ಕೇಂದ್ರ ಮತ್ತು ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲ: ಕೆ.ಮಾಹಾಂತೇಶ ಆರೋಪ
ಕಂಪ್ಲಿ 07: ಕೇಂದ್ರ ಮತ್ತು ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳು ಒದಗಿಸುವಲ್ಲಿ ವಿಫಲಾಗಿವೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಮಾಹಾಂತೇಶ ಆರೋಪಿಸಿದರು. ಪಟ್ಟಣದ ಸೋಮಪ್ಪ ದೇವಸ್ಥಾನ ಆವರಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಪೇಡರೇಷನ್ ಕಂಪ್ಲಿ ತಾಲೂಕು ಸಮಿತಿಯಿಂದ ಏರ್ಾಡಿಸಿದ ಕಟ್ಟಡ ಕಾರ್ಮಿಕರ ನಮ್ಮೋಂದಿಗೆ ತಿಳಿದು ಕೈ ಜೋಡಿಸಿ 4ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ. ಕಾರ್ಮಿಕರ ಅವಿರತ ಹೋರಾಟವೇ ತ್ಯಾಗ ಬಲಿದಾನಗಳಿಂದ ಪ್ರತ್ಯೇಕ ಕಾಯ್ದೆ ಜಾರಿಯಾಯಿತು ಸರಕಾರಗಳು ಕಾರ್ಮಿಕರ ಶ್ರಮ ಜೀವಿಗಳ ಬದುಕನ್ನು ರಕ್ಷಿಸಿ ಜೊತೆಗೆ ಸರ್ಕಾರದ ಸೌಲಭ್ಯ ಒದಗಿಸಲು ಮುಂದಾಗಲಿ ಕಟ್ಟಡ ಕಾರ್ಮಿಕರಿಗೆ ದೊರೆಯಬೇಕಾಗಿರುವ ಶೈಕ್ಷಣಿಕ, ಮತ್ತು ಮದುವೆ ಧನ ಸಹಾಯ ಸ್ವಾಭಾವಿಕ ಮರಣ ಅಂತ್ಯಕ್ರೀಯೆ. ಮತ್ತು ವೈದ್ಯಕೀಯಾ ವೆಚ್ಚ ಹೆರಿಗೆ ಸೌಲಭ್ಯ .ಬಾಂಡ್ ಹಣ ಸೇರಿ ಯಾವುದೇ ಸೌಲಭ್ಯ ಒದಗಿಸಿಲ್ಲ ಅಸಂಘಟಿತ,ಕಾಮೀಕರಾಗಿದ್ದು ಸರ್ಕಾರ ಕಟ್ಟಡ ಕಾರ್ಮಿಕರ ಬಾಕಿ ಇರುವ ಸೌಲಭ್ಯ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷ ಜೆ.ಸತ್ಯಬಾಬು ಮಾತನಾಡಿ ಕಾರ್ಮಿಕರಿಗೆ ವಿದ್ಯಾಭ್ಯಾಸದಿಂದ ವಂಚಿತರಾಗಿದ್ದು ಅವರಿಗೆ ಸ್ವಂತ ನಿವೇಶನ ಇಲ್ಲದೆ ಸಮಾಜದಲ್ಲಿ ಅತ್ಯಂತ ಸಾಮಾಜಿಕವಾಗಿ ತುಳಿತಕೇ ಒಳಗಾಗಿದ್ದು ಸರ್ಕಾರ ಶೀಘ್ರದಲ್ಲಿ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದರು. ಪಟ್ಟಣದ ಉದ್ಘವ ಗಣಪತಿ ಮೆರವಣಿಗೆ ಆರಂಭಗೊಂಡು ಪ್ರಮುಖ ರಸ್ತೆ ಮೂಲಕ ಜಾತ ಸೋಮಪ್ಪ ದೇವಸ್ಥಾನದಲ್ಲಿ ಸಮಾವೇಶಗೊಂಡಿತು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಫೆಡರೇಷನ್ ನೂತನ ಕಂಪ್ಲಿ ತಾಲೂಕು ಅಧ್ಯಕ್ಷ ಐ ಹೊನ್ನೂರಸಾಬ್ ಗೌರವಧ್ಯಕ್ಷ ಬಂಡಿ ಬಸವರಾಜ ಪ್ರಾಧಾನ ಕಾರ್ಯದರ್ಶಿ,ಆರ್ ನಾಗರಾಜ ಖಜಾಂಚಿ ವಿ ದೇವಣ್ಣ ಮಹಿಳಾ ಕಟ್ಟಡ ಕಾರ್ಮಿಕರು ಇತರೆ ಕಾರ್ಮಿಕರ ಫೆಡರೇಷನ್ ಸದಸ್ಯರಿದ್ದರು