ಜೈನ ಸಮುದಾಯ ಮನವಿಯನ್ನು ಸರ್ಕಾರ ಜೊತೆ ಚರ್ಚೆ ನಡೆಸಲಾಗುವುದು: ರಾಜ್ಯಪಾಲ ಥಾವರಚಂದ ಗೆಲ್ಹೋಟ
ಕಾಗವಾಡ, 08 : ಜೈನ ಸಮ್ಮೇಳನ ಧಾರ್ಮಿಕ ದೃಷ್ಟಿಯಿಂದ, ಸಾಮಾಜಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ ಅತ್ಯಂತ ಮಹತ್ವ ಪೂರ್ಣವಾಗಿದೆ. ಈಗಾಗಲೇ ಎಲ್ಲರೂ ಸಮಾಜದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮಹಾರಾಜರು ಸಹ ಜೈನ ಸಮುದಾಯ ಬೇಡಿಕೆಗಳನ್ನು ಈಡೇರಿಸುವಂತೆ ನನಗೆ ಮನವಿ ಪತ್ರವನ್ನು ನೀಡಿದ್ದಾರೆ. ಈ ಮನವಿಯ ಕುರಿತು ಗಂಭೀರವಾಗಿ ಚಿಂತನೆ ನಡೆಸಿ, ಸರ್ಕಾರದೊಂದಿಗೆ ಚರ್ಚಿಸಿ ಈ ಸಮಸ್ಯೆಗಳ ಪರಿಹಾರಕ್ಕೆ ನಾನು ಸಂಪೂರ್ಣ ಪ್ರಯತ್ನ ಮಾಡುತ್ತೇನೆ ನಿಮಗೆಲ್ಲಾ ಭರವಸೆ ನಿಡುತ್ತೇನೆ ಎಂದು ರಾಜ್ಯಪಾಲರಾದ ಥಾವರ ಚಂದ ಗೆಹ್ಲೋಟ್ ಹೇಳಿದರು.
ಅವರು ರವಿವಾರ ದಿ. 08 ರಂದು ತಾಲೂಕಿನ ಐನಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಭಾರತ ಬಹಳಷ್ಟು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಬಹುಭಾಷಿಕರ ದೇಶವಾಗಿದೆ. ಇಲ್ಲಿ ವಿವಿಧ ಧರ್ಮಗಳು ಹಾಗೂ ಸಂಪ್ರದಾಯಗಳ ಅಸ್ತಿತ್ವವಿದೆ. ಈ ಜೈನ ಧರ್ಮ ವಿವಿಧತೆಯ ಮಹತ್ವ ಪೂರ್ಣ ಅಂಗವಾಗಿದೆ. ಇದರ ಪರಂಪರೆ, ಸಿದ್ದಾಂತ ಹಾಗೂ ಜೀವನ ದರ್ಶನಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಜೈನ ಧರ್ಮದ ಅನುಯಾಯಿಗಳು ಕಾಲಕಾಲಕ್ಕೆ ವಿಭಿನ್ನ ಸಮ್ಮೇಳನಗಳನ್ನು, ಧರ್ಮಸಭೆ, ಸಮಾರಂಭಗಳ ಮೂಲಕ ಅವರ ವಿಚಾರಗಳನ್ನು ಪ್ರಸ್ತುತ ಪಡಿಸುತ್ತಾರೆ. ಇದೇ ರೀತಿಯ ಯಶಸ್ವಿ ಸಮಾರಂಭವನ್ನು ಇಲ್ಲಿಯೂ ಆಯೋಜನೆ ಮಾಡಿದ್ದಾರೆ. ಜೈನ ಧರ್ಮ ಯಾವಾಗಲೂ ಸೇವೆಗೆ ಮೊದಲ ಆಧ್ಯತೆ ನೀಡಿದೆ ಎಂದರು.
ಈ ಧರ್ಮಗಳು ನೂರಾರು ವರ್ಷಗಳಿಂದಲೂ ಪುರಾತನವಾಗಿವೆ. ಎರಡೂ ಧರ್ಮಗಳು ಆತ್ಮ ಶುದ್ಧಿ, ನೈತಿಕತೆ ಹಾಗೂ ಮೋಕ್ಷದೆಡೆಗೆ ಪ್ರೇರಣೆ ನೀಡುತ್ತವೆ. ಸಮಾಜವನ್ನು ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ಸಾಗುವಂತೆ ತಿಳಿವಳಿಕೆ ಮೂಡಿಸುತ್ತದೆ. ಜೈನ ಧರ್ಮ ಪ್ರಾಚೀನ ಪರಂಪರೆಯಿಂದ ಬಂದಂತಹ ಧರ್ಮವಾಗಿದೆ. ಇದನ್ನು ಭಗವಾನ್ ವೃಷಭದೇವ ಹಾಗೂ ಅವರ ನಂತರದ ತೀರ್ಥಂಕರರು ಮುಂದಕ್ಕೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ ಎಂದರು. ಸರ್ಕಾರದಿಂದ ನಾವು ಸಾಮಾಜಿಕ ಸಮೃದ್ಧತೆಗಾಗಿ ಶ್ರಮಿಸೋಣ ಹಾಗೂ ನಿಮ್ಮ ಎಲ್ಲ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸೋಣ. ಇಂದು ಇಡೀ ವಿಶ್ವ ಆತ್ಮಕಲ್ಯಾಣ, ಆಂತರಿಕ ಶಾಂತಿ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗಾಗಿ ಭಾರತದತ್ತ ತಿರುಗಿ ನೋಡುತ್ತಿದೆ ಎಂದು ತಿಳಿಸಿದರು ನಂತರ ರಾಷ್ಟ್ರ ಸಂತ ಗುಣಧರನಂದಿ ಮಹಾರಾಜರು ಮಾತನಾಡಿ, ಜೈನ ಸಮುದಾಯ ಬೇಡಿಕೆಗಳನ್ನು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ, ಇದುವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲಾ ಇವತ್ತು ಈ ಸಮಾವೇಶದ ಮಾಡಲಾಗಿದೆ. ನಾವು ನಿಮಗೆ ಮತ ನಿಡಿದ್ದೇವೆ ನೀವು ನಮಗೆ ಉಪಕಾರ ಮಾಡಿ, ನಮ್ಮ ಮಠಗಳಿಗೆ ಅನುದಾನ ಕೊಡಬೇಡಿ, ನಮ್ಮ ಜೈನ ಸಮುದಾಯ ಮಹಿಳಿಯರಿಗೆ ಸರ್ಕಾರ ವತಿಯಿಂದ ಶಿಖರಜೀ ಯಾತ್ರೆ ಹೊಗುದಕ್ಕೆ ಯೋಜನೆ ಮಾಡಿ, ಜೈನ ಸಮುದಾಯಕ್ಕೆ ನಿಗಮ ಮಂಡಳಿ ರಚನೆ ಜೊತೆಗೆ ಪ್ರಮುಖ ಏಳು ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಗಿದೆ ಎಂದರು, ಒಂದು ವೇಳೆ ನಮ್ಮ ಮನವಿಗೆ ಸರ್ಕಾರ ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡದಿದ್ದರೆ ಇನ್ನೂ ಹನ್ನೆರಡು ವರ್ಷದಲ್ಲಿ ಸಲ್ಲೇಖನ ವೃತವನ್ನು ಸ್ವೀಕರಿಸಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.