8ನೇ ದಿನ ಪೂರೈಸಿದ ಸತ್ಯಾಗ್ರಹ

Satyagraha: 8th day

ತಾಳಿಕೋಟೆ 03: ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಜಿಲ್ಲಾ ಘಟಕ ಹಾಗೂ ಸ್ಥಳೀಯ ಕಲಕೇರಿ ಗ್ರಾಮ ಘಟಕದ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವು ಸೋಮವಾರ ಎಂಟು ದಿನಕ್ಕೆ ಕಾಲಿಟ್ಟಿದೆ.   

ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಇಓ ಎನ್‌.ಎಸ್‌.ಮಸಳಿ, ಪಿಡಿಓ ಬಿ.ಎಂ.ಸಾಗರ ಅವರು, ಕಲಕೇರಿ ಗ್ರಾಮ ಪಂಚಾಯಿತಿಗೆ ಬಸವ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಮಂಜೂರಾಗಿರುವ 450 ಮನೆಗಳನ್ನು ಹೋರಾಟಗಾರರ ಬೇಡಿಕೆಯಂತೆ ಮುಂದಿನ ಗ್ರಾಮಸಭೆಯಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಲಾಗುವುದು ಎಂಬ ಪತ್ರವನ್ನು ನೀಡಿದರು.   

ಆದರೆ ಹೋರಾಟಗಾರರು ತಮ್ಮ ಬೇಡಿಕೆಗಳಿಗೆ ತಾತ್ವಿಕ ಅಂತ್ಯ ಸಿಗುವವರೆಗೆ ಅಹೋರಾತ್ರಿ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.  ಸೋಮಶೇಖರ ಬಡಿಗೇರ, ಡಿಎಸ್‌.ಎಸ್‌. ವಲಯ ಸಂಚಾಲಕ ಇರಗಂಟೆಪ್ಪ ಬಡಿಗೇರ, ಸಿದ್ದು ಪೂಜಾರಿ, ಮಲ್ಲು ಪೂಜಾರಿ, ಜೈಭೀಮ ಉತಾಳೆ, ಸಂಜು ಉತಾಳೆ, ಸೋಮು ಹೊಸಮನಿ, ದೇವು ವಡ್ಡರ, ಬಸವರಾಜ ಪೂಜಾರಿ ಹಾಗೂ ಇತರರು ಹಾಜರಿದ್ದರು.