ಎಫ್.ಎಂ.ಜಾಮದಾರ ನಿವೃತ್ತಿ ನಂತರ ತುಕ್ಕು ಹಿಡಿದ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ
ವಿಜಯಪುರ, 06 : ಸಾಮಾಜಿಕ ಸಮಾನತೆಯ ಕನಸುಕಂಡ ಕ್ರಾಂತಿಕಾರಿ ಮನಸ್ಸುಳ್ಳ 12ನೇ ಶತಮಾನದ ಮಹಾಮಾವತಾವಾದಿ ವಿಶ್ವಯರು ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮ ಹಾಗೂ ಬಸವಣ್ಣನವರು ತಂದೆ ಊರಾದ ಬಸವನ ಬಾಗೇವಾಡಿ ಬಸವ ಜನ್ಮಸ್ಥಳ ಇಂಗಳೇಶ್ವರ ಸೇರಿದಂತೆ ಇನ್ನು ಉಳಿದ ಶರಣರು ಜನಿಸಿದ ಗ್ರಾಮಗಳನ್ನು ಅಭಿವೃದ್ಧಿಪಡಿಸಿ ಶರಣರ ಕುರುಹುಗಳನ್ನು ಉಳಿಸಲು ಹಿಂದಿನ ಸರ್ಕಾರದ ಮುಖ್ಯಮಂತ್ರಿಯನ್ನು ಜೆ.ಎಚ್. ಪಟೇಲ ಇವರು ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ರಚನೆ ಅದರಲ್ಲಿ ಇಂಗಳೇಶ್ವರ ಬಸವನ ಬಾಗೇವಾಡಿ ಸೇರಿದಂತೆ ಇನ್ನು ಹಲವಾರು ಕ್ಷೇತ್ರಗಳನ್ನು ಕೂಡಲ ಸಂಗಮದ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಸೇರಿಸಿ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಹಿಂದಿನ ಐ.ಎ.ಎಸ್. ದಕ್ಷ ಅಧಿಕಾರಿ ಡಾ. ಎಸ್.ಎಂ.ಜಾಮದಾರ ಇವರನ್ನು ವಿಶೇಷ ಅಧಿಕಾರಿಯಾಗಿ ಸರ್ಕಾರ ನೇಮಕ ಮಾಡಿತ್ತು. ಅವರು ಜವಾಬ್ದಾರಿ ತೆಗೆದುಕೊಂಡ ನಂತರ ಕೂಡಲ ಸಂಗಮ ಹಾಗೂ ಬಸವನ ಬಾಗೇವಾಡಿ ಸ್ಮಾರಕ ನಿರ್ಮಿಸಿದರು. ಇದರಿಂದ ಶರಣ ಕ್ಷೇತ್ರಗಳ ಚಿತ್ರಣವೇ ಬದಲಾಯಿತು ಸಾವಿರಾರು ಪ್ರವಾಸಿಗರು ದಿನ ನಿತ್ಯ ಕೂಡಲ ಸಂಗಮ ಹಾಗೂ ಬಸವನ ಬಾಗೇವಾಡಿಗೆ ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಿದ್ದರು. ಎಸ್.ಎಂ.ಜಾಮದಾರ ಅವರು ಯಾವಾಗ ನಿವೃತ್ತಿ ಹೊಂದಿದರೋ ಆವಾಗಿನಿಂದ ಕೂಡಲ ಸಂಗಮ ಕ್ಷೇತ್ರ ಅನಾಥವಾದಂತೆ ಬಾಸವಾಗುತ್ತಿದೆ. ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತರ ಕಛೇರಿ ಅಕ್ಷಶಃ ಅನಾಥವಾದಂತಾಗಿದೆ. ಡಾ.ಎಸ್.ಎಂ.ಜಾಮದಾರ ಇವರು ಇದ್ದಾಗಿನ ಕಚೇರಿಯ ಕಾರ್ಯವೈಖರಿ ಈಗ ಸಂಪೂರ್ಣ ಕಳಗುಂದಿ ತುಕ್ಕು ಹಿಡಿದಿರುವುದು ದುರಂತ. ಕಛೇರಿಯಲ್ಲಿ ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಜಾಮದಾರ ಅವರು ವಯೋ ನಿವೃತ್ತಿ ನಂತರ ಕೆ.ಎಸ್.ಅಧಿಕಾರಿಯಾದ ಮಾದೇವ ಮುರುಗಿಯವರನ್ನು ಕೂಡಲ ಸಂಗಮ ಅಭಿವೃದ್ಧಿ ಮಂಡಳಿಗೆ ಪ್ರಭಾರಿ ಆಯುಕ್ತರನ್ನಾಗಿ ಸರ್ಕಾರ ನೇಮಿಸಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಬಸವನ ಬಾಗೇವಾಡಿಯ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚಿಸಿ ಅಧಿಸೂಚನೆ ಹೊರಡಿಸಿದೆ. ನೂತನ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಇಂಗಳೇಶ್ವರ ಮಹಾದೇವ ಮುರಗಿಯವರನ್ನೇ ಪ್ರಭಾರಿ ಆಯುಕ್ತರನ್ನಾಗಿ ನೇಮಕ ಮಾಡಿದ್ದಾರೆ. ಆದರೆ ಆಯುಕ್ತರು ಅಧಿಕಾರ ಸ್ವೀಕರಿಸಾಗಿನಿಂದ ಕೂಡಲ ಸಂಗಮಕ್ಕಾಗಿ ಬಸವನಬಾಗೇವಾಡಿಗಾಗಲಿ ಇಂಗಳೇಶ್ವರ ಗ್ರಾಮಕ್ಕಾಗಲಿ ಇತ್ತ ಸುಳಿದಿಲ್ಲ. ಕೂಡಲ ಸಂಗಮಕ್ಕು ಕೂಡ ಹಗಲು ಹೊತ್ತಿನಲ್ಲಿ ಕಛೇರಿಗೆ ಬಂದ ಉದಾಹರಣೆ ಇಲ್ಲ ಎಂದು ಉದಯಕಾಲ ಪತ್ರಿಕೆಯಲ್ಲಿ ಕೂಡ ವರದಿಯಾಗಿದೆ. ಈ ಕುರಿತು ಕ್ಷೇತ್ರಗಳ ಜನರು ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ದುಡಿಯುತ್ತಿರುವ ಹೊರ ಗುತ್ತಿಗೆಯ ಕಾರ್ಮಿಕರ ಮೇಲೆ ಜಾತಿ ವಿಷಯ ತರುತ್ತಿದ್ದಾರೆಂದು ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಅಳಲಾಗಿದೆ ಎಂದು ಪತ್ರಿಕೆಯಲ್ಲಿಯೂ ವರದಿಯಾಗಿದೆ. ಇದರಿಂದ ಕಾರ್ಮಿಕರು ಸಂಪೂರ್ಣ ಹತಾಶರಾಗಿದ್ದಾರೆ. ಕಾರ್ಮಿಕರಿಗೆ ಆಯುಕ್ತರು ಕಿರಿಕಿರಿ ಮಾಡುತ್ತಿರುವುದರಿಂದ ಕೆಲಸಗಾರರು ಕೆಲಸ ಬಿಟ್ಟು ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಕಾರ್ಮಿಕರು ಕೆಲಸ ಬಿಟ್ಟು ಹೋದರೆ ಕೂಡಲ ಸಂಗಮ ಪ್ರಾಧಿಕಾರ ಮತ್ತಷ್ಟು ಹದಗೆಟ್ಟಿ ಹೋಗುತ್ತದೆ. ಕೂಡಲ ಸಂಗಮ ಪ್ರಾಧಿಕಾರದ ವ್ಯವಸ್ಥೆ ಸಂಪೂರ್ಣ ಹಾಳಾಗಿ ಸ್ಮಾರಕಗಳ ಬೀಗ ಹಾಕುವುದಕ್ಕಿಂತ ಮುಂಚೆ ಸರ್ಕಾರ ಎಚ್ಚೆತ್ತುಕೊಂಡು ಕೆ.ಎಸ್.ಅಧಿಕಾರಿ ಬದಲು ಜಿಲ್ಲಾಧಿಕಾರಿಯನ್ನು ಆಯುಕ್ತರನ್ನಾಗಿ ನೇಮಕ ಮಾಡಬೇಕು. ಅದರಂತೆ ಬಸವನ ಬಾಗೇವಾಡಿ ನೂತನ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ಪ್ರತ್ಯೇಕವಾಗಿ ಆಯುಕ್ತರನ್ನಾಗಿ ನೇಮಕ ಮಾಡಬೇಕು ಹಾಗೂ ಈಗಿರುವ ಪ್ರಭಾರಿ ಆಯುಕ್ತರನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ರೈತ ಮುಖಂಡ ಅರವಿಂದ ಕುಲಕರ್ಣಿ ಪತ್ರಿಕಾ ಪ್ರಕಟಣೆಯಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.