ಯುವಕರು ಭವಿಷ್ಯದ ಸಾಂಸ್ಕೃತಿಕ ಪರಂಪರೆಯ ಪಾಲಕರು: ಸಾಹಿತಿ ಮಾರ್ತಾಂಡಪ್ಪ ಕತ್ತಿ

Youth are the guardians of future cultural heritage: Literary scholar Marthandappa Katti

ಯುವಕರು ಭವಿಷ್ಯದ ಸಾಂಸ್ಕೃತಿಕ ಪರಂಪರೆಯ ಪಾಲಕರು: ಸಾಹಿತಿ ಮಾರ್ತಾಂಡಪ್ಪ ಕತ್ತಿ

ವಿಜಯಪುರ 04: ಯುವಕರು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳ ಪಾಲಕರು. ನಮ್ಮ ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಅವರಲ್ಲಿ ಹೆಮ್ಮೆ ಮತ್ತು ಜವಾಬ್ದಾರಿಯ ಭಾವವನ್ನು ಮೂಡಿಸುವುದು ಅತ್ಯಗತ್ಯ. ಆಧುನಿಕತೆಯನ್ನು ಅಳವಡಿಸಿಕೊಳ್ಳುವುದರೊಂದಿಗೆ ನಮ್ಮ ಸಾಂಸ್ಕೃತಿಕ ಬೇರುಗಳನ್ನು ಪೋಷಿಸುವ ಮೂಲಕ, ಯುವಜನರು ಪ್ರಗತಿಪರ ಮತ್ತು ಪರಂಪರೆಯಲ್ಲಿ ಬೇರೂರಿರುವ ಸಮಾಜವನ್ನು ನಿರ್ಮಿಸಲು ದೊಡ್ಡ ಪಾತ್ರವಿದೆ ಎಂದು ಸಾಹಿತಿ ಸಂಘಟಕ ಮಾರ್ತಾಂಡಪ್ಪ ಕತ್ತಿ ಹೇಳಿದರು.ಅವರು ಕೆ.ಎಸ್ ಜಿಗಳೂರು ಕಲಾ ಮತ್ತು ಡಾ ಎಸ್ ಎಮ್ ಶೇಷಗಿರಿ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ದೇವರಹುಬ್ಬಳ್ಳಿ ಗ್ರಾಮದ ಸಿದ್ದಾಶ್ರಮದಲ್ಲಿ ಹಮ್ಮಿಕೊಂಡ ಎನ್ ಎಸ್ ಎಸ್ ನ ವಿಶೇಷ ವಾರ್ಷಿಕ ಶಿಬಿರದಲ್ಲಿ ಮಾತನಾಡುತ್ತಾ ಯುವಕರು ಭಾರತದ ಭವಿಷ್ಯದ ಬೆನ್ನೆಲುಬು. ಭವ್ಯ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ರಾಷ್ಟ್ರ ನಿರ್ಮಾಣದ ಪ್ರಯತ್ನಗಳಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಭಾಗವಹಿಸುವಿಕೆ ಅತ್ಯಗತ್ಯ. ಯುವಕರನ್ನು ಸಬಲೀಕರಣಗೊಳಿಸುವ ಮೂಲಕ, ಅವರ ಪ್ರತಿಭೆಯನ್ನು ಪೋಷಿಸುವ ಮೂಲಕ ಮತ್ತು ಅವರಿಗೆ ಅವಕಾಶಗಳನ್ನು ಒದಗಿಸುವ ಮೂಲಕ, ಭಾರತವು ಜನಸಂಖ್ಯಾ ಲಾಭಾಂಶವನ್ನು ಬಳಸಿಕೊಳ್ಳಬಹುದು ಮತ್ತು ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯವನ್ನು ನಿರ್ಮಿಸಬಹುದು ಎಂದು ಹೇಳಿದರು.ಕಸಾಪ ಜಿಲ್ಲಾಧ್ಯಕ್ಷರಾದ ಡಾ ಲಿಂಗರಾಜ ಅಂಗಡಿ ಉದ್ಘಾಟನೆ ಮಾಡಿ  ಎನ್‌. ಎಸ್‌. ಎಸ್ ನ ಗುರಿ, ಉದ್ದೇಶ ಹಾಗೂ ತಮ್ಮ ಎನ್ ಎಸ್ ಎಸ್ ಅಧಿಕಾರಿಯಾಗಿದ್ದಾಗಿನ ಅನುಭವದ ವಿಷಯಗಳನ್ನು ಹಂಚಿಕೊಂಡರು.ದೇವರಹುಬ್ಬಳ್ಳಿಯ ಸಿದ್ದಾಶ್ರಮದ ಶ್ರೀ ಸಿದ್ದ ಶಿವಯೋಗಿಗಳು ಸಾನಿದ್ಯ ವಹಿಸಿ ಪ್ರವಚ ನೀಡಿದರು. ಕಸಾಪ ಜಿಲ್ಲಾ ಸಹಕಾರ್ಯದರ್ಶಿ ಶಾಂತವೀರ ಬೇಟಗೇರಿ ಅತಿಥಿಗಳಾಗಿ ಮಾತನಾಡಿದರು.ಪ್ರಾಚಾರ್ಯೆ ಡಾ ರಾಜೇಶ್ವರಿ ಶೆಟ್ಟರ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ವೇದಿಕೆಯಲ್ಲಿ ಅತಿಥಿಗಳಾಗಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಎಸ್ ಕೆ   ಹೊಸಂಗಡಿ, ಪಶುವೈದ್ಯಕೀಯ ಪರೀಕ್ಷಕರ ಶ್ರೀಶೈಲ ಚಿಕನಳ್ಳಿ, ಎಮ್ ಐ ಮೂಲಿಮನಿ, ದಿವ್ಯಾ ಸನಿದ್ಯಾ ಇದ್ದರು.ಕಾರ್ಯಕ್ರಮ ಅಧಿಕಾರಿ ಡಾ ಅನಿತಾ ಕಡಪಟ್ಟಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಕು.ಅಕ್ಷತಾ ನಿರೂಪಿಸಿದರು. ಡಾ. ಅಶ್ವಿನಿ ಪಾಟೀಲ ವಂದಿಸಿದರು. ಎನ್ ಎಸ್ ಎಸ್‌. ಘಟಕ, 1 ಮತ್ತು 2  ಶಿಬಿರಾರ್ಥಿ ವಿದ್ಯಾರ್ಥಿಗಳು ಇದ್ದರು.