ಯತ್ನಾಳ ಅವರು ಪ್ರತ್ಯೇಕ ಹೋರಾಟ ಕೈಬಿಟ್ಟು, ಒಗ್ಗಟ್ಟಾಗಿ ಹೋರಾಡಲು ಕೈಜೋಡಿಸಿ: BSY

ಬಿ.ಎಸ್‌.ಯಡಿಯೂರಪ್ಪ

ಬೆಂಗಳೂರು 26: ಬಸನಗೌಡ ಪಾಟೀಲ ಯತ್ನಾಳ ಅವರು ಸ್ವಪ್ರತಿಷ್ಠೆಯಿಂದ ಹೋರಾಟ ಮಾಡ್ತಾ ಇರೋದು ಅವರಿಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಹೋರಾಟ ಕೈಬಿಟ್ಟು ನಮ್ಮ ಜತೆ ಸೇರಿ ಒಟ್ಟಿಗೆ ಕೆಲಸ ಮಾಡೋಣ ಎಂದು ವಿಜಯೇಂದ್ರ ಹೇಳಿದ್ದಾರೆ. ಆದರೆ, ಯತ್ನಾಳ ಅವರು ಸ್ವಪ್ರತಿಷ್ಠೆಗೆ ಇವೆಲ್ಲ ಮಾಡ್ತಾ ಇದ್ದಾರೆ. ಈಗಲಾದರೂ ಜಾಗ್ರತರಾಗಬೇಕು. ಅವರಿಗೆ ಹೇಳುವ ನಮ್ಮ ಡ್ಯೂಟಿಯನ್ನು ಮಾಡಿದ್ದೇವೆ. ಉಳಿದದ್ದು ಅವರಿಗೆ ಮತ್ತು ವರಿಷ್ಠರಿಗೆ ಬಿಟ್ಟಿದ್ದು. ವರಿಷ್ಠರ ಗಮನಕ್ಕೆ ಇವೆಲ್ಲ ಬಂದಿರಬಹುದು ಎಂದು ಯಡಿಯೂರಪ್ಪ ಹೇಳಿದರು.

ಯತ್ನಾಳ ಅವರು ಪ್ರತ್ಯೇಕ ಹೋರಾಟ ಕೈಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಪಕ್ಷ ಬಲಗೊಳ್ಳುತ್ತದೆ ಎಂದು ಬಿ.ಎಸ್‌.ಯಡಿಯೂರಪ್ಪ ಅವರು ತಿಳಿಸಿದರು.