ಲೋಕದರ್ಶನ ವರದಿ
ಸಂಬರಗಿ 21: ಡಿಸೆಂಬರ 5 ರಂದು ಕಾಗವಾಡ ವಿಧಾನ ಸಭಾ ಉಪ ಚುನಾವಣೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಪಿಎಸ್ಐ ಸುಮಾ ಗೋರಗಲ್ ಇವರ ನೇತೃತ್ವದಲ್ಲಿ ಗುರುವಾರ ಸಂಬರಗಿ ಗ್ರಾಮದಲ್ಲಿ ಪಥಸಂಚಲನ ನಡೆಸಿ ಮತದಾನ ಜಾಗೃತಿ ಶಾಂತಿಯುತವಾಗಿ ಮತದಾನ ಮಾಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಬರಗಿ ಗ್ರಾಮ ಪಂಚಾಯತ ಅಧ್ಯಕ್ಷರು ಮಹಾದೇವ ತಾನಗೆ ಮಾತನಾಡಿ ಎಲ್ಲಾರು ಕಡ್ಡಾಯವಾಗಿ ಯುವಕ ಯುವತಿಯರು ಹೆಚಿನ ಪ್ರಮಾಣದಲ್ಲಿ ಮತ ಚಲಾಯಿಸಬೇಕೆಂದು ವಿನಂತಿಸಿದರು.
ಡಿಆರ್ , ಕೆಎಸ್ ಆರ್ ಪಿ , ಪೊಲೀಸ ಪಡೆ ಹಾಗೂ ಶಾಲಾ ಮಕ್ಕಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ನಡೆಸಿದರು. ಈ ವೇಳೆ ಸಂಬರಗಿ ವಲಯದ ಪೊಲೀಸ ಇಲಾಖೆ ಅಧಿಕಾರಿಗಳು ಬಸವರಾಜ ತಳವಾರ ಪ್ರಧಾನಿ ಪೊಂಡೆ, ಸಂಜು ಕಾಂಬಳೆ, ಆನಂದ ಕೋಳಿ , ಸಿ ಜಿ ಉಮರೆ, ರಾಘವೇಂದ್ರ ಹೊಸಮನಿ , ಧರೆಪ್ಪಾ ಕುಂಬಾರ, ದೆವೇಂದ್ರ ಕೋಳಿ ಸೇರಿದಂತೆ ಅನೇಕ ಗ್ರಾಮದ ಗಣ್ಯರು ಹಾಜರಿದ್ದರು.