ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿಗೆ 23 ಜನ ಸಾಧಕರ ಆಯ್ಕೆ
ಕೊಪ್ಪಳ 31: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಮತ್ತು ಬಿಜಾಪೂರ ಜಿಲ್ಲಾ ಘಟಕದಿಂದ ಕೊಡಮಾಡುವ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿಗೆ ವಿಜಯನಗರ ಜಿಲ್ಲೆಯ ಗಿಟಾರಿಸ್ಟ್ ಸ್ಯಾಮಸನ್ ಪೆಂಡೆಮ್ ಮತ್ತು ಬಳ್ಳಾರಿ ಜಿಲ್ಲೆಯ ಜಗದೀಶ ಪೂಜಾರ್ ಸೇರಿ ರಾಜ್ಯದ 23 ಜನ ಸಾಧಕರನ್ನು 3 ಯುವ ಸಂಘಗಳನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಮತ್ತು ಕಲಬುರಗಿ ವಿಭಾಗೀಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಅವರು ಫೆಬ್ರವರಿ 5 ರಂದು ಬಿಜಾಪೂರ ಜಿಲ್ಲಾ ಮುದ್ದೆಬಿಹಾಳದಲ್ಲಿ ನಡೆಯುವ ವರ್ಣರಂಜಿತ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸದರಿ ಕಾರ್ಯಕ್ರಮಕ್ಕೆ ಅನೇಕ ಸಚಿವರು, ಶಾಸಕರು ಮತ್ತು ಸ್ವಾಮೀಜಿಗಳು ಹಾಗೂ ಸಿನೆಮಾ ಟಿವಿ ಕಲಾವಿದರು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನಿವಾಸಿ ಚಲನಚಿತ್ರ ಸಂಗೀತ ನಿರ್ದೇಶಕರು, ಗಿಟಾರ್ ಶಿಕ್ಷಕ ಮತ್ತು ಸಿಂಫೊನಿ ಮ್ಯುಸಿಕ್ ಅಕಾಡಮಿಯ ಸಂಸ್ಥಾಪಕ ಸ್ಯಾಮಸನ್ ಪೆಂಡೆಮ್ ಹಾಗೂ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಕಣ್ವಿತಿಮ್ಮಲಾಪೂರ ಗ್ರಾಮದ ಸಮಾಜ ಸೇವಕ ಜಗದೀಶ ಪೂಜಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜಾಪೂರ ಜಿಲ್ಲಾ ಅಧ್ಯಕ್ಷ ಪುಂಡಲೀಕ ಮುರಾಳ ಅವರು ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರು : ಪ್ರೊ. ಹೆಚ್. ಆರ್. ವೆಂಕಟೇಶ್ (ಮೈಸೂರು), ತಾಯಪ್ಪ ಹೊಸೂರ (ರಾಯಚೂರ), ಶ್ರೀಕಾಂತ ಪೂಜಾರಿ ಬಿರಾವು (ದಕ್ಷಿಣ ಕನ್ನಡ), ನಾಗರಾಜ್ ನಾಯಕ್ (ಉತ್ತರ ಕನ್ನಡ), ಮಹೇಂದ್ರ ಜಾಧವ್ (ಬಿಜಾಪೂರ), ರಾಜ ಅಹ್ಮದ್ ನಬಿವಾಲೆ (ಬಾಗಲಕೋಟೆ), ಜಿ. ಎಸ್. ಷಡಕ್ಷರ್ಪ (ದಾವಣಗೆರೆ), ಕೆ. ಎಸ್. ಮೂರ್ತಿ (ಕೊಡಗು), ನಾಗೇಂದ್ರ ಚೌಗಲಾ (ಬೆಳಗಾವಿ), ಓಣಿ ತೋಟ ರತ್ನಾಕರ್ (ಚಿಕ್ಕಮಗಳೂರ), ಈರ್ಪ ಕರನಂದಪ್ಪ ಎಮ್ಮಿ (ಧಾರವಾಡ), ಡಾ. ಗಣೇಶ ಗಂಗೊಳ್ಳಿ (ಉಡುಪಿ), ರಾಘವೇಂದ್ರ ಡಿ.ಎಸ್. (ಬೀದರ), ನರಸಿಂಹಮೂರ್ತಿ ಆರ್. (ತುಮಕೂರ), ವಸಂತ ಬಿ. ಮಡ್ಲೂರ (ಗದಗ), ರಾಜು ನಾಯ್ಕ ಎಸ್. (ಶಿವಮೊಗ್ಗ), ಸ್ಯಾಮಸನ್ ಪೆಂಡೆಮ್ (ವಿಜಯನಗರ), ಆರ್. ಜಿ. ಗೀರೀಶ್ (ಹಾಸನ), ಬಿ. ಮೈಲಾರ್ಪ (ಚಿತ್ರದುರ್ಗ), ಸೋ. ಸೂ. ನಾಗೇಂದ್ರನಾಥ್ (ಚಿಕ್ಕಬಳ್ಳಾಪೂರ), ವಿ. ರಾಮದಾಸ್ (ಚಾಮರಾಜನಗರ), ಬಸವಯ್ಯಸ್ವಾಮಿ (ಯಾದಗಿರಿ), ಜಗದೀಶ ಪೂಜಾರ್ (ಬಳ್ಳಾರಿ) ಹಾಗೂ ಸಂಘ ಪ್ರಶಸ್ತಿ ವಿಭಾಗದಲ್ಲಿ ದಕ್ಷಿಣ ಕನ್ನಡದ ಪೂತ್ತೂರಿನ ಪ್ರೇರಣಾ ಸಂಘಟನೆ, ಚಿಕ್ಕಮಗಳೂರಿನ ಶ್ರೀ ಚಂಡಿಕೇಶ್ವರಿ ಅಂಟಿಗೆ ಪಿಂಟಿಗೆ ತಂಡ ಮತ್ತು ವಿಜಯಪುರದ ಹಸಿರು ತೋರಣ ಗೆಳೆಯರ ಬಳಗಕ್ಕೆ ಪ್ರಶಸ್ತಿ ಸಂದಿವೆ ಎಂದು ಪ್ರಕಟಣೆ ತಿಳಿಸಿದೆ.