ವಿಜಯಪುರ 14: ವಿಜಯಪುರ ಜಿಲ್ಲೆಯ ಸಿಂದಗಿಯ ರಾ.ಸಿ. ವಾಡೇದ ಸಾಹಿತ್ಯ ರಂಗದಲ್ಲಿ ತಮ್ಮನ್ನೆ ತಾವು ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ಲೇಖನಗಳನ್ನು ನೀಡಿದ ಅವರಿಗೆ ಕವಿ ಉಳವೀಶ ಹುಲೆಪ್ಪನವರ ಮಠ ಸ್ಮಾರಕ ಪ್ರತಿಷ್ಠಾನದಿಂದ ಮಕ್ಕಳ ಕಾವ್ಯ ಪ್ರಶಸ್ತಿಯು ಮುಡಿಗೇರಿದೆ.ಇದೇ 19 ರಂದು ಬೆಳಗಾವಿಯ ಚೆನ್ನಮ್ಮ ವೃತ್ತದ ಹತ್ತಿರದ ಕನ್ನಡ ಸಾಹಿತ್ಯ ಭವನದಲ್ಲಿ ಜರಗುವ ಕವಿ ಎಸ್.ಡಿ.ಇಂಚಲ ಮತ್ತು ಕವಿ ಉಳವೀಶ ಹುಲೆಪ್ಪನವರ ಮಠ ಸ್ಮಾರಕ ಪ್ರತಿಷ್ಠಾನವು ಸ್ಮಾರಕ ಉಪನ್ಯಾಸ ಹಾಗೂ ಕಾವ್ಯ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಮಕ್ಕಳ ಕಾವ್ಯ ಪ್ರಶಸ್ತಿಯನ್ನು ಇವರ “ಎತ್ತಿನ ಬಂಡಿ” ಕಾವ್ಯ ಕೃತಿಗೆ ಪ್ರಧಾನ ಮಾಡಲಾಗುವುದು ಹಾಗೂ ಎಸ್.ಡಿ.ಇಂಚಲ ಕಾವ್ಯ ಪ್ರಶಸ್ತಿಯನ್ನು ರನ್ನ ಬೆಳಗಲಿಯ ಸುರೇಶ ರಾಜಮಾನೆ ಅವರು ರಚಿಸಿದ “ರಾಜಿಯಾಗದ ರಕ್ತದಕಣ” ಎಂಬ ಕಾವ್ಯಕೃತಿಗೆ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಮಹೇಶ ಗುರನ ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕವಿ ಎಸ್.ಡಿ.ಇಂಚಲ ಮತ್ತು ಕವಿಉಳವೀಶ ಹುಲೆಪ್ಪನವರ ಮಠ ಸ್ಮಾರಕ ಪ್ರತಿಷ್ಠಾನವು ಸ್ಮಾರಕ ಉಪನ್ಯಾಸ ಹಾಗೂ ಕಾವ್ಯ ಪ್ರಶಸ್ತಿಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಣಿಚೆನ್ನಮ್ಮ ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ ಅವರು ಭಾಗವಹಿಸಲಿದ್ದು, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅವರು ಸ್ಮಾರಕ ಉಪನ್ಯಾಸ ಮಾಡಲಿದ್ದು, ಅತಿಥಿಗಳಾಗಿ ಸಾಹಿತಿಗಳಾದ ಡಾ. ಸರಜೂಕಾಟ್ಕರ್, ಡಾ. ಬಸವರಾಜ ಜಗಜಂಪಿ ಅವರು ಭಾಗವಹಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಇಂಚಲ ಮತ್ತು ಕವಿ ಉಳವೀಶ ಹುಲೆಪ್ಪನವರ ಮಠ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಗುರುದೇವಿ ಹುಲೆಪ್ಪನವರ ಮಠ ಅವರು ವಹಿಸಲಿದ್ದಾರೆ.
ಕವಿ ಉಳುವೀಶರು ಬೈಲಹೊಂಗಲ ತಾಲೂಕಿನ ಹಿರೇನಂದಿ ಹಳ್ಳಿಯಲ್ಲಿ 1926 ನೇ ಮಾರ್ಚ 31 ರಂದು ವೀರಯ್ಯ ಮತ್ತು ವೀರಮ್ಮನವರ ಪುಣ್ಯಗರ್ಭದಿಂದ ಜನಿಸಿದರು. ಬಿ.ಎ ಬಿ.ಎಡ್ ಪದವೀಧರರಾಗಿ ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿ, ಶಾಲಾ ತಪಾಸಣಾಧಿಕಾರಿಯಾಗಿ ಆದರ್ಶ ಶಿಕ್ಷಕರೆಂದು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಹೆಮ್ಮೆಅವರದು. ನಾಡಿನ ಧೀಮಂತ ಕವಿಯಾಗಿದ್ದ ಉಳುವೀಶರು ಜೀವನ ಜೋಕಾಲಿ, ಶುಭವಾಣಿ, ಭಕ್ತಿಯ ಬೆಳಕು, ಗೊಂಬು, ಬಾಲತಪಸ್ವಿ, ಸವಿಜೇನು, ಮಕ್ಕಳ ಮಂದಿರ ಶಿಶು ಕವನ ಸಂಕಲನಗಳನ್ನು ಪ್ರಕಟಿಸಿ ಮಕ್ಕಳಲ್ಲಿ ಕಾವ್ಯಾಸಕ್ತಿಯನ್ನು ಮೂಡಿಸಿದರು. ಶ್ರಾವಣದ ಸಿರಿ, ಚೌಪದಿ ಚೆಲುವು, ಸರ್ವಜ್ಞ ಕವಿ, ಹಾಲುಹಣ್ಣು (ಕವಿ ಸತ್ಯಾರ್ಥಿಯೊಂದಿಗೆ), ಹವಳ ಮುತ್ತು ಗುರುಪಾದ ಸ್ವಾಮಿಯವರೊಂದಿಗೆ) ಮುಂತಾದ 50 ಕ್ಕೂ ಅಧಿಕಕಾವ್ಯ ಕೃತಿಗಳನ್ನು ರಚನೆ ಮಾಡಿಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಉಳುವೀಶರು ಮಕ್ಕಳ ಸಾಹಿತ್ಯಕ್ಕಾಗಿ ಅನೇಕ ರಾಷ್ಟ್ರೀಯ ಬಹುಮಾನಗಳನ್ನು ಪಡೆದಿರುವರು. ಮೋತಿಲಾಲ ನೆಹರು ಶತಮಾನೋತ್ಸವ ನಿಮಿತ್ತ ಏರಿ್ಡಸಿದ್ದ ಕವನ ರಚನಾ ಸ್ಪರ್ಧೆಯಲ್ಲಿ ಇವರ 'ಭಾವೈಕ್ಯ' ಕವನವು ಪ್ರಥಮ ಬಹುಮಾನ ಪಡೆದಾಗ ಕವಿ ಎಸ್. ಡಿ. ಇಂಚಲ ಅವರಆತಿಥ್ಯದಲ್ಲಿ ಸ್ವಾತಂತ್ರ್ಯ ಯೋಧ ಗಾಂಧೀವಾದಿಂಕರೆಡ್ಡಿ ಹೂಲಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಅದ್ದೂರಿ ಸನ್ಮಾನ ಏರ್ಪಟಟಿದ್ದು ವಿಶೇಷ.
ಅವರ ಸಂಸ್ಮರಣೆಯಲ್ಲಿ ಕವಿ ಎಸ್. ಡಿ. ಇಂಚಲ ಮತ್ತು ಕವಿ ಉಳುವೀಶ ಹುಲೆಪ್ಪನವರ ಮಠ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಪ್ರಸ್ತುತ ವರ್ಷದಿಂದ ಉತ್ತಮ ಮಕ್ಕಳ ಸಾಹಿತ್ಯ ಕೃತಿಗೆ ರಾಜ್ಯಮಟ್ಟದ ಶಿಶು ಕಾವ್ಯ ಪುರಸ್ಕಾರವನ್ನು ನೀಡಲಾಗುತ್ತಿದೆ. ಇದೀಗ 2024 ನೇ ವರ್ಷದ ಉಳುವೀಶ ಹುಲೆಪ್ಪನವರ ಮಠ “ರಾಜ್ಯಮಟ್ಟದ ಮಕ್ಕಳ ಕಾವ್ಯ ಪ್ರಶಸ್ತಿಗೆ ವಿಜಯಪುರ ಜಿಲ್ಲೆ ಸಿಂದಗಿಯ ಪ್ರೊ. ರಾ. ಶಿ. ವಾಡೇದ ಅವರ ಕಾವ್ಯಕೃತಿ 'ಎತ್ತಿನ ಬಂಡಿ' ಆಯ್ಕೆಯಾಗಿದೆ. ಅವರಿಗೆ 5000 ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿದೆ.
ಪ್ರೊ. ರಾ. ಶಿ. ವಾಡೇದ ಅವರು ಸಾಹಿತ್ಯ ರಂಗದಲ್ಲಿಯೇ ಅಜರಾಮರವಾಗಿರುವ ರಚನೆ ಚುಟುಕು ಸಾಹಿತ್ಯಗ್ರಂಥ ಲೇಖನ ಮಾಡಿದ ಸಾಧನೆಗಳು ಅಪಾರ. ಮಕ್ಕಳ ಸಾಹಿತ್ಯ ಕೃತಿಗಳಾದ ಸುಂದರ ಚಂದಿರ, ಮಾಯದ ಕುದುರೆ ನಾಟಕಗಳು, ಕೈತೋಟ, ಚಿನ್ನರ ಆಟ, ಬೆಳಕು, ದಡಂದುಡುಕಿ,ತುತ್ತೂರಿ, ಸ್ಹೇಹ ಸಿರಿ, ಅಜ್ಜಿಯ ಆಸೆ ಕಥೆ, ಫೈಬರಗುಬ್ಬಿ, ಟಂ.ಟಂ ಗಾಡಿಚಿನ್ನರ ನೂರೆಂಟು ಕವನಗಳು ಭಾಗ-1 ಹಾಗೂ 2 ಅಲ್ಲದೇ ಮಿಂಚು ಚುಟುಕು, ವಚನ ತರಂಗ ಅಧುನಿಕ ವಚನ, ಅತಿಥಿ ಫಜಿತಿ, ವಚನ ಸಿಂಚನ, ಮಕ್ಕಳ ಚಂದಿರ ಬದುಕು ಬರಹ, ಶರಣ ಸಂಗಾತಿ, ಕೊರಡು ಕೊನರು, ಭೀಮಾಶಿರಿ, ಕರುಣಾಮಯಿ, ಶಾಂತ ಪ್ರಭೆಇವರ ರಚನೆಗಳು, ಸುಧಾ ಸರೋಜ, ಬೆಳ್ಳಕಿ ಕವನಗಳು,ಸಿಂದಗಿ ತಾಲೂಕ 6ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ, ಕಸಾಪದ79ನೇ ಸಂಪಾನೆಗಳಿಗೆ ಸಮಿತಿ ಸದಸ್ಯ ಹಾಗೂ ಕರ್ನಾಟಕರಾಜ್ಯ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರೊ. ರಾ. ಶಿ. ವಾಡೇದ ಅವರಿಗೆ 2014 ರಲ್ಲಿ ಜಿಲ್ಲಾಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ರತ್ನ, ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ಕರ್ನಾಟಕ ಭೂಷಣ, ಹಾಸ್ಯರಾಜ, ಸರಸ್ವತಿ ಶ್ರೀ, ಇವರ ಸಾಹಿತ್ಯ ಸಾಧನೆಗೆ ಅಂದಿನ ಕರ್ನಾಟಕ ಘನವತ್ತ ರಾಜ್ಯಪಾಲರಾದ ಹಂಸರಾಜ ಭಾರದ್ವಾಜ ಅವರಿಂದ ರಾಜಭವನದಲ್ಲಿ ಸನ್ಮಾನಹಾಗೂ ಸಾಹಿತ್ಯ ಶ್ರೀ ಪ್ರಶಸ್ತಿಗಳು ಇವರ ಮುಡಿಗೇರಿವೆ. ಇವರ ಸಾದನೆಗೆ ಮಿತಿಯೇ ಇಲ್ಲ ಇಂತಹ ಸಾಹಿತ್ಯ ಧೀಮಂತನಿಗೆ ರಾಜ್ಯರಾಜ್ಯೋತ್ಸವ ಪ್ರಶಸ್ತಿ ಸಿಗುವದಲ್ಲಿ ತಪ್ಪೇನಿಲ್ಲ ಬೇಗನೆ ಸಿಗಲಿ ಎಂಬುದೇ ಸಾಹಿತ್ಯ ಪ್ರೇಮಿಗಳ ಆಶಯವಾಗಿದೆ.