೇರಿ ರಾಠೋಡ, ಮಿಥುನ್ ನಾಯಕ ಇತರರು ಇದ್ದರು.