ಕಾಗವಾಡ, 16 : ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಅರಣ್ಯ ಇಲಾಖೆಯ ವತಿಯಿಂದ ಹಸಿರು ಗ್ರಂಥಾಲಯವನ್ನು ಕ್ಷೇತ್ರದ ಐನಾಪೂರ ಪಟ್ಟಣದ ಟ್ರೀ ಪಾರ್ಕನಲ್ಲಿ ಪ್ರಾರಂಭಿಸಿದ್ದು, ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ರಾಜು ಕಾಗೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು, ಸೋಮವಾರ ದಿ. 16 ರಂದು ತಾಲೂಕಿನ ಐನಾಪೂರ ಪಟ್ಟಣದಲ್ಲಿ ಅರಣ್ಯ ಇಲಾಖೆ ಅಭಿವೃದ್ಧಿ ಪಡಿಸಿರುವ ಟ್ರೀ ಪಾರ್ಕನಲ್ಲಿ ಹಸಿರು ಗ್ರಂಥಾಲಯವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ರಾಜ್ಯದಲ್ಲಿಯೇ ಪ್ರಥಮ ಹಸಿರು ಗ್ರಂಥಾಲಯ ನಮ್ಮ ಕ್ಷೇತ್ರದಲ್ಲಿ ಪ್ರಾರಂಭಗೊಳ್ಳುತ್ತಿದೆ. ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳಿಗೆ ಕೊರೆತೆ ಇಲ್ಲಾ. ಆದರೇ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್/ಕೆಪಿಎಸ್ಸಿ, ಸೇನೆ ಹಾಗೂ ಪೋಲಿಸ್ ಸೇರಿದಂತೆ ಎಲ್ಲ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯಾಸ ಮಾಡಲು ನೆರವಾಗುವ ಪುಸ್ತಕಗಳನ್ನು ಇಲ್ಲಿ ಇಡಲಾಗಿದ್ದು, ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕೆಂದರು.
ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ ಮಾತನಾಡಿ, ಈ ಗ್ರಂಥಾಲಯದಲ್ಲಿ ಈಗಾಗಲೇ 350 ಕ್ಕೂ ಹೆಚ್ಚು ಪುಸ್ತಗಳನ್ನು ಸಂಗ್ರಹಿಸಲಾಗಿದ್ದು, ವಿದ್ಯಾರ್ಥಿಗಳ ಬೇಡಿಕೆಗೆ ಅನುಸಾರವಾಗಿ ಇನ್ನಷ್ಟು ಪುಸ್ತಕಗಳನ್ನು ಹೆಚ್ಚಿಸಲಾಗುವುದು. ಗ್ರಾಮೀಣ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಮಯದಲ್ಲಿ ತಾ.ಪಂ. ಇಓ ವೀರಣ್ಣಾ ವಾಲಿ, ಉಪತಹಶೀಲ್ದಾರ ಅಣ್ಣಾಸಾಬ ಕೋರೆ, ಸಹಕಾಯ ಅರಣ್ಯ ಅಧಿಕಾರಿಗಳಾದ ಎನ್.ಬಿ. ನದಾಫ, ಎ.ಐ. ಧಲಾಯತ, ಆರ್. ಎಂ. ಹೊಸಪೇಟೆ, ಹಣಮಂತಗೌಡಾ ಮಾಡಗಿ, ವಿನೋದ ಮಾಲಗಾಂವೆ, ಮುಖಂಡರಾದ ಅರುಣ ಗಾಣಿಗೇರ, ಸಂಜಯ ಭಿರಡಿ, ಚಮನರಾವ ಪಾಟೀಲ, ಸುರೇಶ ಅಡಿಶೇರಿ, ಅರವಿಂದರಾವ ಕಾರ್ಚಿ, ಸಂಜು ಕುಸನಾಳೆ, ನವೀನ ಗಾಣಿಗೇರ, ಸುನೀಲ ಅವಟಿ, ಪ್ರಕಾಶ ಚಿನಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.