ಶಿಕ್ಷಣ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನ ಅಳವಡಿಕೆ ಅವಶ್ಯಕ
ಬೈಲಹೊಂಗಲ 10: ಶಿಕ್ಷಣ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನ ಅಳವಡಿಕೆ ಅತ್ಯವಶ್ಯಕ ಎಂದು ಬೈಲಹೊಂಗಲ ರೋಟರಿ ಕ್ಲಬ್ ಅಧ್ಯಕ್ಷ ಮಹಾಂತೇಶ ಜಿಗಜಿನ್ನಿ ಹಾಗೂ ಇನ್ಹರ ವ್ಹೀಲ್ ಅಧ್ಯೆಕ್ಷೆ ಸುಮಂಗಲಾ ಜಿಗಜಿನ್ನಿ ನುಡಿದರು. ಅವರು ಸಮೀಪದ ನಯಾನಗರ ಸರ್ಕಾರಿ ಪ್ರೌಢ ಶಾಲೆಯಲ್ಲಿ ರೋಟರಿ ಕ್ಲಬ್, ಹಾಗೂ ಇನ್ನರ್ ವ್ಹೀಲ್ ವತಿಯಿಂದ ನಯಾನಗರ ಸರ್ಕಾರಿ ಪ್ರೌಢ ಶಾಲೆಗೆ ವಯಕ್ತಿಕವಾಗಿ ಅಂದಾಜು 60ಸಾವಿರಕ್ಕೂ ಹೆಚ್ಚಿನ ಮೌಲ್ಯದ 5 ಗ್ರೀನ್ ಬೋರ್ಡ ವಿತರಣಾ ಸಮಾರಂಭದ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ನೈಜ ಪ್ರತಿಭೆಗಳನ್ನು ತಯಾರು ಮಾಡುವ ಯಾವುದಾದರೂ ಶಾಲೆಗಳಿದ್ದರೆ ಅವು ಸರ್ಕಾರಿ ಶಾಲೆಗಳು ಆದ್ದರಿಂದ ನಾವು ಬಡ ಹಾಗೂ ಕೃಷಿಕರ ಮಕ್ಕಳು ಅದ್ಯಯನ ಮಾಡುವ ಶಾಲೆಗಳನ್ನು ಹುಡುಕಿ ಸಾದ್ಯವಾದಷ್ಟು ಅನುಕೂಲ ಮಾಡಿಕೊಡುತ್ತಿರುವುದಾಗಿ ತಿಳಿಸಿದರು. ಕಾರಣ ನಾವು ಗ್ರಾಮೀಣ ಮಕ್ಕಳು ಎಂಬ ಕೀಳರಿಮೆ ತೊರೆದು, ಸ್ಪರ್ದಾತ್ಮಕ ಜಗತ್ತಿನಲ್ಲಿ ಸತತ ಅದ್ಯಯನ ಹಾಗೂ ಪರಿಶ್ರಮದಿಮದಿಂದ ಸಾಧಕರಾಗಬೇಕೆಂದರು. ಮುಖ್ಯ ಅತಿಥಿಗಳಾಗಿ ಆಮಿಸಿದ್ದ ಜೀವ ವಿಮಾ ಅಭಿವೃದ್ದಿ ಅಧಿಕಾರಿ ಸಂಜಯ ಮಹಾಲೆ, ಪ್ರೌಢ ಶಾಲಾ ಮುಖ್ಯೋಪಾದ್ಯಾಯ ಎನ್.ಅರ್.ಮಾಳನ್ನವರ ದಾನಿಗಳಾದ ಮಹಾಂತೇಶ, ಸುಮಂಗಲಾ ಹಾಗೂ ಪ್ರೇರಣಾ ಜಿಗಜಿನ್ನಿ ಇವರನ್ನು ಸನ್ಮಾನಿಸಿ ಮಾತನಾಡುತ್ತಾ ಸರ್ಕಾರಿ ಶಾಲೆಗಳಿಗೆ ಎಲ್ಲಾ ಸೌಲಭ್ಯಗಳು ಸರ್ಕಾರದಿಂದಲೆ ಬಂದಾಗ ಮಾಡುವುದು ಬೇಗನೆ ಸಾದ್ಯವಿಲ್ಲಾ. ಇಂತಹ ಸಂಘ ಸಂಸ್ಥೆಗಳು, ಪಾಲಕರು ಪೋಷಕರು ಮುಂದೆ ಬಂದಾಗ ಮಾತ್ರ ಸರ್ಕಾರಿ ಶಾಲೆಗಳು ಆಧುನಿಕ ಸೌಲಭ್ಯ ಹೊಂದಲು ಸಾದ್ಯ ಎಂದರು. ಅವರ ಮಗಳು ಪ್ರೇರಣಾ ಜನ್ಮ ದಿನದ ಪ್ರಯುಕ್ತ ಗ್ರೀನ್ ಬೋರ್ಡ ವಿತರಿಸಿರುವುದು ಅತ್ಯಂತ ಸೂಕ್ತವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರೌಢ ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ನಲವಡೆ ಇವರು ಸಾಲೆಯ ಪರವಾಗಿ ಗ್ರೀನ್ ಬೋರ್ಡ ಸ್ವೀಕರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ದಾನಿಗಳ ಶ್ರಮ ಸಮಯ ವ್ಯರ್ಥವಾಗದಂತ ಏಕಾಗ್ರತೆಯಿಂದ ಅದ್ಯಯನ ಮಾಡಿ ಉನ್ನತ ನಾಗರೀಕರು ಹಾಗೂ ಜೇಷ್ಟ ಅಧಿಕಾರಿಗಳಾಗಿ ನಾಡಿನ ಸೇವೆ ಮಾಡುವಂತವರಾಗಬೇಕೆಂದರು. ವೇದಿಕೆಯಲ್ಲಿ ಎಸ್ಡಿಎಂಸಿ ಸದಸ್ಯರಾದ ಶ್ರೀಕಾಂತಗೌಡ ಪಾಟೀಲ, ಬಾಬು ಮಾಳಗಿ, ಸೋಮನಿಂಗ ಅಡಕಿ, ಪಮಚಾಯತ ಸದಸ್ಯ ರವಿ ಹುಡೇದ, ಪ್ರೇರಣಾ ಜಿಗಜಿನ್ನಿ, ಬ್ರಹ್ಮಾನಂದ ಕಡ್ಲಿಬುಡ್ಡಿ, ರವೀಂದ್ರಕುಮಾರ ಹಾದಿಮನಿ, ಪತ್ತಾರ ಮೆಡಮ್, ಶಿಕ್ಷಕ ಸಿದ್ದಯ್ಯಾ ಹಿರೇವ್ಮಠ ಮುಂತಾದವರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಬಸವರಾಜ ಪತ್ತಾರ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕ ಎಸ್.ಎಂ.ಕೊಳ್ಳಿ ವಂದಿಸಿದರು.