ಬೇಲಿಯೇ ಎದ್ದು ಹೊಲ ಮೇಯ್ದಂತೆ ಆರೋಪ : ಭರತ ಬೊಮ್ಮಾಯಿ
ಶಿಗ್ಗಾವಿ 30 : ತಾಲೂಕಿನಲ್ಲಿ ಇತ್ತೀಚಿಗೆ ಇಸ್ಪೀಟ್, ಜೂಜು ದಂಧೆ ಹೆಚ್ಚಾಗಿದ್ದು ಶಾಸಕರ ಆಪ್ತರಿಂದಲೇ ಜೂಜಾಟ ದಂಧೆ ನಡೆಯುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತಿದೆ ಎಂದು ಭಾಜಪ ಮುಖಂಡ ಭರತ ಬೊಮ್ಮಾಯಿ ಆರೋಪಿಸಿದರು. ವರದಿಗಾರರೊಂದಿಗೆ ಮಾತನಾಡಿದ ಅವರು ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಸಂಸದ ಹಾಗು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ ಸವಾಂರ್ಗೀಣ ಅಭಿವೃದ್ಧಿ ನಡೆದುಕೊಂಡು ಬಂದಿದ್ದು, ಹಿಂದುಳಿದ ಕ್ಷೇತ್ರವನ್ನು ನಂ.1 ಕ್ಷೇತ್ರವನ್ನಾಗಿ ಪರಿವರ್ತನೆ ಗೊಳಿಸಲಾಗಿತ್ತು ಆದರೆ ಇದೀಗ ಹಲವಾರು ತಿಂಗಳುಗಳಿಂದ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಹಲವಾರು ಜನರು ಇದರ ಬಲಿಪಶುಗಳಾಗುತ್ತಿರುವುದು ದುಃಖದ ಸಂಗತಿಯಾಗಿದೆ ಎಂದರು.