ಕೊಪ್ಪಳದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾದ ಅನ್ಸಾರಿ ಹೇಳಿಕೆ

Ansari's statement sparked a wide debate in Koppal

ಕೊಪ್ಪಳದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾದ ಅನ್ಸಾರಿ ಹೇಳಿಕೆ 

ಕೊಪ್ಪಳ 28:  ಇತ್ತೀಚಿಗೆ ನಗರದ ಸಾಹಿತ್ಯ ಭವನದಲ್ಲಿ ಜರುಗಿದ್ದ ಭಾರತ ಕಂಡ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಜಯಂತೋತ್ಸವ ಸಮಾರಂಭದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಡಿರುವ ಮಾತು ಕೆಲವೊಂದು ಹೇಳಿಕೆ ನೀಡಿರುವುದು ಅಚ್ಚರಿ ಉಂಟು ಮಾಡಿದೆ ಅದರಲ್ಲಿ ಸತ್ಯಾಂಶ ಹೆಚ್ಚಾಗಿದೆ. ಆದರೆ ಹೇಳಿರುವ ವೇದಿಕೆ ಮತ್ತು ಸ್ಥಳ ಸೂಕ್ತವಾಗಿದ್ದಿಲ್ಲ ಎಂಬ ಅನಿಸಿಕೆ ಅಭಿಪ್ರಾಯ  ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗುತ್ತಿದೆ.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವವರಿಗೆ ಮುಸ್ಲಿಮರಿಗೆ ಏನಾದರೂ ಅಭಿವೃದ್ಧಿಪರ ಕೆಲಸ ಮಾಡಿಕೊಳ್ಳಬಹುದು. ಅವರ ನಂತರ ಸಾಧ್ಯವಾಗುವುದಿಲ್ಲ ಎಂಬುದು ಒಂದು ಹೇಳಿಕೆಯಾದರೆ ತಮಗೆ ಸಿದ್ದರಾಮಯ್ಯನವರೇ ನಾಯಕ ಬೇರೆ ಯಾರು ಅಲ್ಲ ಎಂಬುವುದಾಗಲಿ ಅಥವಾ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಸೋಲಿಗೆ ತಮ್ಮ ಸ್ವಪಕ್ಷದವರೇ ಕುತಂತ್ರ ನಡೆಸಿದ್ದಾರೆಂಬ ಹೇಳಿಕೆಯಾಗಲಿ ಭಾರಿ ಚರ್ಚೆಯಲ್ಲಿ ತೊಡಗಿದೆ. ಸದರಿ ಇವೆಲ್ಲ ವಿಷಯಗಳು ಸಾರ್ವಜನಿಕರ ವಲಯದಲ್ಲಿ ಮತ್ತು ಕೆಲವೊಂದು ಕಡೆ ಬಹಿರಂಗವಾಗಿ ಚರ್ಚೆ ನಡೆಯುತ್ತಿದೆ. ಸ್ಥಳೀಯ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ರವರ ಬಗ್ಗೆ ಇಕ್ಬಾಲ್ ಅನ್ಸಾರಿ ಹೇಳಿರುವುದು ಸತ್ಯಕ್ಕೆ ಸಮೀಪವಾಗಿದೆ ಹಾಗೂ ಒಂದು ರೀತಿ ನಿಜ ಅನಿಸುತ್ತಿದೆ. ಆದರೆ, ಕಾರ್ಯಕ್ರಮದ ವೇದಿಕೆ ಬಳಕೆ ಮಾಡಿಕೊಂಡಿರುವುದು ಸರಿಯಲ್ಲ ಎಂಬುದು ಕೆಲವರ ಅನಿಸಿಕೆ.  

ಕೊಪ್ಪಳದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕರಾಗಿದ್ದು, ಸತತ ಮೂರು ಬಾರಿ ಶಾಸಕ ಹಿಟ್ನಾಳಗೆ ಹಾಗೂ ಸತತವಾಗಿ  ಹಿಟ್ನಾಳ್ ಕುಟುಂಬದವರಿಗೆ ಗೆಲ್ಲಿಸುತ್ತಾ ಬಂದಿದ್ದಾರೆ. ಆದರೆ, ಅವರಿಂದ ಯಾವುದೇ ಒಂದು ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಆಗಲಿ, ಸ್ಪಂದನೆ ಆಗಲಿ, ವಿಶೇಷ ಸೌಲಭ್ಯ, ಹೆಚ್ಚುವರಿ ಅನುದಾನವಾಗಲಿ ಅಥವಾ ಮುಸ್ಲಿಂ ಸಮುದಾಯದ ವ್ಯಕ್ತಿಗಳ ಯಾವುದೇ ಪ್ರಮುಖ ಕೆಲಸವಾಗಲಿ, ವಿದ್ಯಾವಂತ ನಿರುದ್ಯೋಗಿಗಳ ಕೆಲಸವಾಗಲಿ ಇವರಿಂದ ಯಾವುದೇ ಹೇಳಿಕೊಳ್ಳುವಂತ ಸ್ಪಂದನೆ ಸಿಗಲಿಲ್ಲ. ಕೇವಲ ಆಯ್ತು ಭಯ್ಯ, ನೋಡೋಣ ಭಯ್ಯ, ಮಾಡೋಣ ಭಯ್ಯ, ಅಣ್ಣಯ್ಯ ಎಂದು ಹೇಳುತ್ತಾ ಸಮಸ್ಯೆಗಳ ನಿವಾರಣೆ ಮಾಡುವ ನೆಪದಲ್ಲಿ ಒಂದು ರೀತಿಯ ಶೋಷಣೆಗಳು ಹೆಚ್ಚಾಗಿದೆ ಎನ್ನಲಾಗಿದೆ. ಹಿಟ್ನಾಳ ಕುಟುಂಬದವರು ಶಿಫಾರಸ್ಸು ಪತ್ರ ನೀಡುವಲ್ಲಿ ಎತ್ತಿದ ಕೈ. ಆದರೆ, ಇವರು ನೀಡುವ ಶಿಫಾರಸು ಪತ್ರಕ್ಕೆ ಯಾವುದೇ ಬೆಲೆ ಇಲ್ಲ. ಯಾವುದೇ ಉಪಯೋಗಕ್ಕೆ ಬಂದಿಲ್ಲ, ಯಾರಿಗೂ ಯಾವುದೇ ರೀತಿಯ ಅನುಕೂಲವಾಗಲಿಲ್ಲ ಎಂಬುದು ಕೆಲ ನಿಷ್ಠಾವಂತ, ತೊಂದರೆಗೀಡಾದ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡಿದ ಸಮಾಜದ ಕೆಲ ಬಡಪಾಯಿಗಳ ಅಳಿಲು ಮತ್ತು ನೋವು ಇದಾಗಿದೆ.ಅನ್ಸಾರಿ ಅವರು ಹೇಳಿದ ಹಾಗೆ ಅವಲೋಕನ ಮಾಡಿದರೆ, ಇವರು ಶಿಫಾರಸ್ಸು ಮಾಡಿ ಕಳಿಸಿದ ವ್ಯಕ್ತಿಯ ಕೆಲಸ ಆಗಿಲ್ಲ.  

 ಅಲೆದಾಡಿ ಸುಸ್ತಾಗಿ ವಾಪಸ್ ಹೋಗಿದ್ದಾರೆ. ಸ್ವತಃ ಇಕ್ಬಾಲ್ ಅನ್ಸಾರಿ ಅವರೇ ಬಹಿರಂಗವಾಗಿ ಹಿಟ್ನಾಳರವರ ಬಗ್ಗೆ ಹೇಳಿರುವುದನ್ನು ಗಮನಿಸಿದರೆ, ಇನ್ನೂ ಜನಸಾಮಾನ್ಯರ ಗತಿ ಏನು? ಎಲ್ಲವೂದಕ್ಕು ಇವರು ಆಯ್ತು ಮಾಡೋಣ, ನೋಡೋಣ ಅಂತ ಹೇಳಿ ಮೂಗಿಗೆ ತುಪ್ಪ ಸವರಿ, ಬೆಣ್ಣೆ ಹಚ್ಚಿ ಕಳಿಸಿರುವುದನ್ನು ನೋಡಿದರೆ ಸಮಸ್ಯೆಗಳನ್ನ ನಿವಾರಣೆ ಮಾಡುವ ನೆಪದಲ್ಲಿ ಒಂದು ರೀತಿಯ ಶೋಷಣೆ ಇವರಿಂದ ನಿರಂತರವಾಗಿ ನಡೆಯುತ್ತಿದೆ. ಮುಸ್ಲಿಮರು ಬೇಡ ಅಂದರು ನಮಗೆ ವೋಟ್ ಹಾಕ್ತಾರೆ. ನಮಗೆ ಬಿಟ್ರೆ ಅವರಿಗೆ ಗತಿ ಏನು ಇಲ್ಲ ಎಂದು ಖಾತ್ರಿ ಮಾಡಿಕೊಂಡಿರುವ ಹಿಟ್ಟಾಳ ಕುಟುಂಬ ಮುಸ್ಲಿಮರಿಗೆ ನಿರಂತರ ಶೋಷಣೆ ಮಾಡುತ್ತಿದ್ದಾರೆಂದು ಕೆಲವರ ನೇರ ಆರೋಪವಾಗಿದೆ. ಇದನ್ನು ಗಮನಿಸಿದರೆ ನಿಜ ಇರಬಹುದು ಎಂದು ಸಂಶಯವ್ಯಕ್ತ ಪಡಿಸಲಾಗಿದೆ. ಸಾಮಾನ್ಯ ವ್ಯಕ್ತಿಯ ಯಾವುದೇ ಕೆಲಸ ಆಗಿರುವ ಉದಾಹರಣೆ ಸಿಗುವುದು ಬಹಳ ವಿರಳ, ಇವರು ಹೆಸರಿಗೆ ಮಾತ್ರ ಹಿಂದುಳಿದ ವರ್ಗದ ನಾಯಕರು, ಅಹಿಂದ್ ಮುಖ್ಯಸ್ಥರು, ಆದರೆ ಇವರು ಮಾಡುವ ಯಾವುದೇ ಕೆಲಸದಲ್ಲಿ ಆ ಕಲ್ಪನೆ ಕೂಡ ಇವರಿಗೆ ಇಲ್ಲ. ಇವರಿಂದ ಯಾವ ನ್ಯಾಯ ಸಿಗುವುದಿಲ್ಲ. ಅನ್ಸಾರಿ ಹೇಳಿರುವ ವೇದಿಕೆ ಸೂಕ್ತವಾಗಿದ್ದಲ್ಲ. ಆದರೂ ಅವರು ಹೇಳಿರುವುದು ಶೇಕಡ ನೂರಕ್ಕೆ ನೂರರಷ್ಟು ನಿಜ ಎನಿಸುತ್ತದೆ. ನಿಜ ಬಾಯಿಗೆ ಬಂದುಬಿಡುತ್ತದೆ ಬಹುಶಃ ಅದನ್ನೇ ಅನ್ಸಾರಿ ಅವರು ಹೇಳಿರಬೇಕು. ನಿಜ ಹೇಳಕ್ಕೂ ಕೂಡ ಧೈರ್ಯ ಬೇಕು. ಆ ಧೈರ್ಯ ಅನ್ಸಾರಿ ಅವರು ಮಾಡಿದ್ದಾರೆ ಅಷ್ಟೇ.ಸಿದ್ದರಾಮಯ್ಯನವರ ನಂತರ ಮುಸ್ಲಿಮರಿಗೆ ಚಂಬು ಅಂತ ಅನ್ಸಾರಿ ಭಾವಿಸಿಕೊಂಡಿರಬಹುದು. ಆದರೆ, ಈಗ ಮುಸ್ಲಿಮರ ಕೈಯಲ್ಲಿ ಏನಿದೆ? ಏನೂ ಇಲ್ಲ, ಚಂಬು ಈಗಾಗಲೇ ಮುಸ್ಲಿಮರ ಕೈ ಸೇರಿದಂತಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಿಯೂ ಒಬ್ಬರು ಮುಸ್ಲಿಮರು ಅಧಿಕಾರಿಗಳಿಲ್ಲ. ಎಲ್ಲಾ ಅವರವರ ಜಾತಿಯವರೇ ಹೆಚ್ಚಾಗಿದ್ದಾರೆ. ಎಲ್ಲೋ ಮೂಲ್ಯಾಗ ಒಂದು ಮುಸ್ಲಿಂ ಅಧಿಕಾರಿ ಅಥವಾ ಪೊಲೀಸ್ ಇಲಾಖೆಯಲ್ಲಿ ಒಂದು ಅಧಿಕಾರಿ ಇದ್ದರೆ ತೋರಿಸಿ ಅವರಿಗೆ ಸೂಕ್ತವಾದಂತ ಬಹುಮಾನ ನೀಡಲಾಗುವುದು. ಓಷಧಿಗೆ ಒಂದು ಬೇಕು ಅಂದರು ಸಿಗುವುದಿಲ್ಲ. ಕೊಪ್ಪಳ ಜಿಲ್ಲೆಯಾಗಿ 25 ವರ್ಷ ಕಳೆದಿದೆ.  

ಜಿಲ್ಲೆಗೆ ಒಮ್ಮೆಯಾದರೂ ಒಬ್ಬ ಮುಸ್ಲಿಂ ಐಎಎಸ್ ಅಧಿಕಾರಿ ಆಗಲಿ ಅಥವಾ ಐಪಿಎಸ್ ಅಧಿಕಾರಿಗಳಾಗಲಿ ನೇಮಕ ಗೊಂಡು ಜಿಲ್ಲೆಗೆ ಬಂದಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಜಿಲ್ಲಾ ಪಂಚಾಯಿತಿಗೆ ಒಬ್ಬರು ಮಾತ್ರ ಮುಸ್ಲಿಂ ಐಎಎಸ್ ಮಹಿಳಾ ಅಧಿಕಾರಿ ಬಂದಿದ್ದನ್ನು ಹೊರತುಪಡಿಸಿದರೆ, ಕಾಂಗ್ರೆಸ್ ಅಧಿಕಾರದವಧಿಯಲ್ಲಿ ಒಬ್ಬರು ನೇಮಕಗೊಂಡು ಜಿಲ್ಲೆಗೆ ಬಂದಿಲ್ಲ. ಮತ್ತೆ ಇವರು ಜಾತ್ಯಾತೀತರು, ಸಾಮಾಜಿಕ ನ್ಯಾಯದ ಮೇಲೆ ಆಡಳಿತ ನಡೆಸುವವರು, ಇವರಿಗಿಂತ ಕೋಮುವಾದಿ ಹಣೆಪಟ್ಟಿ ಕಟ್ಟಿಕೊಂಡಿರುವ ಪಕ್ಷ ಎಷ್ಟೋ ಉತ್ತಮ. ಜಾತ್ಯತೀತರು ಸರ್ವರಿಗೂ ಸಮ ಬಾಳು, ಸಮಪಾಲು ಎಂದು ಹೇಳಿಕೊಳ್ಳುವ ಇವರೆಲ್ಲ ಸ್ವಜಾತಿ ಪ್ರೇಮಿಗಳು. ಶೇಕಡ 90ರಷ್ಟು ಜನ ಇವರ ಸ್ವಜಾತಿ ಯವರೇ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಕಾರ್ಯಭಾರ ನಡೆಸುತ್ತಿದ್ದಾರೆ. ಇಂತಹ ಜನಪ್ರತಿ ನಿಧಿಗಳಿಂದ ಸಾಮಾಜಿಕ ನ್ಯಾಯ ಕನಸಿನ ಮಾತು, ಅದು ಸಾಧ್ಯವಿಲ್ಲದ ಮಾತು. ಇವರ ಮಾತಿಗೆ ಮರಳಾಗದಿರಿ. ಒಟ್ಟಾರೆ ಮುಸ್ಲಿಂ ಸಮಾಜ ಎಚ್ಚೆತ್ತು ಕೊಳ್ಳಬೇಕಾಗಿದೆ. ಜೊತೆಯಲ್ಲೇ ಇದ್ದುಕೊಂಡು ಶಕುನಿತನ ಮಾಡುವಂತಹ  ನಾಯಕರುಗಳಿಗಿಂತ ನೇರ ವಿರೋಧ ಮಾಡುವ ವಿರೋಧಿಗಳು ಎಷ್ಟೋ ಉತ್ತಮ. ಶೀಘ್ರ  ಚಿಂತನ ಮಂಥನ ಮಾಡುವಂತ ವೇದಿಕೆ ಮುಸ್ಲಿಂ ಸಮಾಜದಲ್ಲಿ ನಿರ್ಮಾಣವಾಗಬೇಕು. ಮುಂಬರುವ ದಿನಗಳಲ್ಲಿ ಸಮಾಜದ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಯಾವ ರೀತಿಯ ಯೋಜನೆಗಳನ್ನು ರೂಪಿಸಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ಅಲ್ಲದೇ ಇಂತಹ ಷಡ್ಯಂತ್ರ ನಡೆಸುವಂತಹ ಮತ್ತು ಗೊತ್ತಾಗದಂತೆ ಕ್ರಮೇಣವಾಗಿ ಶೋಷಣೆ ಮಾಡುವಂತಹ ನಾಯಕ ಜನಪ್ರತಿನಿಧಿ ಯಾವುದೇ ವರ್ಗದವರಾಗಲಿ, ಯಾವುದೇ ಪಕ್ಷದವರಾಗಲಿ ಇಂಥವರಿಂದ ದೂರ ಇರಲು ಮತ್ತು ಅವರಿಗೆ ಸರಿಯಾದ ಸಮಯದಲ್ಲಿ ಸರಿಯಾದ ಪಾಠ ಕಲಿಸಲು ಮುಂದಾಗ ಬೇಕಾಗಿದೆ. ಅವಶ್ಯಕತೆ ಬಿದ್ದರೆ ಮುಸ್ಲಿಮರ ವಿರೋಧಿ ಪಕ್ಷದ ಜೊತೆ ಕೈಜೋಡಿಸಿಕೊಂಡು ಹೋಗುವುದು, ಅವರಿಗೆ ಬೆಂಬಲಿಸಿ ಅವರ ಬೆಂಬಲ ಪಡೆಯುವುದು ಅಥವಾ ಕೇಳುವುದು ಸೂಕ್ತವಾಗಿದೆ. ಈ ದಿಶೆಯಲ್ಲಿ ಚಿಂತನ ಮಂಥನ ನಡೆಸುವುದು ಅತ್ಯವಶ್ಯಕವಾಗಿದೆ ಎಂದು ನೋಂದವರು ತಮ್ಮ ಅಳಲನ್ನು ತೋಡಿಕೊಂಡು ತಮ್ಮ ಆಶಯ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.