ಜೂನ್ ಒಂದರಿಂದ ದೇವಾಲಯ ಮಸೀದಿ, ಚರ್ಚ್ ತೆರೆಯಲು ಅವಕಾಶ

ಬೆಂಗಳೂರು, ಮೇ 27,  ರಾಜ್ಯದಲ್ಲಿ  ಬರುವ ಜೂನ್ 1ರಿಂದ  ದೇವಾಲಯಗಳ ಜೊತೆಗೆ   ಮಸೀದಿ, ಚರ್ಚ್ ಗಳನ್ನು  ತೆರೆಯಲು ಅವಕಾಶ ನೀಡಿದೆ.ವಿಧಾನ ಸೌಧದ ಆವರಣದಲ್ಲಿ ಮಾಜಿ ಪ್ರಧಾನಿ ಜವಹರಲಾಲ್ ನೆಹರು ಪುಣ್ಯ ತಿಥಿ ಅಂಗವಾಗಿ ಹಮ್ಮಿಕೊಂಡಿದ್ದ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ  ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಿದ್ದರೆ ಇದೇ ನಿಯಮ ಚರ್ಚ್, ಮಸೀದಿಗಳಿಗೂ ಅನ್ವಯ ಆಗಲಿದೆ ಎಂದು ತಿಳಿಸಿದರು.