ಸಂಬರಗಿ 12: ಕರ್ನಾಟಕ ರಾಜ್ಯದ ಗಡಿ ಭಾಗದಿಂದ ಕೆಲವೇ ಅಂತರದಲ್ಲಿ ಇರುವ ಮಹಾರಾಷ್ಟ್ರದ ಜತ್ತ ತಾಲೂಕಿನ ಕನ್ನಡ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಜನ ನೀರಿಗಾಗಿ ಪರದಾಡುತ್ತಿದ್ದಾರೆ. ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ.
ಅಥಣಿ ತಾಲೂಕಿಗೆ ಹೊಂದಿಕೊಂಡಿರುವ ಜತ್ತ ತಾಲೂಕಿನ ಅಚ್ಚ ಕನ್ನಡಿಗರ ಗ್ರಾಮಗಳಾದ ಗೂಗವಾಡ, ಬಸರಗಿ, ವಜ್ರವಾಡ, ಯಕ್ಕುಂಡಿ, ಜಿರಗ್ಯಾಳ ಇನ್ನೀತರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗಿದೆ. ಮಳೆಯಾದರೂ ಸಹ ನೀರಿನ ಸಮಸ್ಯೆ ದೂರವಾಗಿಲ್ಲ. ಸುಮಾರು ಹತ್ತು ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರ ವಾರದಲ್ಲಿ ಎರಡು ಸಲ ನೀರಿನ ಪೂರೈಕೆ ಮಾಡುತ್ತಿದ್ದಾರೆ. ಆ ನೀರು ಗ್ರಾಮಸ್ಥರಿಗೆ ಪೂರೈಕೆ ಆಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿವೆ. ನೀರಿನ ಸಮಸ್ಯೆ ದಿನ ದಿನಕ್ಕೆ ಹೆಚ್ಚಿತ್ತಿದೆ.
ಈ ಭಾಗದಲ್ಲಿ ಮಳೆಯಾದರೂ ಸಹ ಕೊಳವೆ ಭಾವಿಗೆ ಹಾಗೂ ತೆರೆದ ಬಾವಿಗೆ ನೀರಿನ ಮಟ್ಟ ಹೆಚ್ಚಿಲ್ಲ. ತೋಟದ ವಸತಿಗೆ ನೀರಿನ ಕೊರತೆ ಹೆಚ್ಚಿದೆ. ಮಹಾರಾಷ್ಟ್ರ ಸರಕಾರ ಗಮನ ಹರಿಸಿ ಕರ್ನಾಟಕ ಗಡಿ ಹೊಂದಿರುವ ಗ್ರಾಮಗಳಿಗೆ ದಿನನಿತ್ಯ ನೀರಿನ ಪೂರೈಕೆ ಮಾಡಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ. ವಾರಗಳ ಕಾಲ ನೀರಿನ ಸಂಗ್ರಹ ಮಾಡಿ ಸೇವಿಸುವುದಾಗಿದೆ.