ಕಾಗವಾಡ, 18 : ಕಳೆದ ವಾರ ಬೆಳಗಾವಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾಗಿ ರಂಜನಾ ಪೋಳ ಅಧಿಕಾರ ವಹಿಸಿಕೊಂಡಿದ್ದರು. ಅವರ ನೇಮಕ ಪ್ರಶ್ನಿಸಿ, ಹಿಂದಿನ ಉಪ ನಿಬಂಧಕ ರವೀಂದ್ರ ಪಾಟೀಲ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಬೇಡಿಕೆಯನ್ನು ಪುರಸ್ಕರಿಸಿದ ಹೈಕೋರ್ಟ್ ಸೋಮವಾರ ದಿ.17 ರಂದು ರವೀಂದ್ರ ಪಾಟೀಲ ಅವರನ್ನು ಉಪ ನಿಬಂಧಕರಾಗಿ ಮರು ನೇಮಕ ಮಾಡುವಂತೆ ಆದೇಶ ಹೊರಡಿಸಿದೆ.
ರವೀಂದ್ರ ಪಾಟೀಲ ಮೂಲತಃ ತಾಲೂಕಿನ ಜುಗೂಳ ಗ್ರಾಮದ ಸಿಬಿಕೆಎಸ್ಎಸ್ ಕಾರ್ಖಾನೆ ಚಿಕ್ಕೋಡಿ ಇದರ ನಿರ್ದೇಶಕರು, ಗ್ರಾಮದ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಹಿರಿಯ ಮುಖಂಡ ಅಣ್ಣಾಸಾಬ ಪಾಟೀಲ ಇವರ ಸುಪುತ್ರರಾಗಿದ್ದು, ಬೆಳಗಾವಿಯ ಸಹಕಾರ ಸಂಘಗಳ ಕಚೇರಿಯಲ್ಲಿ ನಾಳೆ ಬುಧವಾರ ದಿ.19 ರಂದು ಉಪ ನಿಬಂಧಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.