ಇಂಡಿ 11: ನಗರದ ಬಸ್ಸ ನಿಲ್ದಾಣ ಬಳಿ ಇರುವ ಟಿಪ್ಪುಸುಲ್ತಾನ್ ವೃತ್ತದ ಬಳಿ ಬೆಳಿಗ್ಗೆ 06-00 ಸುಮಾರಿಗೆ ಮಹಿಳೆಯನ್ನು ಯುವಕನೊಬ್ಬ ಚಾಕುವಿನಿಂದ ನಾಲ್ಕು ಬಾರಿ ಇರಿದು ಕೊಚ್ಚಿ ಕೊಲೆ ಮಾಡಿದ್ದಾನೆ.
ಮೃತ ಮಹಿಳೆ ಇಂಡಿ ತಾಲ್ಲೂಕಿನ ಕಟ್ನಾಳ ಗ್ರಾಮದ ರೇಖಾ ಕನ್ನೊಳ್ಳಿ, ವಯಾ 32 ಎಂದು ತಿಳಿದುಬಂದಿದೆ. ಮೃತ ಮಹಿಳೆ ಇಂಡಿ ಸಮಾಜ ಕಲ್ಯಾಣ ಇಲಾಖೆ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಕೊಲೆ ಮಾಡಿದ ಯುವಕ ಸಂಜು ಬನಸೋಡೆ ಎಂದು ತಿಳಿದು ಬಂದಿದೆ.
ಈ ಕೊಲೆ ಅನೈತಿಕ ಸಂಬಂಧದಿಂದ ಆಗಿದೆ ಅಥವಾ ಬೇರೆ ಯಾವುದಾದರೂ ಕಾರಣದಿಂದ ಆಗಿದೆ ಎಂಬುದನ್ನು ಪೋಲಿಸರ ತನಿಖೆಯಿಂದ ಗೊತ್ತಾಗಬೇಕಾಗಿದೆ. ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಈ ಕುರಿತು ಇಂಡಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.