ಆತ್ಮ ಚಿಂತನ ಕಾರ್ಯಕ್ರಮ ಸಮಾರೋಪ ಸಮಾರಂಭ
ಕೊಪ್ಪಳ 17: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಗವಿಮಠದ ಶಾಂತಿವನದಲ್ಲಿ ಆತ್ಮ ಚಿಂತನ ಕಾರ್ಯಕ್ರಮ ಸಮಾರೋಪ ಸಮಾರಂಭ ಜರಗಿತು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ ಬೆನಕನಹಳ್ಳಿಯ ಪರಮಪೂಜ್ಯ ದೇವಾನಂದ ಶರಣರು ಹಾಗೂ ಕಜ್ಜಿಡೋಣಿಯ ಪರಮಪೂಜ್ಯ ಕೃಷ್ಣಾನಂದ ಶಾಸ್ತ್ರಿಗಳು ಹಾಗೂ ರಾಯಚೂರಿನ ಹನುಮಂತ ಕಾಕರಗಲ್ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ನಿನ್ನ ನಿಜವಿದನೇ ತಿಳಿಬೇರೆನ್ನದೆ ಎಲೆ ಮನುಜೆ ಈ ವಿಷಯದ ಕುರಿತಂತೆ ಅವರ ವಿಚಾರಧಾರೆಗಳನ್ನು ಆತ್ಮ ಚಿಂತನ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ತಿಳಿಹೇಳಿದರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಗವಿಸಿದ್ದಪ್ಪ ಕಾಣಿಹಾಳ್ ಮಾತನಾಡಿದರು ವೀರೇಶ್ ನಿರೂಪಿಸಿದರು ಪ್ರಶಾಂತ್ ವಂದಿಸಿದರು.