ನೇಸರಗಿ 29 : ಸಮೀಪದ ಸುತಗಟ್ಟಿ ಗ್ರಾಮದಲ್ಲಿ ದಿ. 26-3-2025 ರಂದು ಬಾರಿ ಗುಡುಗು ಸಹಿತ ಮಳೆಯಿಂದ 3 ಜನರಿಗೆ ಸಿಡಿಲು ಬಡಿದ ಪರಿಣಾಮವಾಗಿ ಸುತಗಟ್ಟಿ ಗ್ರಾಮದ ಬಸವರಾಜ ನಾಗಪ್ಪ ಸಂಗೊಳ್ಳಿ ಸ್ಥಳದಲ್ಲಿಯೇ ಮೃತಪಟ್ಟು ಇನಿಬ್ಬರಿಗೆ ತೀವ್ರ ಗಾಯಗಳಾಗಿದ್ದವು. ಅದಕ್ಕಾಗಿ ಇಂದು ಶನಿವಾರದಂದು ಸುತಗಟ್ಟಿ ಗ್ರಾಮಕ್ಕೆ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಬೇಟಿ ನೀಡಿ ಸರ್ಕಾರದ 5 ಲಕ್ಷ ರೂಪಾಯಿಗಳ ಚೆಕ್ನ್ನು ಮೃತರ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೈಲಹೊಂಗಲ ತಹಸೀಲ್ದಾರ ಹಣಮಂತ ಶಿರಹಟ್ಟಿ ಮುಖಂಡ ಜಗದೀಶ ಪಾಟೀಲ ಪಿ ಡಿ ಓ ವನಜಾಕ್ಷಿ ಪಾಟೀಲ ರಾಮಪ್ಪ ಬಳಗನ್ನವರ ಲಕ್ಷ್ಮಣ ಬಳಗನ್ನವರ ಸೇರಿದಂತೆ ಮೃತರ ಕುಟುಂಬಸ್ಥರು ಗ್ರಾಮಸ್ಥರು ಉಪಸ್ಥಿತರಿದ್ದರು.