ರಾವಬಹದ್ದೂರರ ಸಾಹಿತ್ಯ ಮುಂದಿನ ಪೀಳಿಗೆಗೂ ತಿಳಿಯಬೇಕಿದೆ: ಶ್ರೀಕಾಂತ ಕುಲಕರ್ಣಿ

The literature of Ravabahadur should be known to the next generation: Srikanth Kulkarni

ರಾವಬಹದ್ದೂರರ ಸಾಹಿತ್ಯ ಮುಂದಿನ ಪೀಳಿಗೆಗೂ ತಿಳಿಯಬೇಕಿದೆ: ಶ್ರೀಕಾಂತ ಕುಲಕರ್ಣಿ 

ವಿಜಯಪುರ 03: ಜಂಬಗಿ ಸೇತುವೆ ನಿರ್ಮಾಣಕ್ಕೆ ರಾವಬಹದ್ದೂರರ ಗ್ರಾಮಯಣ ಕಾದಂಬರಿಯೇ ಕಾರಣವೆಂದು ಜಮಖಂಡಿಯ ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ ಹೇಳಿದರು. 

ರವಿವಾರ ಜೂನ್ 1ರಂದು ವಿಜಯಪುರ ನಗರದ ಉಮಾಶಂಕರ ಮಂಗಲ ಕಾರ್ಯಾಲಯದಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತದ ವಿಜಯಪುರ ಜಿಲ್ಲಾ ಸಮಿತಿ ಆಯೋಜನೆಯ ಗ್ರಾಮಾಯಣ ಕಾದಂಬರಿ ಖ್ಯಾತಿಯ ದಿ.ರಾವಬಹದ್ದೂರರ ಬದುಕು ಮತ್ತು ಬರಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ರಾವಬಹದ್ದೂರ ತಮ್ಮ ಅಜ್ಜನೆಂಬ ಕಾರಣದಿಂದ ಗ್ರಾಮಾಯಣ ಓದಿದ ಮುಖ್ಯ ಇಂಜಿನಿಯರ್ ಸೇತುವೆ ನಿರ್ಮಾಣಕ್ಕೆ ನೆರವಾಗಿದ್ದನ್ನು ನೆನಪಿಸಿಕೊಂಡರು. ರಾವಬಹುದ್ದರರ ಸಾಹಿತ್ಯ ಉತ್ತರ ಕರ್ನಾಟಕದ ನೆಲದ ಮೂಲದ ಸಾಹಿತ್ಯವಾಗಿದ್ದು, ಮುಂದಿನ ಪೀಳಿಗೆಗೂ ತಿಳಿಯವಂತಾಗಬೇಕಾಗಿದೆ. ಅವರ ಕಾದಂಬರಿಗಳನ್ನು ಓದುತ್ತಿದ್ದರೆ ಅದರೊಳಗಿನ ಪಾತ್ರ ನಾವಾಗುತ್ತೇವೆ ಎಂದು ವಕ್ತಾರ ಶಂಕರ ಬೈಚಬಾಳ ಮಾತಾಡಿದರು.  

ರಾವಬಹದ್ದೂರರ ಪುತ್ರ ಸುಧೀರ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಸುಹಾಸ ಕುಲಕರ್ಣಿ ತಮ್ಮ ದೊಡ್ಡಪ್ಪರ ಹಾಸ್ಯಪ್ರಸಂಗಗಳನ್ನು ಹಂಚಿಕೊಂಡರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಅಭಾಸಾಪ ಜಿಲ್ಲಾಧ್ಯಕ್ಷ ನಾರಾಯಣ ಬಾಬಾನಗರ ಅಭಾಸಾಪ ಅನೇಕ ಹಿರಿಯ ಸಾಹಿತಿಗಳನ್ನು ಸ್ಮರಣೆಗಾಗಿ ಮುಂದಿನ ಪೀಳಿಗಗೂ ಅವರ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಸಂಘಟನೆ ಕಾರ್ಯಕ್ರಮಗಳ ಬಗ್ಗೆ ವಿವರಸಿದರು. 

ನಿರೂಪಣೆ ಶ್ರೀರಂಗ ಕುಲಕರ್ಣಿ, ಸ್ವಾಗತ ವಿವೇಕ ಕುಲಕರ್ಣಿ, ಪರಿಚಯ ಸುಧೀರ ಟಂಕಸಾಲೆ, ವಂದನಾರೆ​‍್ಣ ವರುಣ ಸೋಲಾಪುರ ಮಾಡಿದರು. ಮಯೂರ ತಿಳಗೂಳಕರ, ಶ್ರೀರಂಗ ಪುರಾಣಿಕ, ಗೀರೀಶ ಮಣೂರ, ಸತೀಶ ಜೋಶಿ, ಜಿ ಆರ್ ಕುಲಕರ್ಣಿ, ಬಲವಂತ ಕುಲಕರ್ಣಿ, ಶರಣಗೌಡ ಪಾಟೀಲ, ಅರ್ ಬಿ ಕುಲಕರ್ಣಿ, ಸುಶಾಂತ ಕುಲಕರ್ಣಿ, ಆನಂದ ಗೋಡ್ಸೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.