ಶ್ರೀಹರಿ ಇವರ ಸಂಪಾದಕತ್ವದಲ್ಲಿ ಶ್ರೀಮದ್ವಾಲ್ಮೀಕಿ ರಾಮಾಯಣ ಮಾರುಕಟ್ಟೆಗೆ

Srimad Valmiki Ramayana to be released in the market under the editorship of Srihari

ಬಳ್ಳಾರಿ 03: ಒಟ್ಟು ಹನ್ನೊಂದು ಸಂಪುಟಗಳ ರಾಮಾಯಣ ಗ್ರಂಥ ಸಮುಚ್ಚಯ ಜನ ಸಾಮಾನ್ಯರ ಮನೆ ಬಾಗಿಲಿಗೆ ಬರಲು ಸಿದ್ಧಗೊಂಡು ನಿಂತಿದೆ. ಬೆಂಗಳೂರಿನ ಖ್ಯಾತ ಪ್ರಕಾಶಕರಾದ ‘ಭಾರತದರ್ಶನ ಪ್ರಕಾಶನ’ ಇವರು ಈ ಸಮುಚ್ಚಯವನ್ನು ಪ್ರಕಟಿಸಿದ್ದಾರೆ.ಸಂಪಾದಕ ಮಂಡಲಿಯ ಆದಿ ಅಧ್ಯಕ್ಷರಾದ ಬ್ರಹೈಕ್ಯ ಪರಮಪೂಜ್ಯ ಶ್ರೀ ರಂಗಪ್ರಿಯ ಮಹಾದೇಶಿಕ ಸ್ವಾಮಿಗಳು. ಆದಿ ಸಂಪಾದಕರಾದ ದಿ. ವಿದ್ವಾನ್ ಹೆಚ್‌.ಎನ್‌. ರಂಗಸ್ವಾಮಿ.ದಿ. ವಿದ್ವಾನ್‌ರಾಮೇಶ್ವರಾವಧಾನಿ, ದಿ. ನೆ.ವೆಂ. ಶ್ರೀನಿವಾಸರಾಯ, ಸಂಪಾದಕರಾದ ಶ್ರೀಹರಿ ಇವರ ಆಶಯದಂತೆ ಶ್ರೀಮದ್ವಾಲ್ಮೀಕಿ  ರಾಮಾಯಣದ ಎಲ್ಲಾ ಕಾಂಡಗಳು, ಸರ್ಗಗಳು ಹಾಗೂ ಶ್ಲೋಕಗಳ ಪೂರ್ಣ ಶ್ಲೋಕ, ಸಂಹಿತಾ ಪಾಠ ಕನ್ನಡದ ಕನ್ನಡಿಯಲ್ಲಿ ಕನ್ನಡ ಸಾಹಿತ್ಯಾಸಕ್ತರು ನೋಡಬಹುದು.  

ಪ್ರತಿಯೊಂದು ಶ್ಲೋಕ, ಸರ್ಗಗಳ ಸರಳ ಸಂಕ್ಷಿಪ್ತ, ಪ್ರಬುದ್ಧ, ಸ್ವಾರಸ್ಯಕರ, ಅನನ್ಯಅರ್ಥ ವಿವರಣೆಇದರಲ್ಲಿದೆ.ಸಮಗ್ರರಾಮಾಯಣಕಥಾನುವಾದಇದು ಅಚ್ಚ ಕನ್ನಡದಲ್ಲಿಒಡ ಮೂಡಿದೆ.ಚಿಂತಕರ ವಿದ್ವತ್ಪೂರ್ಣ, ಅವಲೋಕನಾತ್ಮಕಅಧ್ಯಯನಕ್ಕೂ, ಸಾಹಿತ್ಯ ರಸಿಕರ ಭಾವ ಲಹರಿಯ, ಸುಂದರಕಾವ್ಯಕಥನ, ಶ್ರವಣ, ವಾಚನ ರಸಾಸ್ವಾದನೆಗೂ ಈ ಗ್ರಂಥ ಸಮುಚ್ಚಯ ಸಹಜ ಸಾಮಾನ್ಯ ಸಾಧುಜನರ ಸರಳ ಓದುವಿಕೆಗೂ, ಭಕ್ತಿ ಶ್ರದ್ಧೆಯ ಪಾರಾಯಣಕ್ಕೂ ಸರಿಯೆನಿಸುವಷ್ಟು ಸಹ್ಯವಾಗಿದೆ. 

ಮತ್ತು ‘ಶ್ರೀಮನ್ಮಹಾಭಾರತ’ ದ 32 ಸಂಪುಟಗಳು ‘ಭಾರತದರ್ಶನ ಪ್ರಕಾಶನ’ದ ಭಗವದ್ಸಾಹಿತ್ಯಕೈಂಕರ್ಯದ ಸಮರೆ​‍್ಣಯಾಗಿದೆ. ಭಾರತೀಯಇತಿಹಾಸ ಪುರಾಣ ವಾಙ್ಮಯದ ಸಮಗ್ರಕೃತಿ ಸಮುಚ್ಛಯವೂ ಲೋಕಾರ​‍್ಣಗೊಂಡಿದೆ. ಸಮಸ್ತ ಶ್ಲೋಕ ಸಂಹಿತಾ ಭಾಗ, ಕನ್ನಡ ಭಾವಾನುವಾದ, ತಾತ್ಪರ್ಯ, ವಿಶ್ಲೇಷಣೆ, ಕನ್ನಡದಅನುಸಂಧಾನ, ಅವತರಣಿಕೆಎಲ್ಲೆಡೆಯೂಇರಬಹುದಾದಗ್ರಂಥವಿದು. ಪ್ರತಿಯೊಂದು ಮನೆ, ವೈಯಕ್ತಿಕ ಪುಸ್ತಕ ಸಂಗ್ರಹದಲ್ಲಿ, ಶಾಲಾ ಕಾಲೇಜುಗಳಲ್ಲಿ, ಗ್ರಾಂಥಾಲಯಗಳಲ್ಲಿ, ವೃದ್ಧಾಶ್ರಮಗಳಲ್ಲಿ, ದೇವಸ್ಥಾನಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಪುಸ್ತಕ ಭಂಡಾರಗಳಲ್ಲಿ, ಎಲ್ಲಕಡೆಯೂ, ಎಲ್ಲರ ನಡುವೆಯೂ, ಇರಲೇಬೇಕಾದಗ್ರಂಥ ಕಸುಮಗಳಿವು. ಹೊತ್ತಿಗೆಯ ಹವಳ, ಮುತ್ತು ರತ್ನಗಳಾದ ಈ ಗ್ರಂಥಗಳು ನಮ್ಮ ನಡುವಣ, ಸಂತಸದ ಕ್ಷಣಗಳಲ್ಲಿ ಉಡುಗೊರೆಯಾಗಿ, ಶುಭ ಕಾರ್ಯಗಳಲ್ಲಿ, ಮದುವೆ, ನೂತನ ಗೃಹ ಪ್ರವೇಶ, ಹಬ್ಬ ಹರಿದಿನಗಳಲ್ಲಿ ಮರೆಯಲಾಗದ ನೆನೆಪಿನ ಕಾಣಿಕೆಯಾಗಿ ಇವುಗಳನ್ನು ನೀಡಬಹುದು. ನಾವು ಎಳವೆಯಲ್ಲಿ ಆಟವಾಡುತ್ತ ನಲಿದುಓದಿದ ಶಾಲೆಗಳಿಗೆ, ಹರೆಯದ ದಿನಗಳ ಹುರುಪಿನ ಕಾಲೇಜುಗಳಿಗೆ, ನಮ್ಮಊರಿನ, ನಮ್ಮ ಹಳ್ಳಿಯ, ಶ್ರದ್ಧೆಯ ಸರಕಾರಿ ಶಾಲೆಗಳಿಗೆ, ನಾವು ದೋಸ್ತರುಇದ್ದುಗೌಜುಗದ್ದಲ ಎಬ್ಬಿಸಿ ಕುಣಿದು ನಲಿದ ನಮ್ಮ ಹಾಸ್ಟೆಲ್ ಗಳಿಗೆ, ನಾವು - ನೀವುಗಳು, ಒಲುಮೆಯಕೊಡುಗೆಯಾಗಿ, ​‍್ರೀತಿಯಅಂತಃಕರಣದಅಭಿವ್ಯಕ್ತಿಯಾಗಿಅರ​‍್ಿತವಾಗಲಿಯಂತೆಂದುಕೊಡುಗೆಯಾಗಿ ನೀಡಬಹುದು. 

ಕೆರೆಯ ನೀರನುಕೆರೆಗೆಚೆಲ್ಲಿಎಂದೆನುತದಾಸವಾಣಿಯಆದರ್ಶದಲ್ಲಿಅನುಸಂಧಾನದಲಿ, ಶ್ರದ್ಧೆಯ ಭಕುತಿಯಅಭಿವ್ಯಕ್ತಿ ಸಮರೆ​‍್ಣಯ ಭಾವದಲ್ಲಿರಾಷ್ಟ್ರ ಪುನರುತ್ಥಾನ ಯಜ್ಞದೊಳು ನಮ್ಮ ಪಾಲಿನ ಹವಿಸ್ಸಾಗಿ ‘ಶ್ರೀಮದ್ವಾಲ್ಮೀಕಿ ರಾಮಾಯಣ’ದ  ಹಾಗೂ ’ಶ್ರೀಮನ್ಮಹಾಭಾರತ’ದ ಕೃತಿ ಸಂಪುಟಗಳ ಪುಸ್ತಕ ಸಂಪದವನ್ನು ಸಮರ​‍್ಿಸಬಹುದು. ‘ಶ್ರೀಮದ್ವಾಲ್ಮೀಕಿ ರಾಮಾಯಣ’ ಪುಸ್ತಕ ಸಮರ​‍್ಣಯಜ್ಞಕಾರ್ಯವನ್ನು ಬಳ್ಳಾರಿಯ ‘ವಾಸುಕಿ ಪುಸ್ತಕಾಲಯ’ ಇವರು ಶ್ರೀರಾಮ ಇಚ್ಛಾ ಜಯತುಎನ್ನುವ ಸಂಕಲ್ಪದೊಂದಿಗೆ ಶ್ರೀ ರಾಮನಕಥೆಯುಎಲ್ಲರ ಮನೆ, ಮನೆಗಳಿಗೆ ತಲುಪಲಿ ಎನ್ನುವ ಸದಾಶಯದೊಂದಿಗೆಅಭಿಯಾನಕೈಗೊಂಡಿದ್ದಾರೆ.ಆಸಕ್ತರು ವಾಸುಕಿ ಪುಸ್ತಕಾಲಯದ ರೂವಾರಿಗಳಾದ ಶ್ರೀನಾಥ ಜೋಶಿ ಇವರನ್ನು - 9241288581 ಸಂಪರ್ಕಿಸಿ ಈ ಅಮೂಲ್ಯ ಗ್ರಂಥಗಳನ್ನು ಪಡೆಯಬಹುದು.