ನೇಸರಗಿ ಭಾಗದ ಸರ್ವಾಂಗೀನ ಅಭಿವೃದ್ಧಿಗೆ ಬದ್ದ: ಬಾಬಾಸಾಹೇಬ ಪಾಟೀಲ
ನೇಸರಗಿ 09: ಶನಿವಾರದಂದು ಗ್ರಾಮದ ಶ್ರೀ ವೀರಭದ್ರಶ್ವರ ದೇವಸ್ಥಾನದ ಕಲ್ಯಾಣ ಮಂಟಪ ಕಾಮಗಾರಿಗೆ ನೀರಾವರಿ ಇಲಾಖೆಯಿಂದ ರೂ 48,5000 ಗಳ ಕಟ್ಟಡ ಕಾಮಗಾರಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ ನಾನು ಚುನಾವಣೆಯಲ್ಲಿ ತಮಗೆ ಮಾತು ಕೊಟ್ಟಂತೆ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಮಾತು ಕೊಟ್ಟಿದ್ದು ಅದನ್ನು ಹಂತ ಹಂತವಾಗಿ ಸರಾಗವಾಗಿ ಕೆಲಸ ನಡೆಯುತ್ತಿದ್ದು ಇಂದು ನೇಸರಗಿ ಗ್ರಾಮದಲ್ಲಿ ರಸ್ತೆ, ಶಾಲೆ, ದೇವಸ್ಥಾನ, ಮುಲಸೌಕರ್ಯ ಅಭಿವೃದ್ಧಿಗೆ ಸುಮಾರು 1 ಕೋಟಿ ಅನುದಾನದ ಕಾಮಗಾರಿ ಪ್ರಾರಂಭವಾಗಲಿದ್ದು ನನಗೆ ಹೆಮ್ಮೆ ಅನಿಸುತ್ತದೆ ಎಂದು ಬಾಬಾಸಾಹೇಬ ಪಾಟೀಲ ಹೇಳಿದರು. ಈ ಸಂದರ್ಭದಲ್ಲಿ ಶ್ರೀ ವೀರಭದ್ರಶ್ವರ ದೇವಸ್ಥಾನ ಕಮಿಟಿ, ಶ್ರೀ ಮಾರುತಿ ದೇವಸ್ಥಾನ ಕಮಿಟಿ ವತಿಯಿಂದ ಶಾಸಕ ಬಾಬಾಸಾಹೇಬ ಪಾಟೀಲ ಅವರನ್ನು ಆತ್ಮೀಯವಾಗಿ ಸತ್ಕರಿಸಲಾಯಿತು. ಪಿ ಕೆ ಪಿ ಎಸ್ ಅಧ್ಯಕ್ಷ ಆರ್ ಎಮ್ ಯತ್ತಿನಮನಿ ಮಾತನಾಡಿ ದೇವಸ್ಥಾನ ಅನುದಾನ ಸಿಗುವಲ್ಲಿ ಶಾಸಕರ ಪಾತ್ರ ದೊಡ್ಡದು ಎಂದರು. ಯುವ ಮುಖಂಡ ಸಚಿನ ಪಾಟೀಲ ಮಾತನಾಡಿ ಎಲ್ಲ ಕೆಲಸ ಕಾರ್ಯ ಮಾಡಲು ಶಾಸಕರು ಉತ್ಸುಕರಾಗಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಶ್ರಮದಿಂದ ಕೆಲಸ ಮಾಡುತ್ತಾರೆ ಎಂದರು. ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಎಸ್ ಬಿ. ಗೆಜ್ಜಿ, ಎಸ್ ವಿ. ಸೊಮ್ಮಣ್ಣವರ, ಅಡಿವಪ್ಪ ಮಾಳನ್ನವರ, ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ಮಲ್ಲಪ್ಪ ಮಾಳಣ್ಣವರ, ಗ್ರಾ ಪಂ ಅಧ್ಯಕ್ಷ ವೀರಭದ್ರ ಚೋಭಾರಿ, ಬಾಳಪ್ಪ ಮಾಳಗಿ,ಮಾಜಿ ಎ ಪಿ ಎಮ್ ಸಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ, ಸೋಮನಗೌಡ ಪಾಟೀಲ, ಗುರು ತುಬಚಿ, ಬಸವರಾಜ್ ಹಿರೇಮಠ, ನಜೀರ ತಹಶೀಲ್ದಾರ, ಮಂಜುನಾಥ ಹುಲಮನಿ, ಬಸನಗೌಡ ಚಿಕ್ಕನಗೌಡ್ರ,ಸಿದ್ದಪ್ಪ ಇಂಚಲ, ಶೇಖಣ್ಣ ಕಾರಜೋಳ, ಶಂಕರ ತಿಗಡಿ, ಮಲ್ಲಪ್ಪ ಗುಜನಟ್ಟಿ, ಬಸಪ್ಪ ಕಗ್ಗಣಗಿ,ದೇಮಪ್ಪ ಗುಜನಟ್ಟಿ, ಗೋಪಾಲ ಪೂಜೇರಿ, ಗುರುಪಾದಯ್ಯ ಚರಂತಿಮಠ,ಮಲ್ಲಪ್ಪ ಯತ್ತಿನಮನಿ,ಬಸವರಾಜ ಚಿಕ್ಕನಗೌಡ್ರ, ಯಮನಪ್ಪ ಪೂಜೇರಿ, ಸಿದ್ದಿಕ್ ಭಾಗವಾನ, ಸೇರಿದಂತೆ ಗ್ರಾಮದ ಹಿರಿಯರು,ಎಲ್ಲ ಸಮಾಜದ ಮುಖಂಡರು, ಗ್ರಾ ಪಂ ಸದಸ್ಯರು, ಗ್ರಾಮಸ್ಥರು, ಶ್ರೀ ವೀರಭದ್ರಶ್ವರ ದೇವಸ್ಥಾನ ಕಮಿಟಿ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.