ಆರೋಪಗಳಿಂದ ಮುಕ್ತನಾಗಿದ್ದೇನೆ ನ್ಯಾಯಕ್ಕೆ ಜಯ ಸಿಕ್ಕಿದೆ-ಕವಲೋರು
ಕೊಪ್ಪಳ 28: ನನ್ನ ಮೇಲೆ ಇಲ್ಲಸಲ್ಲದ ಆರೋಪವನ್ನು ಹೂರಿಸಿ ಷಡ್ಯಂತರದಿಂದ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದರು ಆದರೆ ಈಗ ನಾನು ಆರೋಪಗಳಿಂದ ಮುಕ್ತನಾಗಿದ್ದೇನೆ ನ್ಯಾಯಾಲಯದಿಂದ ಬಂದಿರುವ ತೀರ್ು ನ್ಯಾಯಕ್ಕೆ ಸಂದ ಗೌರವವಾಗಿದೆ. ನ್ಯಾಯಕ್ಕೆ ಜಯ ಸಿಕ್ಕಿದೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯ ಸಂಚಾಲಕ ಹಾಗೂ ಕವಲೂರು ಟ್ರಸ್ಟಿನ ಅಧ್ಯಕ್ಷ ವಿಜಯಕುಮಾರ್ ಕವಲೂರು ಹೇಳಿದರು.
ಅವರು ಮಂಗಳವಾರ ಪತ್ರಿಕಾ ಭವನದಲ್ಲಿ ಏರಿ್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಕೊಪ್ಪಳ ನಗರ ಹಾಗೂ ಜಿಲ್ಲೆಯಲ್ಲಿ ಹಲವಾರು ಜನಪರ ಹೋರಾಟ ಕೈಗೊಳ್ಳುತ್ತ ಸಮಾಜ ಸೇವೆ ಮಾಡುತ್ತಾ ಸಾರ್ವಜನಿಕ ಜೀವನದಲ್ಲಿ ಹೆಜ್ಜೆ ಹಾಕುತ್ತಿದ್ದೇನೆ ಜಿಲ್ಲೆಯ ಸಮಸ್ಯೆಗಳಲ್ಲದೇ, ನಾಡು ನುಡಿ, ನೆಲ, ಜಲ, ಭಾಷೆ ಹಾಗೂ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತನ್ನದೇ ವ್ಯಾಪ್ತಿಯಲ್ಲಿ ಹೋರಾಟ ನಡೆಸುತ್ತಿದ್ದು ಸಾಗಬೇಕಾದ ದಾರಿ ಇನ್ನೂ ಬಹಳ ಇದೆ, ಆದರೆ ಕೆಲ ವರ್ಷಗಳ ಹಿಂದೆ ನನ್ನ ಮೇಲೆ ಗುರುತರ ಆರೋಪಗಳು ಕೇಳಿ ಬಂದವು. 2017ರಲ್ಲಿ ನಗರದ ಶಿವಕುಮಾರ ಕುಕನೂರ ಮನೆಯಲ್ಲಿ ಖೋಟಾ ನೋಟುಗಳು, ನೋಟು ಮುದ್ರಣ ಯಂತ್ರ ಮತ್ತಿತರ ಸಾಮಗ್ರಿ ಸಿಕ್ಕಿದ್ದವು ಅಂದು ಶಿವಕುಮಾರ ಮನೆಯಲ್ಲಿ ಸಿಕ್ಕ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಈ ವ್ಯಕ್ರಿಯನ್ನು ಪೊಲೀಸ್ ಠಾಣೆಗೆ ಕರೆದು ಕೊಂಡು ಹೋದ ಸಂದರ್ಭದಲ್ಲಿ ಠಾಣೆಯ ಮುಂದೆ ಪ್ರತಿಭಟನೆ ದೊಡ್ಡ ಹೈ ಡ್ರಾಮಾ ನೆಡೆದಿರುತ್ತದೆ. ಅವಾಗ ದೊಡ್ಡ ಮಟ್ಟದ ಷಡ್ಯಂತ್ರ ಮಾಡಿ ಇವುಗಳನ್ನು ನಾನೇ ಇರಿಸಿದೆ ಎಂಬ ಗಂಭೀರ ಆರೋಪ ನನ್ನ ವಿರುದ್ಧ ಕೇಳಿ ಬಂತು. ನನ್ನ ವಿರುದ್ಧ ಪ್ರಕರಣವೂ ದಾಖಲಾಯಿತು. ಇನ್ನೊಂದು ಸಿಮ್ ಕಾರ್ಡ ಪ್ರಕರಣದಲ್ಲಿಯೂ ಆರೋಪ ಹೋರಿಸಲಾಗಿತ್ತು ಈ ಕುರಿತ ಸುದ್ದಿಗಳು ಮುದ್ರಣ.ಸುದ್ದಿ ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿಯೂ ದೊಡ ಮಟ್ಟದ ಸುದ್ದಿ ಹಾಗೂ ಚರ್ಚೆಯಾಗಿತ್ತು ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನ್ನ ಆತ್ಮಸಾಕ್ಷಿ ಹೇಳುತ್ತಿತ್ತು.ಅಲ್ಲದೇ ಈ ಆರೋಪಗಳಿಂದ ಮುಕ್ತನಾಗಿ ಹೊರಬಂದು, ಇದನ್ನು ಜಿಲ್ಲೆಯ ಜನರ ಮುಂದಿಡಬೇಕು ಎಂದು ನಿರ್ಧರಿಸಿದೆ. ನನ್ನ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಸಂಬಂಧಿಸಿದಂತೆ ನಾನು ಸತತವಾಗಿ ಕಾನೂನು ಹೋರಾಟ ಮಾಡಿದೆ. ಧಾರವಾಡದಲ್ಲಿರುವ ಹೈಕೋರ್ಟ್ ಪೀಠದಲ್ಲಿಯೂ ಹೋರಾಟ ನಡೆಸಿದೆ. ಕೊನೆಗೆ ನನ್ನನ್ನು ಆರೋಪ ಮುಕ್ತನನ್ನಾಗಿ ಮಾಡಿ ಇದೊಂದು ಸುಳ್ಳು ಪ್ರಕರಣ ಅಂತ ಹೈಕೋರ್ಟ್ ಜ.7ರಂದು ತೀರ್ು ನೀಡಿದೆ ಎಂದು ವಿವರಿಸಿದರು. ನನ್ನ ಪರವಾಗಿ ಹೈಕೋರ್ಟ್ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ರವರು ವಾದ ಮಂಡಿಸಿದರು. ಹಾಗೂ ಎಮ್.ಎಸ್ ಹಳ್ಳಿಕೇರಿ ವಕಾಲತ್ತು ಹಾಕಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಿಮ್ ಕಾರ್ಡ್ಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣವೂ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಕೂಡ ಕೊಪ್ಪಳ ಸಿ.ಜೆ.ಎಮ್ ನ್ಯಾಯಾಲಯ ನನ್ನನ್ನು ಆರೋಪ ಮುಕ್ತ ಮಾಡಿದೆ. ಈ ಎರಡೂ ಪ್ರಕರಣಗಳಲ್ಲಿ ನನಗೆ ನ್ಯಾಯ ಸಿಕ್ಕಿದೆ. ಇದು ಸತ್ಯಕ್ಕೆ ಸಿಕ್ಕ ಜಯ ಎಂದು ಮಾಹಿತಿ ನೀಡಿದರು ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ನಿಮ್ಮ ಮೂಲಕ ಜಿಲ್ಲೆಯ ಜನತೆಗೆ ತಿಳಿಸಲು ಬಯಸುತ್ತೇನೆ. ಇನ್ಮುಂದೆ ಇಂತಹ ಯಾವುದೇ ಸುಳ್ಳು ಪ್ರಕರಣಗಳಿಗೆ ಹೆದರುವುದಿಲ್ಲ, ಸತ್ಯಕ್ಕೆ ಜಯ ಸಿಕ್ಕಿದೆ. ಈ ಜಯಕ್ಕೆ ಕಾರಣೀಭೂತರಾದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯ ಸಂಚಾಲಕ ಹಾಗೂ ಕವಲೂರು ಟ್ರಸ್ಟಿನ ಅಧ್ಯಕ್ಷ ವಿಜಯಕುಮಾರ್ ಕವಲೂರ್ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು.