ವ್ಯವಸ್ಥಿತ ತ್ಯಾಜ್ಯ ವಿಲೇವಾರಿಗೆ ಅಗತ್ಯದ ಕ್ರಮಕೈಕೊಳ್ಳಿ: ಚವ್ಹಾಣ

ಗದಗ 15: ಪ್ರತಿ ಗ್ರಾಮಗಳಲ್ಲಿ  ಹಸಿ ಕಸ ಅಡುಗೆ ಮನೆ ತ್ಯಾಜ್ಯವನ್ನು ಸ್ಥಳೀಯವಾಗಿ ಸಂರಕ್ಷಿಸಲು   ಹಾಗೂ ಗ್ರಾಮ ಪಂಚಾಯತ್ಗಳಿಂದ    ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು  ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ ಚವ್ಹಾಣ ನಿರ್ದೇಶನ  ನೀಡಿದರು. 

   ಗದಗ ಜಿಲ್ಲಾ ಪಂಚಾಯತ ಮುಖ್ಯ ಸಭಾಂಗಣದಲ್ಲಿಂದು ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ಮತ್ತು ದ್ರವ  ತ್ಯಾಜ್ಯ  ನಿರ್ವಹಣೆಯನ್ನು ಸಮರ್ಪಕಾಗಿ ನಿರ್ವಹಿಸಲು  ಅಗತ್ಯದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.  ಈ ಕುರಿತಂತೆ ಅಗತ್ಯದ ಪ್ರಸ್ತಾವನೆ ಸಲ್ಲಿಕೆ ಕಾರ್ಯಗತಗೊಳಿಸಲು ಮಂಜುನಾಥ ಚವ್ಹಾಣ ತಿಳಿಸಿದರು.   

   ಜಿಲ್ಲಾ ಪಂಚಾಯತ್ ಉಪ ಕಾರ್ಯದಶರ್ಿ ಡಿ. ಪ್ರಾಣೇಶ ಮಾತನಾಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡುವುದರ ಜೊತೆಗೆ ಸೂಕ್ತವಾದ ಕಟ್ಟಡವನ್ನು ನಿರ್ಮಾಣ ಮಾಡಿ ವಾಹನದ ಮೂಲಕ ಹಸಿ ಕಸವನ್ನು  ವಿಲೇವಾರಿ ಮಾಡಬೇಕು. ಒಣ ಕಸವನ್ನು ಒಳಚರಂಡಿಗೆ   ಹಾಕುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ವಿಧಗಳನ್ನು ಗುರುತಿಸಿ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಪ್ರತಿ ಗ್ರಾಮ ಪಂಚಾಯತಗಳು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಮಾದರಿಯಾಗಬೇಕು ಎಂದು ಜಿ.ಪಂ ಉಪಕಾರ್ಯದರ್ಶಿ  ನುಡಿದರು. 

      ಇದೇ ಸಂದರ್ಭದಲ್ಲಿ ಜಿ.ಪಂ ಸಹಾಯಕ ಕಾರ್ಯದರ್ಶಿ  ಸಿ.ಆರ್.ಮುಂಡರಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಸಹಾಯಕ ನಿರ್ದೇಶಕರು ಡಿ.ಒ. ರಮೇಶ, ಘನ ಮತ್ತು ದ್ರವ ತ್ಯಾಜ್ಯ  ನಿರ್ವಹಣಾ  ರಾಜ್ಯ ಸಮಾಲೋಚಕರಾದ  ಮಧುಸೂದನ್, ಜಿಲ್ಲಾ ಸಮಾಲೋಚಕರಾದ ಕೃಷ್ಣ ದೊಡ್ಡಮನಿ, ಸುರೇಶ ಕಪ್ಪತ್ತನವರ, ಎಚ್.ಎಫ್. ಕುಸಣ್ಣವರ, ಜಿಲ್ಲೆಯ  ಗ್ರಾ. ಪಂ. ಅಧಿಕಾರಿಗಳು  ಉಪಸ್ಥಿತರಿದ್ದರು.