ಧರ್ಮಗ್ರಂಥ ಸುಟ್ಟ ಪ್ರಕರಣ : ಸಿಐಡಿ ಅಧಿಕಾರಿಗಳಿಂದ ಚುರುಕುಗೊಂಡ ಶೋಧ ಕಾರ್ಯ

Scripture burning case: CID officers intensify search operations

ಬೆಳಗಾವಿ : ಇತ್ತೀಚೆಗೆ ಸಂತಿಬಸ್ತವಾಡ ಗ್ರಾಮದಲ್ಲಿ ಧರ್ಮಗ್ರಂಥ ಕುರಾನ್ ಸುಟ್ಟ ಪ್ರಕರಣವನ್ನು ಜಾಡು ಹಿಡಿದಿರುವ ಸಿಐಡಿ ಅಧಿಕಾರಿಗಳ ತಂಡವು ಆರೋಪಿಗಳ ಪತ್ತೆಗೆ ತನಿಖೆ ಪ್ರಾರಂಭಿಸಿದೆ.


    ಸಂತಿಬಸ್ತವಾಡ ಗ್ರಾಮದಲ್ಲಿ ಈಗ ಡಿಐಸಿ ಡಿವೈಎಸ್ಪಿ ಸುಲೇಮಾನ್ ತಹಶಿಲ್ದಾರ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಬೆಳಗಾವಿ ಪೊಲೀಸರಿಗೆ ತಲೆನೋವಾಗಿದ್ದ ಹೈಪ್ರೊಪೈಲ್ ಪ್ರಕರಣದ ಗಂಭೀರತೆ ಅರಿತು ಸಿಐಡಿಗೆ ರಾಜ್ಯ ಸರಕಾರ ಈ ಪ್ರಕರಣ ವರ್ಗಾವಣೆ ಮಾಡಿದೆ. 

     ಈ ಪ್ರಕರಣ ವರ್ಗಾವಣೆ ಆಗುತ್ತಿದ್ದಂತೆ ಫೀಲ್ಡಿಗಿಳಿದ ಸಿಐಡಿ ಅಧಿಕಾರಿಗಳ ತಂಡವು ಬೆಳಗಾವಿ ಗ್ರಾಮೀಣ ಠಾಣಾ ಪೊಲೀಸರಿಂದ ಸಿಐಡಿ ತನಿಖಾ ವರದಿ ಮಾಹಿತಿ ಕಲೆ ಹಾಕುತ್ತಿದೆ.

   ಸಂತಿಬಸ್ತವಾಡ ಗ್ರಾಮದಲ್ಲಿ

ಕುರಾನ್ ಕಳ್ಳತನ ಮಾಡಿಕೊಂಡ ಹೋಗಿರುವ ಮಸೀದಿ ಸ್ಥಳ ಹಾಗೂ ಕುರಾನ್ ಸುಟ್ಟಿರುವ ಘಟನಾ ಸ್ಥಳ ಸಿಐಡಿ ಅಧಿಕಾರಿಗಳ ತಂಡ ಪ್ರಾಥಮಿಕ ತನಿಖೆ ನಡೆಸುತ್ತಿದೆ.

   ಸಿಐಡಿ ಅಧಿಕಾರಿಗಳ ತಂಡಕ್ಕೆ ಬೆಳಗಾವಿ ಪೊಲೀಸರು ಸಾಥ್ ನೀಡುತ್ತಿದ್ದಾರೆ. ನಾಳೆಯೂ ಸಿಐಡಿ ಅಧಿಕಾರಿಗಳ ತಂಡದಿಂದ ಪ್ರಕರಣದ ತನಿಖೆ ಆರಂಭ ನಡೆಯಲಿದೆ ಎಂದು ತಿಳಿದುಬಂದಿದೆ. 

   ಈ ಧರ್ಮಗ್ರಂಥ ಸುಟ್ಟ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಮುಸ್ಲಿಂ ಸಂಘಟನೆಗಳು ಬೃಹತ್ ಹೋರಾಟ ಮಾಡಿದ್ದವು. ಇದಾದನಂತರ ಮುಸ್ಲಿಂ ಸಮಾಜದ ವಿರುದ್ಧ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಲಾಗಿರುವದನ್ನು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.