ದೇವರಹಿಪ್ಪರಗಿ 13: ಗುಜರಾತ್ ರಾಜ್ಯದ ಅಹಮದಾಬಾದ್ ನಗರದಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಮಡಿದ ಅತ್ಯಮೂಲ್ಯ ಆತ್ಮಗಳ ದಿವ್ಯಚೇತನಕ್ಕೆ ಸೃಷ್ಟಿಕರ್ತನು ಶಾಂತಿಯನ್ನು ಒದಗಿಸಲೆಂದು ದೇವರಹಿಪ್ಪರಗಿಯ ಶಿಕ್ಷಕರ ಬಳಗದಿಂದ ಕಂಬನಿ. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಗುರುವಾರದಂದು ಮೌನಾಚರಣೆಯನ್ನು ಮಾಡುವ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಯಿತು. ಶಿಕ್ಷಕರ ಸಂಘದ ಅಧ್ಯಕ್ಷ ಎ. ಎಚ್. ವಾಲೀಕಾರ, ಕಸಾಪ ಅಧ್ಯಕ್ಷ ಜಿ.ಪಿ. ಬಿರಾದಾರ, ಕಸಾಪ ಕೋಶಾಧ್ಯಕ್ಷ ಸಂಗನಗೌಡ ಬಿರಾದಾರ ಅವರು ಮಾತನಾಡಿ, ಮತ್ತೊಮ್ಮೆ ಇಂತಹ ಭೀಕರ ದುರಂತಗಳು ಮರುಕಳಿಸದಿರಲೆಂದು ಘಟನೆಯ ಕುರಿತು ಮಾತನಾಡಿ,
ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸಲಾಯಿತು. ಇದೇ ಸಂದರ್ಭದಲ್ಲಿ ಪಿ.ಎಸ್. ಮಿಂಚನಾಳ,ಪಿ.ಸಿ.ತಳಕೇರಿ, ಎಮ್.ಎಚ್.ಪಟೇಲ,ಎಸ್.ಜಿ. ತಾವರಖೇಡ,ಎಸ್.ವಿ. ಕೊಟೀನ,ಮಲಕು ಸುರಗಿಹಳ್ಳಿ, ಗೊಲ್ಲಾಳ ಬಿರಾದಾರ, ಸಂಗನಬಸು ನಂದ್ಯಾಳ,ಕೆ. ಎಮ್. ನಂದಿ,ನಾಗಯ್ಯ ಹಿರೇಮಠ, ವೀರಣ್ಣ ದಸ್ತರೆಡ್ಡಿ, ಬಿ.ಜಿ.ಪಾಟೀಲ,ಕೆ.ಡಿ. ಪಾಟೀಲ, ಬಿ.ವಾಯ್. ಬಾವೂರ, ರವಿ ಕೊಟೀನ, ಅಣ್ಣು ಭಜಂತ್ರಿ,ವಾಯ್.ಜಿ. ತಾವರಖೇಡ,ಟಕ್ಕಳಕಿ ಸರ್,ಜವಳಿ ಸರ್,ಸದಾಶಿವ ಗುಡಿಮನಿ,ಚನ್ನು ಹದರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.