ಹಂಪಿ ಉತ್ಸವದಲ್ಲಿ ಜಾನಪದ ಕಲಾವಿದರಿಗೆ ತಾರತಮ್ಯ ಸಲ್ಲದು


ಲೋಕದರ್ಶನ ವರದಿ

ಬಳ್ಳಾರಿ 01: ಬರುವ ಹಂಪಿ ಉತ್ಸವದಲ್ಲಿ ಜಾನಪದ ಕಲಾವಿದರಿಗೆ ಪ್ರಮುಖ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದರ ಜತೆ ಸಮಾನ ಗೌರವ, ಸಂಭಾವನೆ ನೀಡಬೇಕು ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಮಂಜುನಾಥ ಒತ್ತಾಯಿಸಿದರು.

ಜಿಲ್ಲೆಯ ಹಂಪಾಪಟ್ಟಣ ಗ್ರಾಮದಲ್ಲಿ ಶನಿವಾರ ಕನ್ನಡ ಜಾನಪದ ಪರಿಷತ್ ಹಗರಿಬೊಮ್ಮನಹಳ್ಳಿ ತಾಲೂಕು ಘಟಕ ಆಯೋಜಿಸಿದ್ದ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಜಾನಪದ ಪ್ರಾಕಾರಗಳ ರೇಖಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಶಿಷ್ಟ ಪ್ರದರ್ಶಕರಿಗೆ ನೀಡುವ ಸಂಭಾವನೆ, ವಸತಿ, ಊಟೋಪಾಚಾರವನ್ನು ಜಾನಪದ ಕಲಾವಿದರಿಗೆ ಒದಗಿಸಬೇಕು. ಬೆಂಗಳೂರು ಮೂಲದ ಭರತನಾಟ್ಯ, ಕೂಚುಪುಡಿ, ಗಾಯಕ ಗಾಯಕಿಯರಿಗೆ ದೊರೆಯುವ ಸೌಕರ್ಯಗಳು ಜಾನಪದ ಕಲಾವಿದರಿಗೆ ದೊರೆಯುವಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಜಾನಪದ ಕಲಾವಿದರಿಗೆ, ಕಲಾ ಪ್ರದರ್ಶಕರಿಗೆ ತಾರತಮ್ಯ ಮಾಡಿದರೆ ಕಜಾಪ ಸಹಿಸುವುದಿಲ್ಲ. ಸಮಾನ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಂಜುನಾಥ ಎಚ್ಚರಿಸಿದರು.

ಜಾನಪದ ಕಲೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚೆಚ್ಚು ಪ್ರಚಾರ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಬಯಲಾಟ, ಗೊಂದಲಿಗರ ಆಟ, ಡೊಳ್ಳು, ನಂದಿ ಕುಣಿತ, ಭಜನೆ, ಕಹಳೆ, ಕೀಲು ಕುದುರೆ. ಮರಗುಣಿತ, ಸುಡುಗಾಡು ಸಿದ್ಧರು ಸೇರಿದಂತೆ ಹಲವು ಜಾನಪದ ಕಲಾವಿದರು ಇರುವ ಸಾಂಸ್ಕೃತಿಕ ಗ್ರಾಮ ಹಂಪಾಪಟ್ಟಣದ ಹೆಗ್ಗಳಿಕೆ ಎಂದರೆ ಆಕಾಶವಾಣಿ ಕಲಾವಿದ ಗೊಂದಲಿಗರಾಟದ ಪ್ರಸಿದ್ಧ ದೇವೇಂದ್ರಪ್ಪ  ಅವರಿಗೆ ಜನ್ಮ ನೀಡಿದ ಊರು ಕೂಡಾ ಹೌದು ಎಂದು ಕೊಂಡಾಡಿದರು.

ಮುಖ್ಯ ಅತಿಥಿಯಾಗಿದ್ದ ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಟೀವಿ, ಮೊಬೈಲ್ ಹಾವಳಿಯಿಂದ ನಶಿಸುತ್ತಿರುವ ಜಾನಪದ ಕಲೆಯನ್ನು ಪುನರುಜ್ಜೀವನ  ಗೊಳಿಸುವ ಜವಾಬ್ದಾರಿ ಮೇಲೆ ಎಲ್ಲರ ಮೇಲಿದೆ. ಕನ್ನಡ ಶಾಲೆಗಳಲ್ಲಿ ಜಾನಪದ ಕಾರ್ಯಕ್ರಮಗಳು ಜರುಗಿದಂತೆ ಆಂಗ್ಲ ಭಾಷೆಯ ಶಾಲೆಗಳಲ್ಲಿ ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.

ಕಜಾಪ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸರಕಾರ ಆಥರ್ಿಕ ನೆರವು ನೀಡುವ ಮೂಲಕ ಬೆಂಬಲಿಸಬೇಕು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಸಿ. ಶಿವಾನಂದ ಮಾತನಾಡಿ, ಹಂಪಾಪಟ್ಟಣ ಗ್ರಾಮದ ಕಲಾವಿದರ ಮಾಹಿತಿ ಪುಸ್ತಕ ಮತ್ತು ಸಾಕ್ಷ್ಯಚಿತ್ರ ನಿರ್ಮಿಸುವ ಯೋಜನೆ ಪರಿಷತ್ಗೆ ಇದೆ ಎಂದರು.

ಸಂಕಷ್ಟದಲ್ಲಿರುವ ಜಾನಪದ ಸೇರಿದಂತೆ ಎಲ್ಲಾ ಪ್ರಕಾರಗಳ ಕಲಾವಿದರಿಗೆ ಸರಕಾರ ಆಥರ್ಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಕಲಾ ಅಧ್ಯಾಪಕ ಆನಂದ ಕಡ್ಲಿ ಅವರ ನಾಡಿನ ಜಾನಪದ ಸಂಸ್ಕೃತಿ, ಪರಂಪರೆ ಸಾರುವ 80 ರೇಖಾಚಿತ್ರಗಳ ಪ್ರದರ್ಶನ, ಹಂಪಾಪಟ್ಟಣ ಗ್ರಾಮದ ಗೊಂದಲಿಗರ ರಾಮಣ್ಣ ಮತ್ತು ತಂಡ ಪ್ರಸ್ತುತ ಪಡಿಸಿದ ಗೊಂದಲಿಗರ ಹಾಡು, ಗ್ರಾಮದ ಜಾನಪದ ಮಹಿಳಾ ಸಂಘದ ಕಳಿಂಗರಾಯನ ಪದಗಳು, ಚಲವಾದಿ ಹೇಮಣ್ಣನ ಕಹಳೆವಾದನ, ಹಿರಿಯ ರಂಗ ಕಲಾವಿದ ಗೆದ್ದಲಗಟ್ಟಿ ತಿಮ್ಮಣ್ಣ ಮತ್ತು ನೀರಗಂಟೆ ಕೃಷ್ಣಮೂತರ್ಿ ತಂಡದ ಭಜನೆ ಪದಗಳು ನೆರೆದಿದ್ದ ಜನಪದ ಪ್ರಿಯರ ಮನಗೆದ್ದವು.

ಕಜಾಪ ತಾಲೂಕು ಘಟಕದ ಅಧ್ಯಕ್ಷ ಎ.ಕೇಶವಮೂತರ್ಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಿಪ್ರಾ ಶಾಲೆಯ ಮುಖ್ಯಗುರು ಕೆ. ಛತ್ರಪತಿ, ಸಿಆರ್ಪಿ ನಾರಾಯಣನಾಯ್ಕ,  ಎ.ಕುಬೇರಪ್ಪ, ಕಜಾಪ ಕಾರ್ಯದಶರ್ಿ ಜಾಗಟಗೆರೆ ಹಾಲೇಶ್, ನವೋದಯ ಯುವಕ ಸಂಘದ ಅಧ್ಯಕ್ಷ ಕಂಬಾರ ಪ್ರಭುಕುಮಾರ್, ಸೆರೆಗಾರ ಮಂಜುನಾಥ್, ಮಹಮ್ಮದ್ ರಫಿ ಮತ್ತಿತರರು ಉಪಸ್ಥಿತರಿದ್ದರು.

ಕಜಾಪ ಹೊಸಪೇಟೆ ತಾ. ಅಧ್ಯಕ್ಷ ಸೋಮೇಶ್ ಉಪ್ಪಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಳೇದಾಳ ಶ್ರೀನಿವಾಸ ಶೆಟ್ಟಿ ಸ್ವಾಗತಿಸಿದರು. ಚಂದ್ರಮೌಳೇಶ್ವರ ಫ್ರೌಢಶಾಲಾ ವಿದ್ಯಾಥರ್ಿನಿಯರು ಪ್ರಾಥರ್ಿಸಿದರು. ಅಧ್ಯಾಪಕ ಬಿ.ಕೊಟ್ರಪ್ಪ ನಿರೂಪಿಸಿದರು. ಗೊಂದಲಿಗರ ಫಕ್ಕೀರಪ್ಪ ವಂದಿಸಿದರು.